ಆ್ಯಪ್ನಗರ

'ಟೀಚರ್ಸ್ ಡೇ'ಗೆ ವಿಶ್ ಮಾಡಿ ನೆಟ್ಟಿಗರಿಂದ ಉಗಿಸಿಕೊಂಡ ರಾಮ್‌ ಗೋಪಾಲ್ ವರ್ಮಾ

ಶಿಕ್ಷಕರ ದಿನಂದು ಎಲ್ಲರೂ ತಮ್ಮ ಶಿಕ್ಷಕರನ್ನು ನೆನೆದು ಅಥವಾ ಅವರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ 'ಶಿಕ್ಷಕರ ದಿನಾಚರಣೆ' ಆಚರಿಸುತ್ತಿದ್ದಾರೆ. ಆದರೆ ಸದಾ ವಿವಾದಗಳಿಂದಲೇ ಸುದ್ದಿ ಮಾಡುವ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ ಡಿಫರೆಂಟ್ ಆಗಿ 'ಶಿಕ್ಷಕರ ದಿನಾಚರಣೆ'ಗೆ ಶುಭ ಕೋರಲು ಹೋಗಿ ನೆಟ್ಟಿಗರಿಂದ ಬೈಸಿಕೊಂಡಿದ್ದಾರೆ.

Times Now 5 Sep 2019, 5:35 pm
ಟೀಚರ್ಸ್ ವಿಸ್ಕಿ ಜೊತೆಗೆ ತಮ್ಮ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ 'ಟೀಚರ್ಸ್ ವಿಸ್ಕಿ ಕುಡಿಯುವ ಮೂಲಕ ಟೀಚರ್ಸ್ ಡೇ ಆಚರಿಸಬಹುದೇ? ಸುಮ್ಮನೆ ಕೇಳುತ್ತಿದ್ದೇನೆ' ಎಂದು ಕ್ಯಾಪ್ಶನ್ ನೀಡಿದ್ದಾರೆ. ಜೊತೆಗೆ 'ಹ್ಯಾಪಿ ಟೀಚರ್ಸ್ ಡೇ' ಅಂಥ ಶುಭ ಕೋರಿದ್ದಾರೆ.
Vijaya Karnataka Web 42867618

'ಗುರುಬ್ರಹ್ಮ ಗುರು ವಿಷ್ಣು, ಗುರು ದೇವೋ ಮಹೇಶ್ವರ' ಅಂಥ ಪೂಜಿಸುವ ಸಂಸ್ಕೃತಿ ನಮ್ಮದು. ಹೀಗಿರುವಾಗ ಇಂಥಹ ಪೋಸ್ಟ್ ಮಾಡಿ ಶಿಕ್ಷಕರಿಗೆ ಅವಮಾನ ಮಾಡಿದ್ದಾರೆ ಆರ್‌ಜಿವಿ. ಇದಕ್ಕೆ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡಿ, ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ರಾಮ್‌ ಗೋಪಾಲ್ ಟ್ವೀಟ್‌ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರನ್ನು ತಮ್ಮ ಗುರು ಅಂಥಲೂ ಹೇಳಿದ್ದಾರೆ.


"ನಿಮ್ಮ ಸ್ಟುಡೆಂಟ್ಸ್ ಈ ರೀತಿ ನಿಮ್ಮ ಜೊತೆಗೆ ಸೆಲೆಬ್ರೇಟ್ ಮಾಡಬಹುದು, ನೀವು ಟೀಚರ್ ಅಲ್ಲ, ಆದರೂ ಸುಮಾರು ವಿಷಯಗಳನ್ನು ಕಲಿಸಿದ್ದೀರಿ, ನಿಮ್ಮನ್ನು ತುಂಬ ಹೇಟ್ ಮಾಡ್ತೀನಿ, ಶಿಕ್ಷಕರಿಗೆ ಅವಮಾನ ಮಾಡಬೇಡಿ" ಅಂಥ ಕೆಲವರು ಕಮೆಂಟ್ ಮಾಡಿದ್ದಾರೆ. ಒಟ್ಟಾರೆಯಾಗಿ ರಾಮ್‌ ಗೋಪಾಲ್ ವರ್ಮಾ ಹೊಸ ಎಡವಟ್ಟು ಮಾಡಿಕೊಂಡಿರುವುದಂತೂ ಪಕ್ಕಾ
ಬಾಲಿವುಡ್‌ ತಾರೆ ಶೆರ್ಲಿನ್ ಚೋಪ್ರಾರಿಗೆ ನೋಡಬಾರದ ವಿಡಿಯೋ ಕಳಿಸಿ, ಮಾದಕ ದೃಶ್ಯಗಳನ್ನು ವ್ಯಾಟ್ಸ್‌ಆ್ಯಪ್‌ಗೆ ಕಳಿಸಿದ್ದರಂತೆ. ಇದನ್ನು ಸ್ವತಃ ಶೆರ್ಲಿನ್ ಕೆಲದಿನಗಳ ಹಿಂದೆ ಸಂದರ್ಶನಗಳಲ್ಲಿ ಹೇಳಿದ್ದರು.

ವಿವಾದ ಮಾಡಿಕೊಳ್ಳುವುದು ವರ್ಮಾ ಸ್ಟೈಲ್, ಪಾಲಿಸಿ. ನಮಗೆ ವಿವಾದವಾಗಿ ಕಾಣುವುದು ವರ್ಮಾಗೆ ಕಾಮನ್ ವಿಚಾರ. ಈ ಹಿಂದೆ ಪವನ್ ಕಲ್ಯಾಣ್ ಬಗ್ಗೆ ವ್ಯಂಗ್ಯವಾಡಿದ್ದರು. ಈ ಹಿಂದೆ ಇವರು ಮಾಡಿದ್ದ 'ಸಾವಿತ್ರಿ' ಅನ್ನುವ ವಯಸ್ಕರ ಸಿನೆಮಾ ಪೋಸ್ಟರ್ ವಿವಾದ ಹುಟ್ಟುಹಾಕಿತ್ತು. 'ಲಕ್ಷ್ಮೀಸ್ ಎನ್‌ಟಿಆರ್' ಸಿನೆಮಾ ಮಾಡಿ ತೆಲುಗು ಚಿತ್ರರಂಗದ ದೊಡ್ಮನೆಯನ್ನು ಎದುರು ಹಾಕಿಕೊಂಡಿದ್ದರು ವರ್ಮಾ.
ಹಾಗೆ ನೋಡಿದರೆ ಇವರಷ್ಟು ವಿವಾದಗಳನ್ನು ಯಾವ ಸೆಲೆಬ್ರಿಟಿಯೂ ಮಾಡಿಕೊಂಡಂತಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌