ಆ್ಯಪ್ನಗರ

ನಾಯಕ ನಟನಾಗಿ ಕನ್ನಡಕ್ಕೆ ರಾಣಾ ದಗ್ಗುಬಾಟಿ

ಬಾಹುಬಲಿ ಚಿತ್ರದ ಬಲ್ಲಾಳದೇವ ಖ್ಯಾತಿಯ ರಾಣಾ ದಗ್ಗುಬಾಟಿ ಕನ್ನಡ ಸಿನಿಮಾವೊಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಎಲ್‌ಟಿಟಿಯ ವಿಷಯ ಹೊತ್ತು ತೆರೆಗೆ ಬರಲಿರುವ ಸಿನಿಮಾದಲ್ಲಿ ಇವರು ನಾಯಕನಾಗಿ ನಟಿಸುತ್ತಿದ್ದಾರೆ.

Vijaya Karnataka 13 Aug 2018, 12:29 pm
Vijaya Karnataka Web rana-daggubati
ಬಾಹುಬಲಿ ಚಿತ್ರದ ಬಲ್ಲಾಳದೇವ ಖ್ಯಾತಿಯ ರಾಣಾ ದಗ್ಗುಬಾಟಿ ಕನ್ನಡ ಸಿನಿಮಾವೊಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಎಲ್‌ಟಿಟಿಯ ವಿಷಯ ಹೊತ್ತು ತೆರೆಗೆ ಬರಲಿರುವ ಸಿನಿಮಾದಲ್ಲಿ ಇವರು ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಕನ್ನಡದ ನಿರ್ದೇಶಕ ಎಎಂಆರ್‌ ರಮೇಶ್‌ ನಿರ್ದೇಶಿಸುವುದರ ಜತೆಗೆ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಇವರ ಜತೆ ರಾಣಾ ತಂದೆ ಸುರೇಶ್‌ ಕೂಡ ಕೈ ಜೋಡಿಸಿರುವುದು ವಿಶೇಷ.

ಈ ಕುರಿತು ನಿರ್ದೇಶಕರು ಹೇಳುವುದು ಹೀಗೆ, 'ಸಾಮಾನ್ಯವಾಗಿ ನಾನು ನೈಜ ಘಟನೆಗಳನ್ನೇ ಆಧರಿಸಿದ ಚಿತ್ರ ಮಾಡಿದ್ದೇನೆ. ಎಲ್‌ಟಿಟಿ ಕೂಡ ಅದೇ ಮಾದರಿಯ ಸಿನಿಮಾ. ಈಗಾಗಲೇ ಕಥೆಯನ್ನು ರಾಣಾಗೆ ಹೇಳಿದ್ದೇನೆ. ಅವರು ಕೂಡ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ. ಜನವರಿ 2019ರಲ್ಲಿ ಈ ಚಿತ್ರ ಸೆಟ್ಟೇರಲಿದೆ' ಅಂತಾರೆ ನಿರ್ದೇಶಕರು.

ರಾಣಾ ಯಾವ ರೀತಿಯ ಪಾತ್ರ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ನಿರ್ದೇಶಕರು ಬಿಟ್ಟುಕೊಟ್ಟಿಲ್ಲ. ಆದರೆ, ಎಲ್‌ಟಿಟಿಯ ಪ್ರಮುಖರೊಬ್ಬರ ಪಾತ್ರ ಅದಾಗಿದೆ ಎನ್ನಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌