ಆ್ಯಪ್ನಗರ

ಬೆಂಗಳೂರಿನಲ್ಲಿ ನಟ ರಾಹುಲ್ ದೇವ್‌ಗೆ ಕೆಟ್ಟ ಅನುಭವ

ಬಾಲಿವುಡ್ ನಟ ರಾಹುಲ್ ದೇವ್ ಗೊತ್ತಲ್ಲವೇ? ಕನ್ನಡದ ಹಲವಾರು ಚಿತ್ರಗಳಲ್ಲಿ ಬಣ್ಣಹಚ್ಚಿದ್ದಾರೆ. ಬೊಂಬಾಟ್, ಯೋಧ, ಅಭಿಮನ್ಯು, ಓಂಕಾರ ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು, ತಮಿಳು, ಹಿಂದಿಯಲ್ಲಿ ವಿಲನ್ ಆಗಿ ಮಿಂಚಿದವರು.

Bangalore Mirror Bureau 31 May 2017, 8:19 pm
ಬಾಲಿವುಡ್ ನಟ ರಾಹುಲ್ ದೇವ್ ಗೊತ್ತಲ್ಲವೇ? ಕನ್ನಡದ ಹಲವಾರು ಚಿತ್ರಗಳಲ್ಲಿ ಬಣ್ಣಹಚ್ಚಿದ್ದಾರೆ. ಬೊಂಬಾಟ್, ಯೋಧ, ಅಭಿಮನ್ಯು, ಓಂಕಾರ ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು, ತಮಿಳು, ಹಿಂದಿಯಲ್ಲಿ ವಿಲನ್ ಆಗಿ ಮಿಂಚಿದವರು.
Vijaya Karnataka Web rahul dev had a harrowing experience with prolonged power outages
ಬೆಂಗಳೂರಿನಲ್ಲಿ ನಟ ರಾಹುಲ್ ದೇವ್‌ಗೆ ಕೆಟ್ಟ ಅನುಭವ


ಈ ನಟನಿಗೆ ಬೆಂಗಳೂರಿನ ಯಲಹಂಕದಲ್ಲಿ ಆತ್ಮೀಯರಿದ್ದಾರೆ. ಕಳೆದ ವಾರ ಅವರು ಬೆಂಗಳೂರಿಗೆ ಬಂದಿದ್ದರು. ಹಾಯಾಗಿ ಒಂದೆರಡು ದಿನ ಇದ್ದು ಹೋಗುವ ಯೋಚನೆ ಅವರದು. ಆದರೆ ಅವರ ಮೂಡನ್ನೆಲ್ಲಾ ಹಾಳು ಮಾಡಿದೆ ಬೆಸ್ಕಾಂ.

ಪವರ್ ಕಟ್ ಒಂದೆರಡು ಗಂಟೆಯಾದರೆ ಪರವಾಗಿಲ್ಲ. ಅದೂ 5 ರಿಂದ 8 ಗಂಟೆ ಪವರ್ ಇಲ್ಲ ಅಂದ್ರೆ ಹೇಗೆ? ಅವರು ಕಾದಷ್ಟು ಕಾದು ಕಡೆಗೆ ಬೆಸ್ಕಾಂಗೆ ಫೋನ್ ಮಾಡಿದರೆ ಫೋನ್ ಎತ್ತೋರೇ ಇಲ್ಲ. ಸರಿ ತಾವೇ ಬೆಸ್ಕಾಂ ಕಚೇರಿ ಹುಡುಕಿಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ನರಪಿಳ್ಳೆಯೂ ಇಲ್ಲ. ವಿಧಿಯಿಲ್ಲದೆ ವಾಪಸ್ಸಾಗಿ ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.

'ಮೇ.23ರಂದು ನಾನು ಬೆಂಗಳೂರಿಗೆ ಬಂದಿದ್ದೆ. ಆಗ ದಿನಕ್ಕೆ 5 ರಿಂದ 8 ಗಂಟೆ ಪವರ್ ಕಟ್. ಒಂದು ದಿನವೆಲ್ಲಾ ಅದೇ ರೀತಿ ಕಳೆಯಿತು. ಕಡೆಗೆ ಬೇಸತ್ತು ಬೆಸ್ಕಾಂ ಅಧಿಕಾರಿಗಳನ್ನೇ ಭೇಟಿಯಾಗೋಣ ಎಂದು ಹೊರಟೆ. ಮೊದಲು ರಾಂಗ್ ಪವರ್ ಸ್ಟೇಷನ್ ಬಳಿ ಹೋದೆ. ಇದಲ್ಲ ಬೇರೆ ಸಬ್-ಸ್ಟೇಷನ್ ಬಳಿ ಹೋಗಿ ಎಂದರು. ಸಹಕಾರನಗರದಲ್ಲಿದ್ದ ಆ ಸಬ್ ಸ್ಟೇಷನ್ ಹುಡುಕಲು ಹರಸಾಹಸ ಪಡಬೇಕಾಯಿತು. ಹೇಗೋ ಹುಡುಕಿದರೆ ಅಲ್ಲಿ ಒಬ್ಬರೂ ಇರಲಿಲ್ಲ' ಎಂದಿದ್ದಾರೆ.

ಕಡೆಗೆ ಆವರನ್ನು ಗುರುತಿಸಿದ ಒಬ್ಬರು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ) ನಾಯಕ್ ಬಳಿ ಕರೆದೊಯ್ದರಂತೆ. ಅಲ್ಲೂ ಅವರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಅದೂ ಯಲಹಂಕದ ಜ್ಯೂಡಿಷಿಯಲ್ ಲೇಔಟ್‌ನಲ್ಲೇ ಹೀಗಾದರೆ ಇನ್ನು ಬೇರೆ ಕಡೆ ಹೇಗೋ ಏನೋ ಎಂದು ಅವರು ತಮಗಾದ ಕೆಟ್ಟ ಅನುಭವ ತೋಡಿಕೊಂಡಿದ್ದಾರೆ ವಿಜಯ ಕರ್ನಾಟಕದ ಸೋದರ ಪತ್ರಿಕೆ ಬೆಂಗಳೂರು ಮಿರರ್ ಜತೆಗೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌