ಆ್ಯಪ್ನಗರ

ಶಿವಧ್ಯಾನ ಮಾಡಲು ಕೈಲಾಸ ಪರ್ವತಕ್ಕೆ ಶ್ರೀಮನ್ನಾರಾಯಣ

ಅವನೇ ಶ್ರೀಮನ್ನಾರಾಯಣ ಚಿತ್ರ ಕೆಲಸ ಮುಗಿದ ನಂತರ ಬ್ಯಾಕ್‌ ಟು ಬ್ಯಾಕ್‌ ಟ್ರೆಕ್ಕಿಂಗ್‌ ಮಾಡುತ್ತಿರುವ ರಕ್ಷಿತ್‌ ಶೆಟ್ಟಿ, ಆದಷ್ಟು ಬೇಗ ಹಿಮಾಲಯಕ್ಕೆ ತೆರಳಲು ನಿರ್ಧರಿಸಿದ್ದಾರೆ. ಮುಖ್ಯವಾಗಿ ಅವರು ಕೈಲಾಸ ಪರ್ವತ ಹಾಗೂ ಮಾನಸ ಸರೋವರಕ್ಕೆ ಯಾತ್ರೆ ಕೈಗೊಳ್ಳಲಿದ್ದಾರೆ.

Vijaya Karnataka Web 24 Jul 2019, 5:00 am
-ಪದ್ಮಾ ಶಿವಮೊಗ್ಗ
Vijaya Karnataka Web rakshit2


ಇತ್ತೀಚೆಗೆ ಸಿದ್ದರಬೆಟ್ಟಕ್ಕೆ ಟ್ರೆಕ್ಕಿಂಗ್‌ ಹೋಗಿದ್ದ ನಟ ರಕ್ಷಿತ್‌ ಶೆಟ್ಟಿ ಕಳೆದ ವೀಕೆಂಡ್‌ನಲ್ಲಿ ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ, ನಟ ದಿಗಂತ್‌ ಜತೆ ಕುಂತಿಬೆಟ್ಟಕ್ಕೂ ಹೋಗಿ ಬಂದಿದ್ದರು. ಇದರ ಬೆನ್ನಲ್ಲೇ ಹಿಮಾಲಯಕ್ಕೆ ಹೊರಡಲು ಪ್ಲಾನ್‌ ಮಾಡಿದ್ದಾರೆ.

'ಚಿಕ್ಕಂದಿನಿಂದ ಆಸೆ ಇದೆ. ನಾನು ಒಬ್ಬನೇ ಯಾರಿಗೂ ಗೊತ್ತಾಗದಂತೆ ಟ್ರೈನ್‌ನಲ್ಲಿ ಹೋಗಬೇಕು ಅನ್ನಿಸುತ್ತಿತ್ತು. ಅದು ಸಾಧ್ಯವಾಗುತ್ತಿಲ್ಲ. ಈಗ ಸ್ನೇಹಿತರೂ ಜತೆಯಾಗಿರುವುದರಿಂದ ಅವನೇ ಶ್ರೀಮನ್ನಾರಾಯಣ ರಿಲೀಸ್‌ ಆದ ನಂತರ ಹೋಗಲೇಬೇಕು ಎಂದು ನಿರ್ಧರಿಸಿದ್ದೇವೆ. ಸುಮಾರು 20-30 ಜನರ ತೆರಳುವ ಸಾಧ್ಯತೆ ಇದೆ' ಎಂದಿದ್ದಾರೆ ಅವರು.

'ಮಾನಸ ಸರೋವರ ಮತ್ತು ಕೈಲಾಸ ಪರ್ವತ ನೋಡಲೇಬೇಕೆಂಬುದು ಬಹುಕಾಲದ ಆಸೆ ನನ್ನದು. ದೊಡ್ಡ ದೊಡ್ಡ ಸಂತರು ಕೇದಾರನಾಥ ಗುಹೆ ಬಗ್ಗೆ ಬರೆದಿರುವುದನ್ನು ಓದಿದ್ದೇನೆ. ಇಲ್ಲಿ ನಮಗೆ ಮೆಡಿಟೇಷನ್‌ ಮಾಡಲು ಬಿಡುತ್ತಾರೋ ಇಲ್ಲವೋ ಗೊತ್ತಿಲ್ಲ. ಅದಕ್ಕೂ ಮೊದಲು ಒಂದಿಷ್ಟು ಬೆಟ್ಟಗಳಿಗೆ ಟ್ರೆಕ್ಕಿಂಗ್‌ ಹೋಗಿಬರೋಣ ಅಂತ ಕುಂತಿಬೆಟ್ಟಕ್ಕೂ ಹೋಗಿದ್ದೆವು. ಇಲ್ಲಿ ರಿಸ್ಕ್‌ ಇತ್ತು. ಜತೆಗೆ ಅನುಭವ ಚೆನ್ನಾಗಿತ್ತು' ಎಂದಿದ್ದಾರೆ ರಕ್ಷಿತ್‌.

ರಕ್ಷಿತ್‌ ಮೂಲತಃ ಶಿವಭಕ್ತ. ಅವರ ಸಿನಿಮಾಗಳಲ್ಲಿ ಶಿವನ ಕುರಿತು ಪ್ರಸ್ತಾಪ ಇದ್ದೇ ಇರುತ್ತದೆ. ಅಷ್ಟೇ ಏಕೆ, ಅವರ ಬ್ಯಾನರ್‌ ಪರಮ್ವ್ಹಾ ಹೆಸರಿನಲ್ಲಿ ಶಿವನ ಪ್ರಸ್ತಾಪವಿದೆ. ಪರಮ್ವ್ಹಾ ಎಂದರೆ ಶಿವನ ಢಮರುಗದಿಂದ ಹೊರಡುವ ಮೊದಲ ನಾದ. ಹೀಗಾಗಿ ಅವರು ಕೈಲಾಸ ಪರ್ವತ ಯಾತ್ರೆ ಮಾಡುತ್ತಿರುವುದು ವಿಶೇಷವಾಗಿದೆ.

ಮೈಸೂರಿನಿಂದ 20 ಕಿ.ಮೀ. ದೂರದಲ್ಲಿ ಪಾಂಡವಪುರ ಸಮೀಪ ಇರುವ ಕುಂತಿಬೆಟ್ಟ ಟ್ರೆಕ್ಕಿಂಗ್‌ ಅಮೇಜಿಂಗ್‌ ಎಂದಿದ್ದಾರೆ ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ. ಈ ಬಾರಿ ದಿಗಂತ್‌ ಇವರ ಜತೆಯಾಗಿದ್ದಾರೆ. 'ಸಿದ್ದರ ಬೆಟ್ಟಕ್ಕೆ ನಾನು ಎರಡು ಸಲ ಹೋಗಿಬಂದೆ. ಇಲ್ಲಿ ಮೆಟ್ಟಿಲನ್ನು ಹತ್ತಿದ್ದೆವು. ಆದರೆ, ಕುಂತಿಬೆಟ್ಟಕ್ಕೆ ಮೆಟ್ಟಿಲುಗಳಿಲ್ಲ. ಬಂಡೆಯ ಮೇಲೇ ನಡೆದು ಹತ್ತಬೇಕು. ರಾಕ್‌ ಕ್ಲೈಂಬಿಂಗ್‌. ಇದು ಇನ್ನೂ ಅಡ್ವೆಂಚರಸ್‌ ಆಗಿತ್ತು. ನಾವು ಇಂಥ ಟ್ರೆಕ್ಕಿಂಗ್‌ ಹಿಂದೆ ಮಾಡಿರಲಿಲ್ಲ. ಹಾಗಾಗಿ ನಮಗೆ ಹೆಚ್ಚು ಐಡಿಯಾ ಇರಲಿಲ್ಲ. ಇನ್ನು ಮುಂದೆ ಟ್ರೆಕ್ಕಿಂಗ್‌ ಕಿಟ್‌ ಜತೆ ಟ್ರೈನಿಯನ್ನೂ ಜತೆಯಲ್ಲಿ ಕರೆದುಕೊಂಡು ಹೋಗ್ತೀವಿ' ಎಂದಿದ್ದಾರೆ ಪುಷ್ಕರ್‌.

ಪುಷ್ಕರ್‌ ನಿರಂತರವಾಗಿ 6ನೇ ಸಲ ಟ್ರೆಕ್ಕಿಂಗ್‌ ಹೋಗಿದ್ದರೆ, ದಿಗಂತ್‌ ಮತ್ತು ರಕ್ಷಿತ್‌ಗೆ ಇದು ಎರಡನೇ ಅನುಭವ. ಇವರ ಲಿಸ್ಟ್‌ನಲ್ಲಿ ಮಧುಗಿರಿ ಬೆಟ್ಟ, ಶಿವಗಂಗೆ, ಅಂತರಗಂಗೆ ಬೆಟ್ಟಗಳಿವೆ.

--

ವಾರವೆಲ್ಲಾ ಕೆಲಸ ಮಾಡಿ ಒಂದು ದಿನ ಟ್ರೆಕ್ಕಿಂಗ್‌ ಹೋದರೆ, ಪ್ರಕೃತಿ ನಡುವೆ ಮನಸ್ಸು ಫ್ರೆಶ್‌ ಆಗುತ್ತದೆ. ಎನರ್ಜಿ ಬೂಸ್ಟ್‌ ಆಗುತ್ತೆ. ನಾನು, ರಕ್ಷಿತ್‌ ತುಂಬಾ ಎಂಜಾಯ್‌ ಮಾಡುತ್ತಿದ್ದೇವೆ.

-ಪುಷ್ಕರ್‌ ಮಲ್ಲಿಕಾರ್ಜುನಯ್ಯ, ನಿರ್ಮಾಪಕ

--

ಟ್ರೆಕ್ಕಿಂಗ್‌ಗಿಂತ ಕೈಲಾಸ ಪರ್ವತವನ್ನು ಹತ್ತಿರದಿಂದ ನೋಡಬೇಕು ಅನ್ನುವ ಆಸೆ ಇದೆ. ಹಿಮಾಲಯದ ಸೌಂದರ್ಯವನ್ನು ಅಲ್ಲಿದ್ದು ಅನುಭವಿಸಬೇಕು. ಹೋಗಲು ಬಹಳ ಎಕ್ಸೈಟ್‌ಮೆಂಟ್‌ನಿಂದ ಕಾಯುತ್ತಿದ್ದೇನೆ.

-ರಕ್ಷಿತ್‌ ಶೆಟ್ಟಿ, ನಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌