* ಶರಣು ಹುಲ್ಲೂರು
ಬಿಡುವಿಲ್ಲದ ಕೆಲಸಗಳ ಕಾರಣದಿಂದಾಗಿ ಸೋಷಿಯಲ್ ಮೀಡಿಯಾಗಳಿಂದ ದೂರವಿದ್ದ ನಟ ರಕ್ಷಿತ್ ಶೆಟ್ಟಿ, ಈಗ ಮತ್ತೆ ಸಾಮಾಜಿಕ ಜಾಲತಾಣಗಳಿಗೆ ಬರುತ್ತಿದ್ದಾರೆ. ಕಳೆದೊಂದು ವರ್ಷದಿಂದ ಅವರು ಫೇಸ್ಬುಕ್, ಟ್ವಿಟರ್ನಿಂದ ದೂರವಿದ್ದರು. ಆ ಸಮಯದಲ್ಲಿ ಅಭಿಮಾನಿಗಳು ಎಷ್ಟೇ ಒತ್ತಡ ಹಾಕಿದರೂ, ಅವರು ತಮ್ಮ ಅಕೌಂಟ್ ಡಿಲಿಟ್ ಮಾಡಿದರು. ಈಗ ಅಭಿಮಾನಿಗಳ ಒತ್ತಾಸೆಗೆ ಮತ್ತೆ ಸೋಷಿಯಲ್ ಮೀಡಿಯಾಗೆ ಬರುತ್ತಿದ್ದಾರೆ. 'ಅವನೇ ಶ್ರೀಮನ್ನಾರಾಯಣ' ಸಿನಿಮಾದ ಟ್ರೇಲರ್ ಹಾಕುವ ಮೂಲಕ ಜೂ.6 ರಿಂದ ಸೋಷಿಯಲ್ ಮೀಡಿಯಾದಲ್ಲಿ ಅವರು ಆಕ್ಟಿವ್ ಆಗಲಿದ್ದಾರೆ. ಆದರೆ, ಈ ಖಾತೆಗಳನ್ನು ರಕ್ಷಿತ್ ಟೀಮ್ ನಿರ್ವಹಿಸಲಿದೆ.
'ನಟನೆ, ನಿರ್ದೇಶನ ಹೀಗೆ ಸಿನಿಮಾ ಸಂಬಂಧಿ ನಾನಾ ಕೆಲಸಗಳಲ್ಲಿ ನಾನು ಬಿಝಿ ಆಗಿದ್ದೇನೆ. ಹಾಗಾಗಿ ನೇರವಾಗಿ ಅಭಿಮಾನಿಗಳ ಜತೆ ಸಂವಹನ ಸಾಧಿಸಲು ಸಾಧ್ಯವಾಗಲಿಲ್ಲ. ಟ್ವಿಟರ್, ಫೇಸ್ಬುಕ್ ಮೂಲಕವಾದರೂ, ಅವರೊಂದಿಗೆ ಮಾತನಾಡಬೇಕು ಎಂಬ ಒತ್ತಡ ಹೆಚ್ಚಾಗುತ್ತಲೇ ಹೋಯಿತು. ಅವರ ಪ್ರೀತಿ ಒತ್ತಾಸೆಯಿಂದಾಗಿ ನನ್ನ ಟೀಮ್ ಸೋಷಿಯಲ್ ಮೀಡಿಯಾವನ್ನು ಹ್ಯಾಂಡಲ್ ಮಾಡಲು ಮುಂದಾಗಿದೆ. ನನ್ನ ಕೆಲ ಅನಿಸಿಕೆಗಳ ಜತೆಗೆ ಸಿನಿಮಾದ ಅನೇಕ ವಿಷಯಗಳನ್ನು ಹಂಚಿಕೊಳ್ಳಲಿದ್ದೇನೆ' ಎನ್ನುತ್ತಾರೆ ರಕ್ಷಿತ್.
'ರಕ್ಷಿತ್ ನಟನೆಯ ಅವನೇ ಶ್ರೀಮನ್ನಾರಾಯಣ ಮತ್ತು ಅವರ ಇತರ ಸಿನಿಮಾಗಳ ಕುರಿತಾದ ಮಾಹಿತಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಅವರು ಹಂಚಿಕೊಳ್ಳಲಿದ್ದಾರೆ. ಈ ಸೋಷಿಯಲ್ ಪೇಜ್ಗಳನ್ನು ನಿರ್ವಹಿಸುವುದಕ್ಕಾಗಿಯೇ ಒಂದು ತಂಡ ರೆಡಿ ಮಾಡಿದ್ದೇವೆ. ಅವರು ನಿರಂತರವಾಗಿ ವಿಷಯಗಳನ್ನು ಅಪ್ಡೇಟ್ ಮಾಡುತ್ತದೆ' ಎನ್ನುತ್ತಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್.
ಅಂದಹಾಗೆ ಜೂ.6ರಂದು ರಕ್ಷಿತ್ ಶೆಟ್ಟಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಂದೇ ಇವರ ನಟನೆಯ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಟ್ರೇಲರ್ ಬಿಡುಗಡೆ ಆಗಲಿದೆ. ಆಗಸ್ಟ್ ತಿಂಗಳಲ್ಲಿ ಈ ಚಿತ್ರ ಬಿಡುಗಡೆ ಆಗಲಿದ್ದು, ಐದು ಭಾಷೆಗಳಲ್ಲಿ ಈ ಚಿತ್ರವನ್ನು ರಿಲೀಸ್ ಮಾಡುವ ಪ್ಲ್ಯಾನ್ ಮಾಡುತ್ತಿದೆ ಚಿತ್ರತಂಡ.
'ಕನ್ನಡ, ತೆಲುಗು, ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ ಈ ಸಿನಿಮಾ ತೆರೆ ಕಾಣಲಿದೆ. ಭಾರೀ ಬಜೆಟ್ನ ಚಿತ್ರ ಇದಾಗಿದ್ದು, ಅತೀ ಹೆಚ್ಚು ದಿನಗಳ ಕಾಲ ಶೂಟಿಂಗ್ ಮಾಡಿದ್ದೇವೆ. ಈ ಚಿತ್ರಕ್ಕಾಗಿಯೇ ನಾನಾ ಸೆಟ್ಗಳನ್ನು ಹಾಕಿದ್ದೇವೆ. ಭಾರತೀಯ ಸಿನಿಮಾ ರಂಗದಲ್ಲೇ ಇದೊಂದು ವಿಶೇಷ ಚಿತ್ರ ಆಗಲಿದೆ' ಎನ್ನುವುದು ನಿರ್ಮಾಪಕರ ಮಾತು.
ರಕ್ಷಿತ್ ಶೆಟ್ಟಿ ಜತೆ ಇದೇ ಮೊದಲ ಬಾರಿಗೆ ಶಾನ್ವಿ ಶ್ರೀವಾತ್ಸವ್ ನಟಿಸಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಸಿನಿಮಾ ಫಸ್ಟ್ಲುಕ್ ಭಾರೀ ಸದ್ದು ಮಾಡಿದೆ.
ಕಳೆದೊಂದು ವರ್ಷದಿಂದ ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾದಿಂದ ದೂರವಿದ್ದರು. ನಮ್ಮೆಲ್ಲರ ಒತ್ತಾಸೆಯಂತೆ ಮತ್ತೆ ಅವರು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೂ.6ರಿಂದ ಅವರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸಂವಹನೆ ಮಾಡಬಹುದಾಗಿದೆ.
- ಪುಷ್ಕರ್ ಮಲ್ಲಿಕಾರ್ಜುನ್, ನಿರ್ಮಾಪಕ
ಬಿಡುವಿಲ್ಲದ ಕೆಲಸಗಳ ಕಾರಣದಿಂದಾಗಿ ಸೋಷಿಯಲ್ ಮೀಡಿಯಾಗಳಿಂದ ದೂರವಿದ್ದ ನಟ ರಕ್ಷಿತ್ ಶೆಟ್ಟಿ, ಈಗ ಮತ್ತೆ ಸಾಮಾಜಿಕ ಜಾಲತಾಣಗಳಿಗೆ ಬರುತ್ತಿದ್ದಾರೆ. ಕಳೆದೊಂದು ವರ್ಷದಿಂದ ಅವರು ಫೇಸ್ಬುಕ್, ಟ್ವಿಟರ್ನಿಂದ ದೂರವಿದ್ದರು. ಆ ಸಮಯದಲ್ಲಿ ಅಭಿಮಾನಿಗಳು ಎಷ್ಟೇ ಒತ್ತಡ ಹಾಕಿದರೂ, ಅವರು ತಮ್ಮ ಅಕೌಂಟ್ ಡಿಲಿಟ್ ಮಾಡಿದರು. ಈಗ ಅಭಿಮಾನಿಗಳ ಒತ್ತಾಸೆಗೆ ಮತ್ತೆ ಸೋಷಿಯಲ್ ಮೀಡಿಯಾಗೆ ಬರುತ್ತಿದ್ದಾರೆ. 'ಅವನೇ ಶ್ರೀಮನ್ನಾರಾಯಣ' ಸಿನಿಮಾದ ಟ್ರೇಲರ್ ಹಾಕುವ ಮೂಲಕ ಜೂ.6 ರಿಂದ ಸೋಷಿಯಲ್ ಮೀಡಿಯಾದಲ್ಲಿ ಅವರು ಆಕ್ಟಿವ್ ಆಗಲಿದ್ದಾರೆ. ಆದರೆ, ಈ ಖಾತೆಗಳನ್ನು ರಕ್ಷಿತ್ ಟೀಮ್ ನಿರ್ವಹಿಸಲಿದೆ.
'ನಟನೆ, ನಿರ್ದೇಶನ ಹೀಗೆ ಸಿನಿಮಾ ಸಂಬಂಧಿ ನಾನಾ ಕೆಲಸಗಳಲ್ಲಿ ನಾನು ಬಿಝಿ ಆಗಿದ್ದೇನೆ. ಹಾಗಾಗಿ ನೇರವಾಗಿ ಅಭಿಮಾನಿಗಳ ಜತೆ ಸಂವಹನ ಸಾಧಿಸಲು ಸಾಧ್ಯವಾಗಲಿಲ್ಲ. ಟ್ವಿಟರ್, ಫೇಸ್ಬುಕ್ ಮೂಲಕವಾದರೂ, ಅವರೊಂದಿಗೆ ಮಾತನಾಡಬೇಕು ಎಂಬ ಒತ್ತಡ ಹೆಚ್ಚಾಗುತ್ತಲೇ ಹೋಯಿತು. ಅವರ ಪ್ರೀತಿ ಒತ್ತಾಸೆಯಿಂದಾಗಿ ನನ್ನ ಟೀಮ್ ಸೋಷಿಯಲ್ ಮೀಡಿಯಾವನ್ನು ಹ್ಯಾಂಡಲ್ ಮಾಡಲು ಮುಂದಾಗಿದೆ. ನನ್ನ ಕೆಲ ಅನಿಸಿಕೆಗಳ ಜತೆಗೆ ಸಿನಿಮಾದ ಅನೇಕ ವಿಷಯಗಳನ್ನು ಹಂಚಿಕೊಳ್ಳಲಿದ್ದೇನೆ' ಎನ್ನುತ್ತಾರೆ ರಕ್ಷಿತ್.
'ರಕ್ಷಿತ್ ನಟನೆಯ ಅವನೇ ಶ್ರೀಮನ್ನಾರಾಯಣ ಮತ್ತು ಅವರ ಇತರ ಸಿನಿಮಾಗಳ ಕುರಿತಾದ ಮಾಹಿತಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಅವರು ಹಂಚಿಕೊಳ್ಳಲಿದ್ದಾರೆ. ಈ ಸೋಷಿಯಲ್ ಪೇಜ್ಗಳನ್ನು ನಿರ್ವಹಿಸುವುದಕ್ಕಾಗಿಯೇ ಒಂದು ತಂಡ ರೆಡಿ ಮಾಡಿದ್ದೇವೆ. ಅವರು ನಿರಂತರವಾಗಿ ವಿಷಯಗಳನ್ನು ಅಪ್ಡೇಟ್ ಮಾಡುತ್ತದೆ' ಎನ್ನುತ್ತಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್.
ಅಂದಹಾಗೆ ಜೂ.6ರಂದು ರಕ್ಷಿತ್ ಶೆಟ್ಟಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಂದೇ ಇವರ ನಟನೆಯ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಟ್ರೇಲರ್ ಬಿಡುಗಡೆ ಆಗಲಿದೆ. ಆಗಸ್ಟ್ ತಿಂಗಳಲ್ಲಿ ಈ ಚಿತ್ರ ಬಿಡುಗಡೆ ಆಗಲಿದ್ದು, ಐದು ಭಾಷೆಗಳಲ್ಲಿ ಈ ಚಿತ್ರವನ್ನು ರಿಲೀಸ್ ಮಾಡುವ ಪ್ಲ್ಯಾನ್ ಮಾಡುತ್ತಿದೆ ಚಿತ್ರತಂಡ.
'ಕನ್ನಡ, ತೆಲುಗು, ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ ಈ ಸಿನಿಮಾ ತೆರೆ ಕಾಣಲಿದೆ. ಭಾರೀ ಬಜೆಟ್ನ ಚಿತ್ರ ಇದಾಗಿದ್ದು, ಅತೀ ಹೆಚ್ಚು ದಿನಗಳ ಕಾಲ ಶೂಟಿಂಗ್ ಮಾಡಿದ್ದೇವೆ. ಈ ಚಿತ್ರಕ್ಕಾಗಿಯೇ ನಾನಾ ಸೆಟ್ಗಳನ್ನು ಹಾಕಿದ್ದೇವೆ. ಭಾರತೀಯ ಸಿನಿಮಾ ರಂಗದಲ್ಲೇ ಇದೊಂದು ವಿಶೇಷ ಚಿತ್ರ ಆಗಲಿದೆ' ಎನ್ನುವುದು ನಿರ್ಮಾಪಕರ ಮಾತು.
ರಕ್ಷಿತ್ ಶೆಟ್ಟಿ ಜತೆ ಇದೇ ಮೊದಲ ಬಾರಿಗೆ ಶಾನ್ವಿ ಶ್ರೀವಾತ್ಸವ್ ನಟಿಸಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಸಿನಿಮಾ ಫಸ್ಟ್ಲುಕ್ ಭಾರೀ ಸದ್ದು ಮಾಡಿದೆ.
ಕಳೆದೊಂದು ವರ್ಷದಿಂದ ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾದಿಂದ ದೂರವಿದ್ದರು. ನಮ್ಮೆಲ್ಲರ ಒತ್ತಾಸೆಯಂತೆ ಮತ್ತೆ ಅವರು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೂ.6ರಿಂದ ಅವರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸಂವಹನೆ ಮಾಡಬಹುದಾಗಿದೆ.
- ಪುಷ್ಕರ್ ಮಲ್ಲಿಕಾರ್ಜುನ್, ನಿರ್ಮಾಪಕ