ಆ್ಯಪ್ನಗರ

ರಕ್ಷಿತ್‌ ಹೊಸ ಲುಕ್‌ ವೈರಲ್‌

ನಟ ರಕ್ಷಿತ್‌ ಮತ್ತೆ ನಿರ್ದೇಶನದತ್ತ ಹೊರಳಿದ್ದಾರಾ? ಹೀಗೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ ಹೊಸ ಪೋಸ್ಟರ್‌. ರಕ್ಷಿತ್‌ ಹುರಿಮೀಸೆ ಬಿಟ್ಟುಕೊಂಡಿರುವ ಈ ಪೋಸ್ಟರ್‌ ಈಗ ವೈರಲ್‌ ಆಗಿದೆ.

Vijaya Karnataka 11 Jun 2019, 10:51 am
ರಕ್ಷಿತ್‌ ಶೆಟ್ಟಿ ನಟನೆಯ ಅವನೇ ಶ್ರೀಮನ್ನಾರಾಯಣ ಚಿತ್ರದ ರಿಲೀಸ್‌ಗಾಗಿ ಅಭಿಮಾನಿಗಳು ಕಾದಿರುವಾಗಲೇ ಸರ್‌ಪ್ರೈಸ್‌ ನೀಡಿದ್ದಾರೆ. ಹುರಿಮೀಸೆಯ ಲುಕ್‌ನಲ್ಲಿ ಪೋಸ್ಟರ್‌ ಒಂದನ್ನು ನಿರ್ಮಾಪಕ ಹೇಮಂತ್‌ ಸಾಮಾಜಿಕ ಜಾಲತಾಣದಲ್ಲಿ ರಿಲೀಸ್‌ ಮಾಡಿದ್ದಾರೆ. ಹೇಮಂತ್‌ ಈ ಮೊದಲು ರಕ್ಷಿತ್‌ ನಿರ್ದೆಶನದ ಮೊದಲ ಚಿತ್ರ 'ಉಳಿದವರು ಕಂಡಂತೆ' ನಿರ್ಮಾಣ ಮಾಡಿದ್ದವರು. ಈಗ ಮತ್ತೆ ರಕ್ಷಿತ್‌ ನಟನೆಯ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಚಿತ್ರಕ್ಕೆ ಹೆಸರಿನ್ನೂ ಇಟ್ಟಿಲ್ಲ. ರಕ್ಷಿತ್‌ ಈ ಚಿತ್ರದಲ್ಲಿ ನಟಿಸುವುದರ ಜತೆಗೆ ನಿರ್ದೇಶನವನ್ನೂ ಮಾಡಲಿದ್ದಾರೆ ಎನ್ನಲಾಗಿದೆ.
Vijaya Karnataka Web rakshit


ಕಿರಿಕ್‌ ಪಾರ್ಟಿ ಚಿತ್ರದ ನಂತರ ರಕ್ಷಿತ್‌ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ನಟಿಸಿದ್ದಾರೆ. ಎರಡೂವರೆ ವರ್ಷಗಳ ನಂತರ ಅವರ ನಟನೆಯ ಚಿತ್ರ ರಿಲೀಸ್‌ ಆಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌