ಆ್ಯಪ್ನಗರ

ರಜನಿಕಾಂತ್ ಫ್ಯಾನ್ಸ್ ಕ್ಲಬ್ ಚಿಹ್ನೆಯಿಂದ ಹಾವು ಕಾಣೆ

ದಕ್ಷಿಣ ಭಾರತದ ನಟ ರಜನಿಕಾಂತ್ ಅವರ 'ರಜನಿ ಮಕ್ಕಳ ಮಂದ್ರಂ' ಅಭಿಮಾನಿಗಳ ಸಂಘದ ಚಿಹ್ನೆಯಿಂದ ಹಾವಿನ ಚಿತ್ರವನ್ನು ತೆಗೆಯಲಾಗಿದೆ.

Vijaya Karnataka Web 3 Feb 2018, 3:21 pm
ದಕ್ಷಿಣ ಭಾರತದ ನಟ ರಜನಿಕಾಂತ್ ಅವರ 'ರಜನಿ ಮಕ್ಕಳ ಮಂದ್ರಂ' ಅಭಿಮಾನಿಗಳ ಸಂಘದ ಚಿಹ್ನೆಯಿಂದ ಹಾವಿನ ಚಿತ್ರವನ್ನು ತೆಗೆಯಲಾಗಿದೆ. ಇದಕ್ಕೆ ಕಾರಣ, ರಾಮಕೃಷ್ಣ ಮಠದ ಚಿಹ್ನೆಯೂ ಹೆಚ್ಚೂಕಡಿಮೆ ಇದೇ ರೀತಿ ಇರುವ ಕಾರಣ ಅವರು ಹಾವಿನ ಚಿತ್ರವನ್ನು ತೆಗೆಸಿದ್ದಾರೆ.
Vijaya Karnataka Web rajinikanth removed snake from his logo
ರಜನಿಕಾಂತ್ ಫ್ಯಾನ್ಸ್ ಕ್ಲಬ್ ಚಿಹ್ನೆಯಿಂದ ಹಾವು ಕಾಣೆ


ಇದಕ್ಕೆ ವಿಶೇಷ ಕಾರಣ ಕಲ್ಪಿಸಬೇಕಾಗಿಲ್ಲ ಎಂದಿರುವ ಅಭಿಮಾನಿಗಳು, ಆಧ್ಯಾತ್ಮಿಕ ಚಿಂತನೆಯಲ್ಲಿರುವ ರಜನಿಕಾಂತ್ ಅವರಿಂದ ಸಾಮಾಜಿಕ ಸರಕಾರವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂಬ ಟೀಕೆ ಕೇಳಿಬಂದಿತ್ತು. ಮುಖ್ಯವಾಗಿ ಅಭಿಮಾನಿಗಳನ್ನು ಭೇಟಿಯಾದಾಗ (ಡಿಸೆಂಬರ್ 26 ರಿಂದ 31ರವರೆಗೆ 2017) ರಜನಿ ಫ್ಯಾನ್ಸ್ ಕ್ಲಬ್‌ನ ಚಿಹ್ನೆಯಲ್ಲಿ ಕಮಲದ ಹೂವು, ಬಾಬಾ ಮುದ್ರೆ ಅದನ್ನು ಸುತ್ತುವರಿದಂತೆ ಹಾವು ಇತ್ತು.

ಈ ಲೋಗೋ ಬಗ್ಗೆ ಸಾಕಷ್ಟು ಅನುಮಾನಗಳೂ ಮೂಡಿದ್ದವು. ಇದರ ಹಿಂದೆ ಬಿಜೆಪಿ ಕೈವಾಡ ಇದೆ ಎಂಬುದು ಅವುಗಳಲ್ಲಿ ಒಂದು. ಹಾಗಾಗಿ ಕಮಲದ ಹೂವನ್ನು ಚಿಹ್ನೆಯಿಂದ ತೆಗೆಸಿದ್ದರು ರಜನಿಕಾಂತ್. ಇದೀಗ ಹಾವನ್ನೂ ತೊಲಗಿಸಲು ನಿರ್ಧರಿಸಲಾಗಿದೆ ಎಂದು ಅಭಿಮಾನಿಗಳ ಸಂಘದ ಸದಸ್ಯರೊಬ್ಬರು ತಿಳಿಸಿದ್ದಾರೆ. ಇತ್ತೀಚೆಗೆ ತಿರುನೇಲ್‍ವೆಲ್ಲಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.

Read this news in Tamil

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌