ಆ್ಯಪ್ನಗರ

Rana Daggubati:ಅನುಷ್ಕಾ ಶೆಟ್ಟಿ ಜೊತೆ ರಾಣಾ ದಗ್ಗುಬಾಟಿ ರೊಮಾನ್ಸ್!

ಬಾಹುಬಲಿ, ರುದ್ರಮ್ಮ ದೇವಿ ಹಾಗೂ ಝೀರೋ ಚಿತ್ರಗಳಲ್ಲಿ ಈ ಮೊದಲು ರಾಣಾ ಹಾಗೂ ಅನುಷ್ಕಾ ಒಟ್ಟಾಗಿ ನಟಿಸಿದ್ದರು. ಆದರೆ, ಬಾಹುಬಲಿ ಚಿತ್ರದಲ್ಲಿ ನಟಿಸಿದ್ದ ಪ್ರಭಾಸ್-ಅನುಷ್ಕಾ ಜೋಡಿ ತುಂಬಾ ಜನಪ್ರಿಯ ಎನಿಸಿತ್ತು. ತೆರೆಯ ಮೇಲೆ ರೊಮಾನ್ಸ್ ಮಾಡಿದ್ದ ಪ್ರಭಾಸ್-ಅನುಷ್ಕಾ ಜೋಡಿಯನ್ನು ಪ್ರೇಕ್ಷಕರು ಮೆಚ್ಚಿದ್ದರು.

Vijaya Karnataka Web 20 Feb 2019, 5:11 pm
ಟಾಲಿವುಡ್ ಸ್ವೀಟಿ ಚೆಂದುಳ್ಳಿ ಚೆಲುವೆ ಅನುಷ್ಕಾ ಶೆಟ್ಟಿ ಪ್ರಭಾಸ್ ಬಿಟ್ಟು ರಾಣಾ ದಗ್ಗುಬಾಟಿಗೆ 'ಹಾಯ್' ಎಂದಿದ್ದಾರೆ. ಹೀಗೊಂದು ಸುದ್ದಿ ತಮಿಳು ಚಿತ್ರಲೋಕದಿಂದ ತೆಲುಗಿಗೆ ಹಾರಿ ಹೋಗಿ ಇಡೀ ಸೌತ್ ಇಂಡಿಯಾ ಗುಲ್ಲಾಗಿದೆ. ಅಚ್ಚರಿ ಎಂಬಂತೆ, ಅನುಷ್ಕಾ-ಮಾಧವನ್ ಜೋಡಿಯ ಈ 'ಸೈಲೆನ್ಸ್' ಚಿತ್ರದಿಂದ ಪ್ರಭಾಸ್ ಹಿಂದೆ ಸರಿದಿದ್ದಾರೆ. ಆದರೆ, ಊಹಿಸಲಾಗದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವೊಂದಕ್ಕೆ ರಾಣಾ ದಗ್ಗುಬಾಟಿ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಯಲ್ಲಿ ಅನುಷ್ಕಾ ಪಾತ್ರ ಏನೂ ಇರದಿದ್ದರೂ ಎಲ್ಲರೂ ಅನುಷ್ಕಾ ಅವರನ್ನೇ ಟಾರ್ಗೆಟ್ ಮಾಡಿಕೊಂಡು ರಾಣಾ-ಅನುಷ್ಕಾ ಮಧ್ಯೆ ಏನೋ ಇದೆ ಎಂದು ಗುಸುಗುಸು ಶುರು ಮಾಡಿಕೊಂಡಿದ್ದಾರೆ.
Vijaya Karnataka Web anushka20


ಕಾಲ್‌ಶೀಟ್ ಸಮಸ್ಯೆಯಿಂದ ಪ್ರಭಾಸ್ 'ಸೈಲೆನ್ಸ್' ಚಿತ್ರದಲ್ಲಿ ನಟಿಸುತ್ತಿಲ್ಲ ಎನ್ನಲಾಗಿದೆ. ಪ್ರಭಾಸ್-ಅನುಷ್ಕಾ ಜೋಡಿಯನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಸಿನಿ ಪ್ರೇಕ್ಷಕರು ಪ್ರಭಾಸ್ ನೋ ಎಂದಿದ್ದಕ್ಕೆ ಬೇಸರಗೊಂಡಿದ್ದರು. ಅದೇ ಸಮಯದಲ್ಲಿ ಚಿತ್ರತಂಡಕ್ಕೆ ರಾಣಾ ದಗ್ಗುಬಾಟಿ ಸೇರಿಕೊಂಡಿದ್ದೇ ತಡ, ಅನುಷ್ಕಾ-ರಾಣಾ ದಗ್ಗುಬಾಟಿ ಲವ್ ಮಾಡತೊಡಗಿದ್ದಾರೆ ಎಂದೇ ಊಹಿಸಲು ಪ್ರಾರಂಭಿಸಿದ್ದಾರಂತೆ ಕೆಲವು ಮಂದಿ. ಆದರೆ, ಸೈಲೆನ್ಸ್ ಚಿತ್ರದ ಸೈಲೆಂಟ್ ಪಾತ್ರದಂತೆ ಅನುಷ್ಕಾ ಎಲ್ಲದಕ್ಕೂ ಸೈಲೆಂಟ್ ಆಗಿದ್ದಾರೆ.

ಬಾಹುಬಲಿ, ರುದ್ರಮ್ಮ ದೇವಿ ಹಾಗೂ ಝೀರೋ ಚಿತ್ರಗಳಲ್ಲಿ ಈ ಮೊದಲು ರಾಣಾ ಹಾಗೂ ಅನುಷ್ಕಾ ಒಟ್ಟಾಗಿ ನಟಿಸಿದ್ದರು. ಆದರೆ, ಬಾಹುಬಲಿ ಚಿತ್ರದಲ್ಲಿ ನಟಿಸಿದ್ದ ಪ್ರಭಾಸ್-ಅನುಷ್ಕಾ ಜೋಡಿ ತುಂಬಾ ಜನಪ್ರಿಯ ಎನಿಸಿತ್ತು. ತೆರೆಯ ಮೇಲೆ ರೊಮಾನ್ಸ್ ಮಾಡಿದ್ದ ಪ್ರಭಾಸ್-ಅನುಷ್ಕಾ ಜೋಡಿಯನ್ನು ಮೆಚ್ಚಿ ಹರಸಿದ್ದ ಪ್ರೇಕ್ಷಕರು, ನಿಜ ಜೀವನದಲ್ಲೂ ಈ ಜೋಡಿ ಮದುವೆ ಆಗಲಿದ್ದಾರೆ ಎಂದೇ ಭಾವಿಸಿಕೊಂಡಿದ್ದರು. ಪ್ರಭಾಸ್-ಅನುಷ್ಕಾ ತಾವಿಬ್ಬರೂ ತೆರೆಯ ಮೇಲಷ್ಟೇ ಜೋಡಿ ಎಂದು ಅದೆಷ್ಟೇ ಬಾರಿ ಹೇಳಿದ್ದರೂ ಯಾರೊಬ್ಬರೂ ಕಿವಿಗೆ ಹಾಕಿಕೊಳ್ಳಲು ಸಿದ್ಧರಿರಲಿಲ್ಲ.

ಮಾಧವನ್ ನಾಯಕತ್ವ ಹಾಗೂ ನಿರ್ದೇಶನದ 'ಸೈಲೆನ್ಸ್' ಚಿತ್ರದಲ್ಲಿ ಪ್ರಭಾಸ್ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವುದು ಹಾಗೂ ಪ್ರಭಾಸ್ ಜೋಡಿಯಾಗಿ ಅನುಷ್ಕಾ ಆಯ್ಕೆ ಕೂಡ ನಡೆದಿತ್ತು. ಆದರೆ, ಅನಿವಾರ್ಯ ಬೆಳವಣಿಗೆಯಲ್ಲಿ ಆ ಜಾಗಕ್ಕೆ ರಾಣಾ ದಗ್ಗುಬಾಟಿ ಬಂದು ಕುಳಿತಿದ್ದಾರೆ. ಈ ಸಂಗತಿಯಿಂದ ಶಾಕ್ ಆಗಿರುವ ಪ್ರಭಾಸ್-ಅನುಷ್ಕಾ ಜೋಡಿಯ ಅಭಿಮಾನಿಗಳು ಸುಖಾಸುಮ್ಮನೆ ರಾಣಾ ಆಯ್ಕೆಯ ಹಿಂದೆ ಅನುಷ್ಕಾ ಕೈವಾಡದ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಅನುಷ್ಕಾ ತಮ್ಮ ಕೆಲಸದ ಬಗ್ಗೆ ಮಾತ್ರ ಯೋಚಿಸುತ್ತ 'ಸೈಲೆಂಟ್' ಆಗಿ ನೆಮ್ಮದಿಯಾಗಿದ್ದಾರೆ ಎನ್ನುವಲ್ಲಿಗೆ ರಾಣಾ-ಅನುಷ್ಕಾ' ಪುರಾಣಕ್ಕೆ ಫುಲ್ ಸ್ಟಾಪ್ ಹಾಕಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌