ಆ್ಯಪ್ನಗರ

'ಶಿವಗಾಮಿ' ಜತೆ ಟೀಂ ಇಂಡಿಯಾ ಸಾರಥಿ ವಿರಾಟ್ ಕೊಹ್ಲಿ

ಜಗತ್ತಿನಾದ್ಯಂತ ಗೆಲುವಿನ ಪತಾಕೆ ಹಾರಿಸಿದ ಸಿನಿಮಾ 'ಬಾಹುಬಲಿ 2'. ಇತ್ತೀಚೆಗೆ ಈ ಚಿತ್ರಕ್ಕೆ ವಾಹಿನಿಯೊಂದು ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿ ನೀಡಿ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರನ್ನು ಗೌರವಿಸಿತು.

Vijaya Karnataka Web 2 Dec 2017, 4:29 pm
ಜಗತ್ತಿನಾದ್ಯಂತ ಗೆಲುವಿನ ಪತಾಕೆ ಹಾರಿಸಿದ ಸಿನಿಮಾ 'ಬಾಹುಬಲಿ 2'. ಇತ್ತೀಚೆಗೆ ಈ ಚಿತ್ರಕ್ಕೆ ವಾಹಿನಿಯೊಂದು ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿ ನೀಡಿ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರನ್ನು ಗೌರವಿಸಿತು. ಈ ಕಾರ್ಯಕ್ರಮದಲ್ಲಿ ಚಿತ್ರದ ನಿರ್ಮಾಪಕ ಶೋಭು ಯಾರ್ಲಗಡ್ಡ, 'ಶಿವಗಾಮಿ' ರಮ್ಯಾ ಕೃಷ್ಣನ್ ಸಹ ಹಾಜರಾಗಿದ್ದರು. ವಿಶೇಷ ಅತಿಥಿಯಾಗಿ ಟೀಂ ಇಂಡಿಯಾ ಸಾರಥಿ ವಿರಾಟ್ ಕೊಹ್ಲಿಯನ್ನೂ ಆಹ್ವಾನಿಸಲಾಗಿತ್ತು.
Vijaya Karnataka Web ramya krishnan meets virat kohli
'ಶಿವಗಾಮಿ' ಜತೆ ಟೀಂ ಇಂಡಿಯಾ ಸಾರಥಿ ವಿರಾಟ್ ಕೊಹ್ಲಿ


ಈ ಸಂದರ್ಭದಲ್ಲಿ ವೇದಿಕೆ ಮೇಲೆ ವಿರಾಟ್ ಕೊಹ್ಲಿ ಜತೆಗಿನ ಫೋಟೋವನ್ನು ನಟಿ ರಮ್ಯಾಕೃಷ್ಣ ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಕೊಹ್ಲಿ ಒಳ್ಳೆಯ ವ್ಯಕ್ತಿ ಎಂದು, ಅವರನ್ನು ಭೇಟಿಯಾಗಿದ್ದು ತುಂಬಾ ಖುಷಿಯಾಯಿತು ಎಂದಿದ್ದಾರೆ.

ಈ ಫೋಟೋ ಈಗ ಅತ್ತ ರಮ್ಯಕೃಷ್ಣ ಇತ್ತ ಕೊಹ್ಲಿ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ. ಕನ್ನಡದ ಪುಷ್ಪಕ ವಿಮಾನ ಚಿತ್ರದಿಂದ ಹಿಡಿದು ಇದೀಗ ತೆರೆಗೆ ಬರಲು ಸಿದ್ಧವಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಅಂಜನಿ ಪುತ್ರ'ದಲ್ಲೂ ಅಭಿನಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌