ಆ್ಯಪ್ನಗರ

ಜಿಮ್‌ ಬಿಟ್ಟು ಟ್ರೆಕ್ಕಿಂಗ್‌ ಹೊರಟ ಶ್ರೀಮನ್ನಾರಾಯಣ

ನಟ ರಕ್ಷಿತ್‌ ಶೆಟ್ಟಿ ತಮ್ಮ ಬಿಝಿ ಶೂಟಿಂಗ್‌ ಶೆಡ್ಯೂಲ್‌ ನಡುವೆಯೂ ತುಮಕೂರು ಜಿಲ್ಲೆಯ ಸಿದ್ದರಬೆಟ್ಟಕ್ಕೆ ಟ್ರೆಕ್ಕಿಂಗ್‌ ಹೋಗಿ ಬಂದಿದ್ದಾರೆ. ಇವರಿಗೆ ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಸಾಥ್‌ ನೀಡಿದ್ದಾರೆ.

Vijaya Karnataka Web 10 Jul 2019, 5:00 am
-ಪದ್ಮಾ ಶಿವಮೊಗ್ಗ
Vijaya Karnataka Web rakshit


ನಟ ರಕ್ಷಿತ್‌ ಶೆಟ್ಟಿ ತಮ್ಮ ಬಿಝಿ ಶೂಟಿಂಗ್‌ ಶೆಡ್ಯೂಲ್‌ ನಡುವೆಯೂ ತುಮಕೂರು ಜಿಲ್ಲೆಯ ಸಿದ್ದರಬೆಟ್ಟಕ್ಕೆ ಟ್ರೆಕ್ಕಿಂಗ್‌ ಹೋಗಿ ಬಂದಿದ್ದಾರೆ. ಇವರಿಗೆ ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಸಾಥ್‌ ನೀಡಿದ್ದಾರೆ.

ಜಿಮ್‌ನಲ್ಲಿ ವರ್ಕೌಟ್‌ ಮಾಡುವುದಕ್ಕಿಂತ ಇದು ಭಿನ್ನ ಎಂದಿದ್ದಾರೆ ರಕ್ಷಿತ್‌ ಶೆಟ್ಟಿ. 'ಜಿಮ್‌ನಲ್ಲಿ ನಿತ್ಯ ವರ್ಕೌಟ್‌ ಮಾಡುವುದು ಮಾಮೂಲಿ. ಶೂಟಿಂಗ್‌ ನಡುವೆ ಸ್ವಲ್ಪ ಚೇಂಜ್‌ ಇರಲಿ ಅಂತ ಸಿದ್ದರಬೆಟ್ಟಕ್ಕೆ ಟ್ರೆಕ್ಕಿಂಗ್‌ ಹೋದೆವು. ನಾನು, ಪುಷ್ಕರ್‌, ಸ್ನೇಹಿತ ಅನಿರುದ್ಧ್‌ ಜತೆ ಹೋಗಿದ್ದೆವು. ಆದರೆ, ಹೀಗೆ ಟ್ರೆಕ್ಕಿಂಗ್‌ ಹೋಗುವುದು ನಿಜಕ್ಕೂ ವಿಶೇಷ ಅನುಭವ. ಇಡೀ ಬೆಟ್ಟವನ್ನು ಎರಡು ಬ್ರೇಕ್‌ ತೆಗೆದುಕೊಂಡು 30 ನಿಮಿಷದಲ್ಲಿ ಹತ್ತಿದೆವು. ಬೆಟ್ಟದ ಮೇಲೆ ಹತ್ತಿದ ನಂತರ ಅನುಭವ ತುಂಬಾ ಚೆನ್ನಾಗಿತ್ತು. ಮೆಡಿಟೇಷನ್‌ ಮಾಡಿದೆವು. ಸುತ್ತಲ ಪರಿಸರವನ್ನು ಎತ್ತರದ ಪ್ರದೇಶದಿಂದ ನೋಡುವುದೇ ಸುಂದರ ಅನುಭವ' ಎಂದಿದ್ದಾರೆ ಅವರು.

ರಕ್ಷಿತ್‌ ಅವರಿಗೆ ಯಾಣ, ಸಕಲೇಶಪುರಗಳಿಗೂ ಟ್ರೆಕ್ಕಿಂಗ್‌ ಹೋದ ಅನುಭವ ಇದೆ. 'ಬಹಳ ವರ್ಷಗಳ ಹಿಂದೆ ಹೋಗಿದ್ದೆ. ಈಗ ಅವರಿಗೆ ಚಿಕ್ಕಮಗಳೂರು ಕಡೆ ಟ್ರೆಕ್ಕಿಂಗ್‌ ಹೋಗಬೇಕು ಎಂಬ ಆಸೆ ಬಹಳ ಇದೆ. ಇಲ್ಲಿಯ ಪ್ರಕೃತಿ ಸೌಂದರ್ಯ ನನ್ನನ್ನು ಆಕರ್ಷಿಸಿದೆ. ಇಲ್ಲಿ ಹೆಚ್ಚು ಎಕ್ಸ್‌ಪ್ಲೋರ್‌ ಮಾಡಬೇಕು ಅಂತ ಇದ್ದೇನೆ. ಈ ರೀತಿ ಟ್ರೆಕ್ಕಿಂಗ್‌ ಹೋಗಿ ಸುಮಾರು ಎರಡು ವರ್ಷವಾಯಿತು. ಇನ್ನು ಮುಂದೆ 15 ದಿನಕ್ಕೊಮ್ಮೆ ಟ್ರೆಕ್ಕಿಂಗ್‌ ಹೋಗೋಣ ಎಂದುಕೊಂಡಿದ್ದೇವೆ' ಎನ್ನುತ್ತಾರೆ ಅವರು.

'ಇದು ಔಷಧೀಯ ಗಿಡಗಳಿಗೆ ಹೆಸರಾಗಿರುವ ಬೆಟ್ಟ. ಐತಿಹಾಸಿಕ ಬೆಟ್ಟವೂ ಹೌದು. ಹಿಮಾಲಯಗಳಲ್ಲಿ ಋುಷಿಮುನಿಗಳು ತಪಸ್ಸು ಮಾಡುವಂತೆಯೇ ಇಲ್ಲಿಯೂ ಸನ್ಯಾಸಿಗಳು ತಪಸ್ಸು ಮಾಡುತ್ತಿದ್ದರು ಎಂಬ ಮಾತಿದೆ. ಬೆಟ್ಟ ಹತ್ತಿ ಬರಲು 4 ಕಿ.ಮೀ ನಡೆಯಬೇಕು. ಕಾರ್ಡಿಯೋಗೆ ಸೂಪರ್‌ ವರ್ಕೌಟ್‌ ಆಗುತ್ತೆ' ಎಂದಿದ್ದಾರೆ ಪುಷ್ಕರ್‌ ಮಲ್ಲಿಕಾರ್ಜುನಯ್ಯ.

'ಎರಡು ವಾರಗಳ ಹಿಂದೆ ಕೊಯಮತ್ತೂರಿನ ಸಮೀಪ ಟ್ರೆಕ್ಕಿಂಗ್‌ ಮಾಡಿದ್ದೆವು. ಈ ಹಿಂದೆ ಅಲ್ಲಿನ ಇಶಾ ಯೋಗಾ ಸೆಂಟರ್‌ಗೂ ಹೋಗಿದ್ದೆವು. ಅದಂತೂ ಇನ್ನೂ ಡಿಫರೆಂಟ್‌. ಬಹಳ ಖುಷಿಯಾಯಿತು. ಸ್ನೇಹಿತರಿದ್ದರೂ ಚೆನ್ನಾಗಿರುತ್ತದೆ. ಒಬ್ಬೊಬ್ಬರೇ ಹೋದರೂ ಚೆನ್ನಾಗಿರುತ್ತದೆ. ಒಬ್ಬರೇ ಶಾಂತವಾಗಿ ಸ್ವಲ್ಪ ಹೊತ್ತು ಕುಳಿತು ಮೆಡಿಟೇಷನ್‌ ಮಾಡಿದರೆ ಮನಸ್ಸಿಗೂ ಉಲ್ಲಾಸ' ಎನ್ನುತ್ತಾರೆ ರಕ್ಷಿತ್‌.

ಇಲ್ಲಿಯೂ ಅವರಿಗೆ ಅಭಿಮಾನಿಗಳು ಬೆನ್ನತ್ತಿದ್ದಾರೆ. 'ಕ್ಯಾಪ್‌ ಹಾಕಿಕೊಂಡು ಗೊತ್ತಾಗದಂತೆ ಹೊಗಿದ್ದರೂ ಜನ ಗುರುತಿಸಿ ಮುತ್ತಿಕೊಂಡರು. ಕೊನೆಗೆ ನಾನು ರಿಕ್ವೆಸ್ಟ್‌ ಮಾಡಿಕೊಂಡ ನಂತರ ನಮ್ಮ ಪಾಡಿಗೆ ಇರಲು ಬಿಟ್ಟರು' ಎಂದಿದ್ದಾರೆ ಅವರು.

-----

ಟ್ರೆಕ್ಕಿಂಗ್‌ ಹೋಗುವುದರಿಂದ ಪ್ರಕೃತಿ ಜತೆ ನಮ್ಮನ್ನು ಕನೆಕ್ಟ್ ಮಾಡಿಕೊಳ್ಳಬಹುದು. ಇದು ಎಲ್ಲರಿಗೂ ತುಂಬಾ ಅಗತ್ಯವಿದೆ. ಬಿಝಿ ಶೆಡ್ಯೂಲ್‌ನಲ್ಲಿಯೂ ಇದು ಬಹಳ ಖುಷಿ ಕೊಡುತ್ತದೆ.

-ರಕ್ಷಿತ್‌ ಶೆಟ್ಟಿ, ನಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌