ಆ್ಯಪ್ನಗರ

ಡಾರ್ಕ್ ಶೇಡ್ ಚಿತ್ರಕ್ಕೆ ಕೈಹಾಕಿದ ರಾಜ್ ಬಿ ಶೆಟ್ಟಿ

’ಒಂದು ಮೊಟ್ಟೆಯ ಕಥೆ’ ಸಕ್ಸಸ್ ಬಳಿಕ ರಾಜ್ ಬಿ ಶೆಟ್ಟಿ ಇನ್ನೊಂದು ಕಮರ್ಷಿಯಲ್ ಚಿತ್ರ ಕೈಗೆತ್ತಿಕೊಂಡಿದ್ದಾರೆ. ತಮ್ಮ ಹೊಸ ಚಿತ್ರಕ್ಕೆ ’ಗಾಂಧಿ’ ಎಂದು ಹೆಸರಿಟ್ಟಿದ್ದಾರೆ. ಎಲ್ಲರೂ ಹೊಸಬರೇ ಇರುವಂತಹ ಚಿತ್ರತಂಡ. ಮಣಿಪಾಲ್ ಕಮ್ಯುನಿಕೇಷನ್ ಸ್ಕೂಲ್‌ನಿಂದ ಈಗಷ್ಟೇ ಪದವಿ ಪಡೆದಿರುವ ರಾಹುಲ್ ಮೆನನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

TIMESOFINDIA.COM 23 Jun 2018, 3:07 pm
’ಒಂದು ಮೊಟ್ಟೆಯ ಕಥೆ’ ಸಕ್ಸಸ್ ಬಳಿಕ ರಾಜ್ ಬಿ ಶೆಟ್ಟಿ ಇನ್ನೊಂದು ಕಮರ್ಷಿಯಲ್ ಚಿತ್ರ ಕೈಗೆತ್ತಿಕೊಂಡಿದ್ದಾರೆ. ತಮ್ಮ ಹೊಸ ಚಿತ್ರಕ್ಕೆ ’ಗಾಂಧಿ’ ಎಂದು ಹೆಸರಿಟ್ಟಿದ್ದಾರೆ. ಎಲ್ಲರೂ ಹೊಸಬರೇ ಇರುವಂತಹ ಚಿತ್ರತಂಡ. ಮಣಿಪಾಲ್ ಕಮ್ಯುನಿಕೇಷನ್ ಸ್ಕೂಲ್‌ನಿಂದ ಈಗಷ್ಟೇ ಪದವಿ ಪಡೆದಿರುವ ರಾಹುಲ್ ಮೆನನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
Vijaya Karnataka Web raaj-b-shetty


ಚಿತ್ರದ ತಾಂತ್ರಿಕ ಮತ್ತು ಕಲಾವಿದರನ್ನೂ ಹೊಸಬರನ್ನೇ ಆಯ್ಕೆ ಮಾಡಿಕೊಂಡಿರುವುದು ವಿಶೇಷ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಹೊಸಬರಲ್ಲಿ ಒಳ್ಳೆಯ ಐಡಿಯಾಗಳಿರುತ್ತವೆ. ಆಗಷ್ಟೇ ಪತ್ರಿಕೋದ್ಯಮ ಓದಿ ಬಂದಿರುವ ಯುವಜನರಲ್ಲಿ ಸಾಕಷ್ಟು ಉತ್ಸಾಹ, ಹುರುಪು, ಒಳ್ಳೊಳ್ಳೆ ಐಡಿಯಾಗಳಿರುತ್ತವೆ. ಮುಖ್ಯವಾಗಿ ವೃತ್ತಿಯ ಕಡೆಗೆ ತುಂಬಾ ಒಲವಿರುತ್ತದೆ. ಅವರಲ್ಲಿನ ಉತ್ಸಾಹಕ್ಕೆ ಇನ್ಯಾವುದೂ ಸರಿಸಾಟಿ ಇರಲ್ಲ ಎನ್ನುತ್ತಾರೆ ರಾಜ್ ಶೆಟ್ಟಿ.

ವಿಶೇಷ ಎಂದರೆ ರಾಜ್ ಶೆಟ್ಟಿ ತಂಡದಲ್ಲಿರುವವರೆಲ್ಲಾ 25 ವರ್ಷಗಳ ಆಜುಬಾಜಿನಲ್ಲಿರುವವರು. ಈ ಚಿತ್ರದ ಸಂಗೀತ ನಿರ್ದೇಶಕರ ವಯಸ್ಸು 17 ವರ್ಷಗಳು. "ನನಗೆ 20ರಲ್ಲಿ ಸಿನಿಮಾ ಅಂದರೇನು ಎಂದೇ ಗೊತ್ತಿರಲಿಲ್ಲ. ಆದರೆ ರಾಹುಲ್ ಅದ್ಭುತ ಕಥೆ, ಚಿತ್ರಕಥೆಯೊಂದಿಗೆ ಬಂದಿದ್ದರು. ಸ್ವಲ್ಪವೂ ಬೇಸರಿಸಿಕೊಳ್ಳದೆ ಕಥೆ ಹೇಳುತ್ತಿದ್ದ ರೀತಿ, ಅವರ ಉತ್ಸಾಹ ನನ್ನನ್ನು ಈ ಸಿನಿಮಾ ಮಾಡಲು ಪ್ರೇರೆಪಿಸಿತು" ಎನ್ನುತ್ತಾರೆ ರಾಜ್ ಬಿ ಶೆಟ್ಟಿ.

ಡಾರ್ಕ್ ಶೇಡ್ ಹೊಂದಿರುವ ಈ ಸಿನಿಮಾ ಬಹುತೇಕ ಚಿತ್ರೀಕರಣ ಮಣಿಪಾಲ್ ಮತ್ತು ಮಲ್ಪೆಯಲ್ಲೇ ನಡೆಯಲಿದೆ. ತನ್ನ ಗುರುತನ್ನು ಇಷ್ಟಪಡದ ಮತ್ತು ಸಂಪೂರ್ಣ ಹೊಸ ವ್ಯಕ್ತಿಯಾಗಬೇಕೆಂದು ಬಯಸುವ ವ್ಯಕ್ತಿಯೊಬ್ಬನ ಕಥೆ ಇದು ಎನ್ನುತ್ತಾರೆ ರಾಜ್ ಶೆಟ್ಟಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌