ಆ್ಯಪ್ನಗರ

ಮತ ಯಾಕೆ ಚಲಾಯಿಸಬೇಕು? ರಮೇಶ್ ಅರವಿಂದ್ ಏನಂತಾರೆ?

ಕರ್ನಾಟಕ ವಿಧಾನಸಭೆ ಚುನಾವಣೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಅದೆಷ್ಟೋ ಜನ ಯಾರಿಗೆ ಮತ ಹಾಕಿದರೂ, ಏನೂ ಪ್ರಯೋಜನ ಇಲ್ಲ ಎಂಬ ಧೋರಣೆ ತೋರುತ್ತಾರೆ. ಇಷ್ಟಕ್ಕೂ ನಾವ್ಯಾಕೆ ಮತದಾನ ಮಾಡಬೇಕು.

TNN 17 Apr 2018, 11:52 am
ಕರ್ನಾಟಕ ವಿಧಾನಸಭೆ ಚುನಾವಣೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಅದೆಷ್ಟೋ ಜನ ಯಾರಿಗೆ ಮತ ಹಾಕಿದರೂ, ಏನೂ ಪ್ರಯೋಜನ ಇಲ್ಲ ಎಂಬ ಧೋರಣೆ ತೋರುತ್ತಾರೆ. ಇಷ್ಟಕ್ಕೂ ನಾವ್ಯಾಕೆ ಮತದಾನ ಮಾಡಬೇಕು. ಮತದಾನ ಮಾಡುವುದರಿಂದ ನಮಗಾಗುವ ಪ್ರಯೋಜನ ಏನು? ಎನ್ನುವವರಿಗೆ ನಟ, ನಿರ್ದೇಶಕ ರಮೇಶ್ ಅರವಿಂದ್ ಅವರ ಈ ಮಾತುಗಳನ್ನು ಕೇಳಿ.
Vijaya Karnataka Web ramesh-aravind


'ವ್ಯವಸ್ಥೆ ಸರಿಯಿಲ್ಲ, ಭ್ರಷ್ಟಾಚಾರ ಜಾಸ್ತಿ ಆಗ್ತಿದೆ ಎಂದು ಕಂಪ್ಲೇಂಟ್ ಮಾಡುತ್ತಾ, ಕೊರಗುತ್ತಾ, ಬೆರಳು ತೋರಿಸುವಂತ ಒಂದು ಗುಂಪು. ನಾನು ನಿರೀಕ್ಷಿಸುವ ಬದಲಾವಣೆ ನಾನೇ ಆಗ್ತೀನಿ ಎಂದು ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುವಂತಹ ಎರಡನೇ ಗುಂಪು. ಇನ್ನು ಮೂರನೇ ಗುಂಪು ಸಕ್ರಿಯವಾಗಿ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲೂ ಆಗುತ್ತಿಲ್ಲ, ಸುಮ್ಮನೇ ಕೂರಕ್ಕೂ ಆಗ್ತಿಲ್ಲ. ನಾನೇನು ಮಾಡಲಿ ಎಂದು ಒದ್ದಾಡುತ್ತಿದ್ದಾರೆ.

ಸೋ ಈ ಮೂರನೇ ಗುಂಪಿನವರಾಗಲಿ ಮೊದಲನೇ ಗುಂಪಿನವರಾಗಲಿ, ಅವರಿಗಿರುವಂತಹ ಮುಖ್ಯವಾದ ಜವಾಬ್ದಾರಿ ಎರಡನೇ ಗುಂಪಿನಲ್ಲಿದ್ದಾರಲ್ಲಾ ಅದರಲ್ಲಿ ಶ್ರೇಷ್ಠವಾದ ಅಭ್ಯರ್ಥಿಗಳು ಯಾರು, ನ್ಯಾಯವಾದ ಅಭ್ಯರ್ಥಿಗಳು ಯಾರು ಎಂಬುದು ತಿಳಿದುಕೊಂಡು ಅವರನ್ನು ಆಯ್ಕೆ ಮಾಡಿ ಅವರಿಗೆ ಅಧಿಕಾರ ಕೊಡಬೇಕು. ಹಾಗಾಗಿ ಮತಚಲಾಯಿಸುವುದು ಮುಖ್ಯ. ಸರಿಯಾದ ಅಭ್ಯರ್ಥಿಗೆ ಮತವನ್ನು ಚಲಾಯಿಸುವುದು ಅಷ್ಟೇ ಮುಖ್ಯವಾಗುತ್ತದೆ.

ಮತ ಯಾಕೆ ಚಲಾಯಿಸಬೇಕು? ಅದು ನಿಮಗೆ ಒಂದು ದಿನದ ಕೆಲಸ ಇರಬಹುದು. ಆದರೆ ಮುಂದಿನ ಐದು ವರ್ಷಗಳು ಮಾತ್ರ ಅಲ್ಲ. ನಿಮ್ಮ ಮಕ್ಕಳ ಭವಿಷ್ಯ, ನಿಮ್ಮ ಮುಂದಿನ ಪೀಳಿಗೆಯ ಭವಿಷ್ಯ ಆ ಒಂದು ದಿನದ ಮೇಲೆ ನಿರ್ಧಾರ ಆಗುತ್ತೆ. ಹಾಗಾಗಿ ಭವಿಷ್ಯ ಅನ್ನುವುದು ನಿಮ್ಮ ಕೈಯಲ್ಲಿದೆ ಅಂತ ಹೇಳ್ತಾರೆ. ಅದು ನಿಮ್ಮ ಕೈಯಲ್ಲಿಲ್ಲ, ನಿಮ್ಮ ಬೆರಳಲ್ಲಿದೆ. ಓಟಿಂಗ್ ಮೆಷಿನ್ ಒತ್ತುತ್ತೀರಲ್ಲಾ ಆ ಬೆರಳಲ್ಲಿದೆ. ಹಾಗಾಗಿ ಮತವನ್ನು ಚಲಾಯಿಸಿ. ಅದನ್ನು ಸರಿಯಾದ ಅಭ್ಯರ್ಥಿಗೆ ಚಲಾಯಿಸಬೇಕು.

ಸುಳ್ಳು ಪ್ರಚಾರಗಳ ಮೂಲಕ ನಾನೇ ಇಂದ್ರ, ನಾನೇ ಚಂದ್ರ ಎಂದು ಯಾರ್ಯಾರೋ ಹೇಳಿಕೊಳ್ಳುತ್ತಿದ್ದಾರೆ. ಈ ತರಹ ಇಮೇಜ್ ಬಿಲ್ಡಿಂಗ್ ಮಧ್ಯೆ ಸರಿಯಾದ ಅಭ್ಯರ್ಥಿಗಳು ಯಾರು, ನಿಮ್ಮ ಕ್ಷೇತ್ರದ ಬಗ್ಗೆ, ನನ್ನ ಕ್ಷೇತ್ರದ ಜನಕ್ಕೆ ಒಳ್ಳೆಯದಾಗಬೇಕು, ನನ್ನ ಕ್ಷೇತ್ರ ಅಭಿವೃದ್ಧಿಯಾಗಬೇಕು ಎಂದು ಆಸೆಪಡುವಂತಹ ಆ ನ್ಯಾಯವಾದ ವ್ಯಕ್ತಿ ಯಾರು ಅಂತ ಹುಡುಕುವುದು, ಅವರನ್ನು ಆಯ್ಕೆ ಮಾಡುವುದು ನಿಮ್ಮ ಜವಾಬ್ದಾರಿ ಎಂದಿದ್ದಾರೆ ನಟ, ನಿರ್ದೇಶಕ ರಮೇಶ್ ಅರವಿಂದ್. ಸೋ ಮತದಾನ ಮಾಡುವುದನ್ನು ಮರೆಯಬೇಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌