ಆ್ಯಪ್ನಗರ

ರ‍್ಯಾಂಬೋ-2 ಸರ್‌ಪ್ರೈಸ್‌ಗಳ ಪ್ಯಾಕೇಜ್‌

ಶರಣ್‌ ಮತ್ತು ಆಶಿಕಾ ರಂಗನಾಥ್‌ ನಟನೆಯ ’ರ‍್ಯಾಂಬೋ-2' ಸ್ಯಾಂಡಲ್‌ವುಡ್‌ನಲ್ಲಿ ನಿರೀಕ್ಷೆ ಮೂಡಿಸಿದೆ. ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಸಿನಿಮಾದಲ್ಲಿ ಹಲವು ವಿಶೇಷಗಳಿದ್ದು, ಈ ಚಿತ್ರವನ್ನು ಯಾವ ಕಾರಣಗಳಿಗಾಗಿ ಪ್ರೇಕ್ಷಕರು ನೋಡಬೇಕು ಎನ್ನುವುದನ್ನು ಲವಲವಿಕೆಯ ಜತೆ ಹಂಚಿಕೊಂಡಿದ್ದಾರೆ ನಿರ್ದೇಶಕ ಅನಿಲ್‌ ಕುಮಾರ್‌.

Vijaya Karnataka 18 May 2018, 11:37 am
*ಹರೀಶ್‌ ಬಸವರಾಜ್‌
Vijaya Karnataka Web rambo2


ಭರ್ಜರಿ ಮನರಂಜನೆಯ ಜತೆಗೆ 'ರ‍್ಯಾಂಬೋ-2' ಚಿತ್ರದಲ್ಲಿ ಸಾಕಷ್ಟು ಸರ್‌ಪ್ರೈಸ್‌ಗಳಿವೆಯಂತೆ. ಹಾಗಾಗಿ ಎಲ್ಲ ವರ್ಗದ ಜನರಿಗೂ ಈ ಸಿನಿಮಾ ಇಷ್ಟವಾಗಲಿದೆ ಅಂತಾರೆ ನಿರ್ದೇಶಕ ಅನಿಲ್‌ಕುಮಾರ್‌. ಜತೆಗೆ ಯಾವೆಲ್ಲ ಸರ್‌ಪ್ರೈಸ್‌ಗಳಿವೆಯೋ ಎಲ್ಲವೂ ಹಂತಹಂತದಲ್ಲಿ ರಿವೀಲ್‌ ಆಗುವುದರಿಂದ ಸಿನಿಮಾದ ಜತೆಯೇ ನೋಡುಗರು ಕೂಡ ಜರ್ನಿ ಮಾಡುತ್ತಾರಂತೆ. ಇಂತಹ ವಿಶೇಷ ಅನುಭವ ನೀಡುವಂತಹ ಚಿತ್ರ ಇದಾಗಿದೆ ಎನ್ನುವುದು ನಿರ್ದೇಶಕರ ಮಾತು.

'ರ‍್ಯಾಂಬೋ-2’ ಚಿತ್ರವು ಫನ್‌ ಎಂಟರ್‌ಟೈನಿಂಗ್‌ ಜತೆಗೆ ಉತ್ತಮ ಸಂದೇಶ ನೀಡುವಂಥ ಸಿನಿಮಾ. ಶರಣ್‌ ಮತ್ತು ಚಿಕ್ಕಣ್ಣ ಅವರ ಕಾಂಬಿನೇಶನ್‌ ಅಂದರೆ ಜನ ಕಾಮಿಡಿಯನ್ನೇ ನಿರೀಕ್ಷೆ ಮಾಡುತ್ತಾರೆ. ಅಲ್ಲದೇ ಹಿಟ್‌ ಜೋಡಿ ಕೂಡ ಇದು. ಈವರೆಗೂ ಕಾಣದೇ ಇರುವಂಥ ರೀತಿಯಲ್ಲಿ ಶರಣ್‌ ಮತ್ತು ಚಿಕ್ಕಣ್ಣ ಅವರನ್ನು ತೋರಿಸಲಾಗಿದೆ. ಅವರ ಸಂಭಾಷಣೆ, ಅಭಿನಯ, ಗೆಟಪ್‌ ಎಲ್ಲವೂ ವಿಭಿನ್ನ ಆಗಿವೆ. ಇದೆಲ್ಲದರ ಜತೆಗೆ ಸಿನಿಮಾದಲ್ಲಿ ಒಂದೊಳ್ಳೆ ಎಮೋಷನ್‌ ಪಾಯಿಂಟ್‌ ಕೂಡ ಇದೆ' ಇವೆಲ್ಲವೂ ನೋಡುಗರಿಗೆ ಇಷ್ಟವಾಗಲಿವೆ' ಅಂತಾರೆ ನಿರ್ದೇಶಕ ಅನಿಲ್‌.

ಸರ್‌ಪ್ರೈಸ್‌ಗಳ ಮೂಟೆಯೇ ರ‍್ಯಾಂಬೋ-2. ಈಗಾಗಲೇ ಅರುಣ್‌ಸಾಗರ್‌ ಪುತ್ರಿ ಗಾಯನ ಗಮನ ಸೆಳೆದಿದೆ. ಮೆಹಬೂಬ್‌ ಗಾಯನ, ಐಂದ್ರಿತಾ ರೇ ಡಾನ್ಸ್‌, ಐದು ಜನ ನಾಯಕಿಯರ ಡಾನ್ಸ್‌ ಸೇರಿದಂತೆ ಮನರಂಜನೆಗೆ ಬೇಕಾಗುವ ಎಲ್ಲ ಅಂಶಗಳನ್ನು ಒಳಗೊಂಡಿರುವ ಚಿತ್ರವಿದು. ಚುಟು ಚುಟು ಹಾಡಿಗೆ ಕನ್ನಡದಲ್ಲಿ ಮಾತ್ರವಲ್ಲ, ಬೇರೆ ಭಾಷೆಯ ನೋಡುಗರು ಕೂಡ ಫಿದಾ ಆಗಿದ್ದಾರೆ. ಟೆಕ್ನಿಕಲಿ ಸಿಕ್ಕಾಪಟ್ಟೆ ಸ್ಟ್ರಾಂಗ್‌ ಆಗಿರುವಂಥ ಚಿತ್ರ ಇದಾಗಿದೆಯಂತೆ. ಹಾಗಾಗಿ ಯಾವುದೇ ಭಾಷೆಗೆ ಸಡ್ಡು ಹೊಡೆಯುವಂಥ ಚಿತ್ರ ಇದಾಗಿದೆ ಎನ್ನುವುದು ನಿರ್ದೇಶಕರ ಮಾತು.

ಈ ಚಿತ್ರವನ್ನು ಲಡ್ಡು ಸಿನಿಮಾ ಹೌಸ್‌ ಬ್ಯಾನರ್‌ನಡಿ ಅಟ್ಲಾಂಟ ನಾಗೇಂದ್ರ ನಿರ್ಮಾಣ ಮಾಡಿದ್ದಾರೆ. ಸದ್ಯ ಕರ್ನಾಟಕದಲ್ಲಿ ಮಾತ್ರ ಚಿತ್ರ ಬಿಡುಗಡೆಯಾಗಲಿದ್ದು, ಎರಡು ವಾರದ ನಂತರ ಆಸ್ಪ್ರೇಲಿಯಾ, ಕೆನಡಾ, ಯುಎಸ್‌ಎ ಸೇರಿದಂತೆ ಎಲ್ಲ ರಾಷ್ಟ್ರಗಳಲ್ಲಿಯೂ ರಿಲೀಸ್‌ ಮಾಡುವ ಪ್ಲಾನ್‌ ನಿರ್ಮಾಪಕರದ್ದು.

ಡಿಫರೆಂಟ್‌ ಆಗಿರುವ ಕಥೆ ಸಿನಿಮಾದಲ್ಲಿದೆ. ಅಲ್ಲದೇ, ಎಲ್ಲ ಟೆಕ್ನಿಶಿಯನ್ಸ್‌ ಸೇರಿ ಮಾಡಿರುವ ಚಿತ್ರವಿದು. ಹಾಗಾಗಿ ವಿಭಿನ್ನವಾಗಿ ನಿರ್ಮಾಣವಾಗಿದೆ. ಟೆಕ್ನಿಕಲಿ ಸ್ಟ್ರಾಂಗ್‌ ಆಗಿದೆ. ಹಾಗಾಗಿ ನಾನು ಈ ಚಿತ್ರವನ್ನು ನಿರ್ಮಾಣ ಮಾಡಲು ಒಪ್ಪಿಕೊಂಡೆ. ಕರ್ನಾಟಕದಲ್ಲಿ ಒಟ್ಟು 200 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ.
ಅಟ್ಲಾಂಟ ನಾಗೇಂದ್ರ, ನಿರ್ಮಾಪಕ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌