ಆ್ಯಪ್ನಗರ

ಇಸ್ಮಾರ್ಟ್‌ ಶಂಕರ್‌ನಲ್ಲಿ ಮಿಂಚಿದ ಕನ್ನಡದ ರಾಜ್‌ ದೀಪಕ್‌ ಶೆಟ್ಟಿ

ಇಸ್ಮಾರ್ಟ್‌ ಶಂಕರ್‌ ಸಿನಿಮಾದ ಮೂಲಕ ನಾನು ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದೇನೆ. ಮೊದಲ ಸಿನಿಮಾದಲ್ಲಿಉತ್ತಮ ಪಾತ್ರವನ್ನು ಪೂರಿ ಜಗನ್ನಾಥ್‌ ನೀಡಿದ್ದರು. ಈಗಾಗಲೇ ಸಿನಿಮಾ ನೋಡಿದ ಎಷ್ಟೋ ಮಂದಿ ಪಾತ್ರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ ರಾಜ್‌ ದೀಪಕ್‌ ಶೆಟ್ಟಿ.

Vijaya Karnataka 10 Aug 2019, 3:58 pm
ಭರ್ಜರಿ, ಪಂಚತಂತ್ರ ಸಿನಿಮಾಗಳಲ್ಲಿತಮ್ಮ ನಟನೆಯಿಂದ ಗಮನ ಸೆಳೆದಿದ್ದ ನಟ ರಾಜ್‌ ದೀಪಕ್‌ ಶೆಟ್ಟಿ ಇತ್ತೀಚೆಗೆ ತೆಲುಗಿನಲ್ಲಿ ಬಿಡುಗೆಯಾಗಿ ದೊಡ್ಡ ಹಿಟ್‌ ಆದ ಇಸ್ಮಾರ್ಟ್‌ ಶಂಕರ್‌ನಲ್ಲಿ ಮುಖ್ಯ ಖಳನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Vijaya Karnataka Web ismart-shankar


'ಸೋಷಿಯಲ್‌ ಮೀಡಿಯಾದಲ್ಲಿಇಸ್ಮಾರ್ಟ್‌ ಶಂಕರ್‌ ಸಿನಿಮಾಗೆ ಆಡಿಷನ್‌ ಇರುವುದಾಗಿ ಗೊತ್ತಾಯಿತು. ನಾನು ಹೈದ್ರಾಬಾದ್‌ಗೆ ಹೋಗಿ ಆಡಿಷನ್‌ ಕೊಟ್ಟು ಬಂದೆ. ಆಮೇಲೆ ನನ್ನ ಪ್ರೋಫೈಲ್‌ ಕೇಳಿದ್ರು ನಾನು ಇದುವರೆಗೂ ನಟಿಸಿರುವ ಅಷ್ಟು ಸಿನಿಮಾಗಳ ಮಾಹಿತಿಯನ್ನು ಅವರಿಗೆ ಕಳಿಸಿದೆ. ಅವರು ನೀವು ಈಗಾಗಲೇ ಫೇಮಸ್‌ ಇದ್ದೀರಾ ಎಂದು ಹೇಳಿ ನಾಲ್ಕು ದಿನ ಬರುವಂತಹ ಒಂದು ಪೊಲೀಸ್‌ ಇನ್‌ಸ್ಪೆಕ್ಟರ್‌ ರೋಲ್‌ ಕೊಟ್ಟಿದ್ದರು. ಆದರೆ ನನ್ನ ಪರ್ಫಾಮೆನ್ಸ್‌ ನೋಡಿ ನಿರ್ದೇಶಕ ಪೂರಿ ಜಗನ್ನಾಥ್‌ ನಿಮಗೆ ಮುಖ್ಯ ಖಳನ ರೋಲ್‌ ನೀಡುತ್ತೇನೆ ಮಾಡುತ್ತೀರಾ ಎಂದರು. ನಾನು ಓಕೆ ಹೇಳಿದೆ ಸುಮಾರು 12 ದಿನಗಳ ಕಾಲ ಇಸ್ಮಾರ್ಟ್‌ ಶಂಕರ್‌ ಸಿನಿಮಾದ ಶೂಟಿಂಗ್‌ನಲ್ಲಿಭಾಗವಹಿಸಿದ್ದೆ'ಎನ್ನುತ್ತಾರೆ ರಾಜ್‌ ದೀಪಕ್‌ ಶೆಟ್ಟಿ.

'ಇದು ನನ್ನ ಮೊದಲ ತೆಲುಗು ಸಿನಿಮಾವಾದ್ದರಿಂದ ನನಗೆ ಬಹಳ ನಿರೀಕ್ಷೆಗಳಿತ್ತು. ಅದರಂತೆ ಸಿನಿಮಾ ಸಹ ಮೂಡಿ ಬಂದಿದೆ. ಬಿಡುಗಡೆಯಾದ ಮೇಲೆ ಸಾಕಷ್ಟು ಮಂದಿ ನನಗೆ ಕರೆ ಮಾಡಿ ತೆಲುಗಿನಲ್ಲಿಮೊದಲ ಬಾರಿಗೆ ಒಳ್ಳೆ ರೋಲ್‌ ಮಾಡಿದ್ದೀರಾ ಎಂದು ಹೇಳಿದ್ದರು. ಈಗ ಸದ್ಯ ತಮಿಳಿನ ಒಂದು ಸಿನಿಮಾ, ಕನ್ನಡಲದಲ್ಲಿಭರಾಟೆ, ಕೋಟಿಗೊಬ್ಬ-3, ಫೈಟರ್‌, ಪೊಗರು ಸಿನಿಮಾಗಳಲ್ಲಿನಟಿಸುತ್ತಿದ್ದೇನೆ'ಎನ್ನುತ್ತಾರವರು.

ಪೂರಿ ಜಗನ್ನಾಥ್‌ ಅವರ ಜತೆ ಕೆಲಸ ಮಾಡಿದ್ದು ಒಂದು ಅನನ್ಯ ಅನುಭವ. ನಾನು ಹೊಸಬನಾದರೂ ಯಾವುದಾದರೂ ಸಲಹೆ ಕೊಟ್ಟರೆ ತುಂಬ ಸುಲಭವಾಗಿ ತೆಗೆದುಕೊಳ್ಳುತ್ತಿದ್ದರು. ಪ್ರೋತ್ಸಾಹ ನೀಡುತ್ತಿದ್ದರು ಎನ್ನುವುದು ರಾಜ್‌ ದೀಪಕ್‌ ಶೆಟ್ಟಿಯವರ ಮಾತಾಗಿದೆ. ಕನ್ನಡದ ಸಿನಿಮಾ ಜತೆಗೆ ತೆಲುಗಿನ ವೆಬ್‌ ಸೀರಿಸ್‌ನಲ್ಲಿಯೂ ಅವರು ನಟಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌