ಆ್ಯಪ್ನಗರ

ಟ್ರೋಲ್‌ ಮಾಡಿದೋರಿಗೆ ಟಾಂಗ್‌ ಕೊಟ್ಟ ರಶ್ಮಿಕಾ ಮಂದಣ್ಣ

ರಶ್ಮಿಕಾ ಕನ್ನಡ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎನ್ನುವ ಆರೋಪ ಎದುರಾಗಿದೆ. ಇದಕ್ಕೆ ಸ್ವತಃ ರಶ್ಮಿಕಾ ಅವರೇ ಉತ್ತರ ನೀಡಿದ್ದಾರೆ.

Vijaya Karnataka 19 Sep 2018, 11:58 am
* ಹರೀಶ್‌ ಬಸವರಾಜ್‌
Vijaya Karnataka Web Rashmika12


ರಶ್ಮಿಕಾ ಕನ್ನಡ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎನ್ನುವ ಆರೋಪ ಎದುರಾಗಿದೆ. ಇದಕ್ಕೆ ಸ್ವತಃ ರಶ್ಮಿಕಾ ಅವರೇ ಉತ್ತರ ನೀಡಿದ್ದಾರೆ.

*ವೃತ್ರ ಸಿನಿಮಾದಿಂದ ಹೊರಬಂದ ಕಾರಣವೇನು?

ವೃತ್ರ ಸಿನಿಮಾ ಒಂದು ಫಿಮೇಲ್‌ ಓರಿಯೆಂಟೆಡ್‌ ಚಿತ್ರ. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುವಷ್ಟರ ಮಟ್ಟಕ್ಕೆ ನಾನಿನ್ನೂ ಬೆಳೆದಿಲ್ಲ. ಜತೆಗೆ ನಾನು ಇನ್ನೂ ಕೆಲಸ ಮಾಡುವುದು ಬಹಳಷ್ಟಿದೆ. ಅಲ್ಲದೆ ಡೆಬ್ಯೂ ಡೈರೆಕ್ಟರ್‌ ಆಗಬಹುದು, ಡೆಬ್ಯೂ ನಿರ್ಮಾಪಕರು ನನ್ನ ಸಿನಿಮಾ ಮಾಡಿ ತೊಂದರೆಗೆ ಒಳಗಾಗುವುದು ಬೇಡ. ಎಲ್ಲರೂ ಖುಷಿಯಾಗಿರಬೇಕು ಎಂಬ ಉದ್ದೇಶವಿದೆ ನಂಗೆ. ಈ ಎಲ್ಲ ಕಾರಣಗಳಿಂದ ನಾನು ನಿರ್ದೇಶಕರ ಜತೆ ಮಾತನಾಡಿ ಆ ಸಿನಿಮಾದಿಂದ ಹೊರ ಬಂದಿದ್ದೇನೆ.

*ನೀವು ಅದರಿಂದ ಹೊರಬಂದ ನಂತರ ನೀವು ಕನ್ನಡ ಸಿನಿಮಾವನ್ನು ಮಾಡುವುದೇ ಇಲ್ಲ ಎಂಬಂತೆ ಬಿಂಬಿತವಾಗುತ್ತಿದೆಯಲ್ಲಾ?

ನಾನು ನಟಿಯಾಗಿದ್ದು ಇದೇ ಕನ್ನಡದಿಂದ. ಒಳ್ಳೆ ಸ್ಕ್ರಿಪ್ಟ್‌ , ಒಳ್ಳೆ ಟೀಮ್‌ ಸಿಕ್ಕರೆ ಖಂಡಿತಾ ನಟಿಸುತ್ತೇನೆ. ಪ್ರತಿ ತಿಂಗಳಲ್ಲಿ ಹತ್ತು ದಿನ ಕನ್ನಡ ಸಿನಿಮಾಗಾಗಿ ಮೀಸಲಿಡಬೇಕು ಎಂದು ನನ್ನ ಟೀಮ್‌ಗೆ ಈಗಾಗಲೇ ಹೇಳಿದ್ದೇನೆ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ಆದರೆ ಈ ಟ್ರೋಲ್‌ ಮಾಡುವವರು, ಮತ್ತು ಇತರೆ ಜನಗಳು ಕನ್ನಡ ಸಿನಿಮಾ ಮಾಡ್ತಾ ಇಲ್ಲ, ತೆಲುಗಿಗೆ ಹೋಗಿ ಸೆಟಲ್‌ ಆಗಿ ಹಾಗೇ ಹೀಗೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಹಾಕ್ತಾ ಇದ್ದಾರೆ. ಅವರೆಲ್ಲರಿಗೂ ಹೇಳ್ತಾ ಇದ್ದೇನೆ. ದರ್ಶನ್‌ ಅವರ ಜತೆ ಯಜಮಾನ ಸಿನಿಮಾ ಮಾಡಿದ್ದೇನೆ. ಅದು ಸದ್ಯದಲ್ಲೇ ಬಿಡುಗಡೆಯಾಗುತ್ತದೆ. ನಾನು ನನ್ನ ಪಾಡಿಗೆ ಕೆಲಸ ಮಾಡ್ತಾ ಇದ್ದೇನೆ. ಯಾಕೆ ಈ ರೀತಿ ಇಲ್ಲ ಸಲ್ಲದ ವಿಷಯ ಹಬ್ಬಿಸುತ್ತಾರೋ ಗೊತ್ತಿಲ್ಲ. ನಾನು ಮತ್ತೆ ಮತ್ತೆ ಹೇಳುತ್ತಿದ್ದೇನೆ.. ನಾನು ಎಲ್ಲೂ ಹೋಗಿಲ್ಲ, ಇಲ್ಲೇ ಇದ್ದೇನೆ.

*ಹಾಗಾದ್ರೆ ಯಜಮಾನ ನಂತರ ಕನ್ನಡ ಸಿನಿಮಾ ಯಾವುದು?

ಖಂಡಿತಾ ಮಾಡ್ತೇನೆ. ಈಗ ಸದ್ಯ ಎರಡು ಸಿನಿಮಾಗಳ ಶೂಟಿಂಗ್‌ನಲ್ಲಿ ಬಿಝಿ ಇದ್ದೇನೆ. ಇನ್ನೆರೆಡು ತಿಂಗಳಲ್ಲಿ ಯಜಮಾನ ಬಿಡುಗಡೆಯಾಗಬಹುದು. ಒಳ್ಳೆ ನಿರ್ಮಾಪಕರು, ನಿರ್ದೇಶಕರು ಬಂದರೆ ಖಂಡಿತಾ ಸಿನಿಮಾ ಮಾಡುತ್ತೇನೆ. ಸುಖಾ ಸುಮ್ಮನೆ ಡೇಟ್ಸ್‌ ಕೊಟ್ಟು, ಸೈನ್‌ ಮಾಡಿ ಕಾಯಿಸುವುದ್ಯಾಕೆ? ನನ್ನಿಂದ ಯಾರಿಗೂ ತೊಂದರೆ ಆಗಬಾರದು, ಒಮ್ಮೆ ಆರಂಭಿಸಿದ ಶೂಟಿಂಗ್‌ ಸಾಂಗವಾಗಿ ನಡೆಯಬೇಕು ಎನ್ನುವದಷ್ಟೇ ನನ್ನ ಉದ್ದೇಶ.

*ರಕ್ಷಿತ್‌ ಶೆಟ್ಟಿ ಮತ್ತು ನಿಮ್ಮ ವಿಚಾರ?

ನಾನು ನನ್ನ ವೃತ್ತಿ ವಿಚಾರಗಳನ್ನು ಮಾತ್ರ ಮಾತನಾಡುತ್ತೇನೆ. ಮದುವೆ ಅಂತಾ ಬಂದ್ರೆ ಇದು ಕುಟುಂಬದ ವಿಚಾರಕ್ಕೆ ಬರುತ್ತದೆ. ಹಾಗಾಗಿ ನನ್ನ ಕುಟುಂಬ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ. ಅದರ ಬಗ್ಗೆ ಬೇರೆನೂ ಹೇಳುವುದಿಲ್ಲ.

*ನಿಮ್ಮ ಬಗ್ಗೆ ಸಾಕಷ್ಟು ಟ್ರೋಲ್‌ ಮಾಡಿದ್ದಾರೆ, ಕಾಮೆಂಟ್‌ ಮಾಡಿದ್ದಾರೆ. ಇದರ ಬಗ್ಗೆ ಏನಾದ್ರು ಹೇಳ್ತೀರಾ?

ನಾನು ಇನ್ನೂ ಆ ಎಲ್ಲ ಕಾಮೆಂಟ್‌ ಮತ್ತು ಟ್ರೋಲ್‌ಗಳನ್ನು ಓದುತ್ತಿದ್ದೇನೆ. ಅವುಗಳನ್ನೆಲ್ಲ ಸೇವ್‌ ಮಾಡಿ ಇಟ್ಟುಕೊಂಡಿದ್ದೇನೆ. ಅವರಿಗೆಲ್ಲ ನನ್ನ ಕೆಲಸದ ಮೂಲಕ ಉತ್ತರ ನೀಡುತ್ತೇನೆಯೇ ಹೊರತು, ಸೋಷಿಯಲ್‌ ಮೀಡಿಯಾದಲ್ಲಿ ಅಲ್ಲ. ಅಲ್ಲದೆ ನನ್ನನ್ನು ನಿಜವಾಗಿಯೂ ಇಷ್ಟಪಡುವವರು ಯಾರೂ ಕೆಟ್ಟದಾಗಿ ನನ್ನ ಬಗ್ಗೆ ಮಾತನಾಡುವುದಿಲ್ಲ.ಅವರು ನನ್ನ ಅಭಿನಯ ನೋಡಿ ನನ್ನನ್ನು ಇಷ್ಟಪಟ್ಟವರು. ಹಾಗಾಗಿ ನಾನು ನಟನೆಯ ಕಡೆಗೇ ಹೆಚ್ಚು ಗಮನ ಹರಿಸುತ್ತಿದ್ದೇನೆ.

ನಾನು ಕನ್ನಡ ಬಿಟ್ಟು ಎಲ್ಲೂ ಹೋಗಿಲ್ಲ. ಹೋಗುವುದೂ ಇಲ್ಲ. ನನ್ನ ಬಗ್ಗೆ ಟ್ರೋಲ್‌ ಮತ್ತು ಕಾಮೆಂಟ್‌ ಮಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಕೆಲಸ ಮಾಡಿಕೊಂಡು ಹೋಗುತ್ತೇನೆ.
ರಶ್ಮಿಕಾ ಮಂದಣ್ಣ, ನಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌