ಆ್ಯಪ್ನಗರ

ಬಾಯ್‌ಫ್ರೆಂಡ್‌ಗಳ ಮಾರಾಮಾರಿ: ದುಬೈಗೆ ಹಾರಿದ ನಟಿ ರಾಗಿಣಿ

ನಟಿ ರಾಗಿಣಿ ಸ್ನೇಹಿತರಾದ ರವಿ ಮತ್ತು ಶಿವಪ್ರಕಾಶ್‌ ಹಲ್ಲೆ ಪ್ರಕರಣ ಕಾವು ಪಡೆಯುತ್ತಿದ್ದಂತೆಯೆ ರಾತ್ರೋರಾತ್ರಿ ದುಬೈಗೆ ಹಾರಿದ್ದಾರೆ ರಾಗಿಣಿ.

Vijaya Karnataka Web 18 Mar 2019, 11:45 am
ನಟಿ ರಾಗಿಣಿ ದ್ವಿವೇದಿ ಅವರ ಹಳೆ ಮತ್ತು ಹೊಸ ಬಾಯ್‍ಫ್ರೆಂಡ್‌ಗಳ ನಡುವಿನ ಮಾರಾಮಾರಿ ಹೊಸ ತಿರುವು ಪಡೆದುಕೊಂಡಿದೆ. ತನ್ನ ಸ್ನೇಹಿತನ ಮೇಲಿನ ಹಲ್ಲೆ ಪ್ರಕರಣ ಬಹಿರಂಗವಾಗುತ್ತಿದ್ದಂತೆಯೇ ನಟಿ ರಾಗಿಣಿ ರಾತ್ರೋರಾತ್ರಿ ದುಬೈಗೆ ಹಾರಿದ್ದಾರೆ. ಈ ವಿಷಯವನ್ನು ಸ್ವತಃ ಅವರ ಮನೆಯ ಭದ್ರತಾ ಸಿಬ್ಬಂದಿಯೇ ಮಾಧ್ಯಮಗಳಿಗೆ ತಿಳಿಸಿದ್ದಾರೆ.
Vijaya Karnataka Web ragini


ಬೆಳಗ್ಗೆಯಿಂದಲೇ ರಾಗಿಣಿ ಅವರ ಪ್ರತಿಕ್ರಿಯೆ ಪಡೆಯಲು ವಿಜಯಕರ್ನಾಟಕ ಸಂಪರ್ಕಿಸಿತು. ಹತ್ತಾರು ಬಾರಿ ಕರೆ ಮಾಡಿದರೂ, ಅವರು ಸ್ವೀಕರಿಸಲಿಲ್ಲ.

ಗೆಳೆತನದ ವಿಚಾರವಾಗಿ ರಾಗಿಣಿ ಅವರ ಮಾಜಿ ಗೆಳೆಯ ಶಿವಪ್ರಕಾಶ್‌ ಮತ್ತು ಹಾಲಿ ಗೆಳೆಯ ರವಿಶಂಕರ್ ಶುಕ್ರವಾರ ರಾತ್ರಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಬಡಿದಾಡಿಕೊಂಡಿದ್ದರು. ಹಾಲಿ ಗೆಳೆಯ ರವಿಶಂಕರ್ ನೀಡಿರುವ ದೂರಿನ ಮೇರೆಗೆ 506 (ಜೀವ ಬೆದರಿಕೆ), 504 (ಹಲ್ಲೆ) ಆರೋಪದಡಿ ಅಶೋಕನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ ಕೇಂದ್ರ ವಿಭಾಗದ ಡಿಸಿಪಿ ಡಿ.ದೇವರಾಜ್‌.

ಮಾಧ್ಯಮಗಳಲ್ಲಿ ಈ ಸುದ್ದಿ ಶನಿವಾರ ರಾತ್ರಿ ಬಿತ್ತರವಾಗುತ್ತಿದ್ದಂತೆಯೇ ರಾಗಿಣಿ ತಮ್ಮ ಮೊಬೈಲ್‌ ಫೋನ್‌ ಸ್ವಿಚ್ಡ್‌ ಆಫ್‌ ಮಾಡಿದ್ದಾರೆ. ರವಿವಾರ ಬೆಳಗ್ಗೆ ಅವರ ಫೋನ್‌ ಆನ್‌ ಆಗಿದ್ದರೂ ಒಳ ಬರುವ ಕರೆಗಳನ್ನು ಅವರು ಸ್ವೀಕರಿಸುತ್ತಿಲ್ಲ.

ಬೆಂಗಳೂರಿನಲ್ಲಿ ರಾಗಿಣಿ ಎರಡು ಮನೆ ಹೊಂದಿದ್ದಾರೆ. ಒಂದು ಮನೆಯಲ್ಲಿ ಅವರ ತಂದೆ ತಾಯಿ ವಾಸವಾಗಿದ್ದರೆ, ಮತ್ತೊಂದು ಮನೆ ಸಿನಿಮಾ ಸಂಬಂಧಿ ಚಟುವಟಿಕೆಗೆ ಮೀಸಲಿದೆ. ರಾಗಿಣಿ ಅವರ ಆಪ್ತರ ಪ್ರಕಾರ ಅವರ ತಾಯಿ ಕೂಡ ದುಬೈಗೆ ಹಾರಿದ್ದಾರೆ ಎನ್ನಲಾಗುತ್ತಿದೆ.

ಆದರೂ, ಈ ಘಟನೆ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಆರೋಪಿ ಶಿವ ಪ್ರಸಾದ್‌ ರಾಗಿಣಿ ಅಂದರೆ, ನಟಿ ರಾಗಿಣಿ ಅಲ್ಲ ಎಂದು ಹೇಳಿಕೆ ನೀಡಿದ್ದಾರೆ. ಗಲಾಟೆಯೂ ನಡೆದಿಲ್ಲ. ಯಾರ ಮೇಲೂ ದೂರು ದಾಖಲಾಗಿಲ್ಲ ಎಂದಿದ್ದರು. ಈ ಕುರಿತು ಮೂವರು ಸೇರಿ ಭಾನುವಾರ ಪತ್ರಿಕಾಗೋಷ್ಠಿ ಮಾಡುವುದಾಗಿಯೂ ತಿಳಿಸಿದ್ದರು.

ಈ ಬಗ್ಗೆ ಮಾತನಾಡಿರುವ ರವಿಶಂಕರ್, "ಕೆಲವು ಸ್ನೇಹಿತರ ಜತೆಗೆ ರಾಗಿಣಿಯೊಂದಿಗೆ ಊಟಕ್ಕೆ ಹೋಗಿದ್ದೆ. ಆಗ ಸಮಯ ಸುಮಾರು 11.45 ಗಂಟೆಯಾಗಿತ್ತು. ನನ್ನ ಬಳಿ ಬಂದ ಶಿವಪ್ರಕಾಶ್‌ ಎಂಬುವವರು ಇದ್ದಕ್ಕಿದ್ದಂತೆ ಜಗಳ ಶುರು ಮಾಡಿದ. ರಾಗಿಣಿ ಜತೆ ನೀನ್‌ ಯಾಕೆ ಬಂದಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ. ನನಗೆ ಬಿಯರ್‌ ಬಾಟಲ್‌ನಿಂದ ಹೊಡೆದು ಮುಖಕ್ಕೆ ಗುದ್ದಿದ" ಎಂದು ದೂರಿನಲ್ಲಿ ಹೇಳಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ರಾಗಿಣಿ ಮತ್ತು ನಾನು ಗೆಳೆಯರು. ನಮ್ಮಿಬ್ಬರ ನಡುವೆ ರವಿಶಂಕರ್ ಬಂದ. ರಾಗಿಣಿಗೆ ಕಾರು ಸೇರಿದಂತೆ ಸಾಕಷ್ಟು ಬೆಲೆಬಾಳುವ ಗಿಫ್ಟ್‌ಗಳನ್ನೂ ಕೊಡಿಸಿದ್ದೇನೆ. ಆದರೆ ರಾಗಿಣಿ ನನ್ನನ್ನು ಕಡೆಗಣೆಸಿದರು. ರವಿಶಂಕರ್‌ಗೆ ಆತ್ಮೀಯಳಾದಳು ಎಂದಿದ್ದಾರೆ ಶಿವಪ್ರಕಾಶ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌