ಆ್ಯಪ್ನಗರ

ಸೌಂದರ್ಯಾ ರಜನಿಕಾಂತ್ ದಾಂಪತ್ಯ ಅಂತ್ಯ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯಾ ಅವರ ಏಳು ವರ್ಷಗಳ ದಾಂಪತ್ಯ ಜೀವನಕ್ಕೆ ಇಂದು ಅಂತ್ಯ ಕಂಡಿದ್ದು, ಇವರ ವಿಚ್ಛೇದನಕ್ಕೆ ಚೆನ್ನೈನ ಕೌಟುಂಬಿಕ ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ. ತನ್ನ ಪತಿ ಹಾಗೂ ಉದ್ಯಮಿ ಅಶ್ವಿನ್ ಜತೆಗಿನ ಭಿನ್ನಾಭಿಪ್ರಾಯಗಳ ಕಾರಣ ಇಬ್ಬರೂ ಪರಸ್ಪರ ಒಪ್ಪಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ಏಜೆನ್ಸೀಸ್ 4 Jul 2017, 10:57 pm
ಚೆನ್ನೈ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯಾ ಅವರ ಏಳು ವರ್ಷಗಳ ದಾಂಪತ್ಯ ಜೀವನಕ್ಕೆ ಇಂದು ಅಂತ್ಯ ಕಂಡಿದ್ದು, ಇವರ ವಿಚ್ಛೇದನಕ್ಕೆ ಚೆನ್ನೈನ ಕೌಟುಂಬಿಕ ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ. ತನ್ನ ಪತಿ ಹಾಗೂ ಉದ್ಯಮಿ ಅಶ್ವಿನ್ ಜತೆಗಿನ ಭಿನ್ನಾಭಿಪ್ರಾಯಗಳ ಕಾರಣ ಇಬ್ಬರೂ ಪರಸ್ಪರ ಒಪ್ಪಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
Vijaya Karnataka Web rajinikanth daughters divorce over without much ado
ಸೌಂದರ್ಯಾ ರಜನಿಕಾಂತ್ ದಾಂಪತ್ಯ ಅಂತ್ಯ


ಕಳೆದ ಏಳು ತಿಂಗಳಿಂದ ಇವರ ವಿಚ್ಛೇದನ ಪ್ರಕರಣದ ವಿಚಾರಣೆ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಆದರೂ ಯಾವುದೇ ತಕರಾರು, ಗದ್ದಲ ಗಲಾಟೆ ಇಲ್ಲದಂತೆ ಇಬ್ಬರೂ ಈಗ ದೂರವಾಗಿದ್ದಾರೆ. ಇಬ್ಬರೂ ಪರಸ್ಪರ ಒಪ್ಪಿದ್ದ ಕಾರಣ ಇವರ ವಿಚ್ಛೇದನ ಪ್ರಕರಣ ಸುಲಭವಾಗಿ ಬಗೆಹರಿದೆ. ಪರಿಹಾರದ ಮೊತ್ತ, ಜೀವನಾಂಶ ಇತ್ಯಾದಿ ಇವರಗಳು ಸದ್ಯಕ್ಕೆ ಲಭ್ಯವಿಲ್ಲ.

2010 ಸೆಪ್ಟೆಂಬರ್ 3ರಂದು ಸೌಂದರ್ಯಾ ಹಾಗೂ ಅಶ್ವಿನ್ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದರು. ಇವರಿಗೆ ನಾಲ್ಕು ವರ್ಷದ ಮಗ ಇದ್ದಾನೆ. ಮಗು ಯಾರ ಸುಪರ್ದಿಗೆ ಸೇರಬೇಕು ಎಂಬುದನ್ನು ಬಹಿರಂಗಪಡಿಸಿಲ್ಲ. ಆರಂಭದಲ್ಲೇ ಇವರಿಬ್ಬರ ವಿಚ್ಛೇದನದ ಬಗ್ಗೆ ಸುದ್ದಿಗಳು ಹರಿದಾಡಿದ್ದರೂ ಇದನ್ನು ತಳ್ಳಿಹಾಕಿದ್ದರು ಸೌಂದರ್ಯಾ.

The seven-year marriage of superstar Rajinikanth’s daughter Soundarya came to an end on Tuesday, when a family court in Chennai passed an order judicial separation.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌