ಆ್ಯಪ್ನಗರ

ಮತ್ತೊಮ್ಮೆ ನಾಗ ಚೈತನ್ಯ ಸಿನಿಮಾ ರಿಜೆಕ್ಟ್ ಮಾಡಿದ ರಶ್ಮಿಕಾ! ಇದಕ್ಕೆ ಸ್ಟಾರ್‌ ಹೀರೋಗಳೇ ಕಾರಣವಂತೆ!!

ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್‌ನ ಸ್ಟಾರ್ ನಟಿ. ಅವರಿಗೆ ದೊಡ್ಡ ಬ್ರೇಕ್ ನೀಡಿದ್ದೇ 'ಗೀತಾ ಗೋವಿಂದಂ' ಚಿತ್ರ. ಅಚ್ಚರಿ ಎಂದರೆ, ಆ ಸಿನಿಮಾದ ನಿರ್ದೇಶಕ ಪರಶುರಾಮ್ ಅವರ ಮುಂದಿನ ಸಿನಿಮಾವನ್ನೇ ರಶ್ಮಿಕಾ ರಿಜೆಕ್ಟ್ ಮಾಡಿದ್ದಾರಂತೆ!

Vijaya Karnataka Web 2 Dec 2019, 11:30 am
ರಶ್ಮಿಕಾ ಮಂದಣ್ಣ ಸದ್ಯ ದಕ್ಷಿಣ ಭಾರತದಲ್ಲಿ ಸೆನ್ಸೇಷನ್‌ ಸೃಷ್ಟಿ ಮಾಡಿರುವ ನಟಿ. ತೆಲುಗಿನಲ್ಲಿ ಅವರಿಗೆ ತುಂಬ ಬೇಡಿಕೆ ಇದೆ. ಮಹೇಶ್‌ ಬಾಬು, ಅಲ್ಲು ಅರ್ಜುನ್ ಥರದ ಸ್ಟಾರ್ ನಟರ ಸಿನಿಮಾಗಳಿಗೆ ನಾಯಕಿಯಾಗಿ ನಟಿಸುತ್ತಿದ್ಧಾರೆ ರಶ್ಮಿಕಾ. ಆದರೆ, ಅದೇ ಈಗ ಸಮಸ್ಯೆ ಅಂತಿದ್ದಾರಂತೆ ಟಾಲಿವುಡ್ ನಿರ್ಮಾಪಕರು!
Vijaya Karnataka Web ರಶ್ಮಿಕಾ


ಬ್ರೇಕ್‌ ನೀಡಿದವರಿಗೆ ನೋ ಎಂದುಬಿಟ್ಟರಾ?

ಕೆಲ ದಿನಗಳ ಹಿಂದೆ 'ದಿಲ್‌' ರಾಜು ನಿರ್ಮಾಣದ, ನಾಗ ಚೈತನ್ಯ ನಟನೆಯ ಸಿನಿಮಾಗೆ ನಾಯಕಿಯಾಗಿ ರಶ್ಮಿಕಾ ಅವರನ್ನು ಸೆಲೆಕ್ಟ್ ಮಾಡಲಾಗಿತ್ತು. ಆದರೆ, ರಶ್ಮಿಕಾ ನೋ ಎಂದಿದ್ದರು. ಈಗ ಮತ್ತೊಮ್ಮೆ ನಾಗ ಚೈತನ್ಯ ಅವರ ಮತ್ತೊಂದು ಸಿನಿಮಾಕ್ಕೆ ರಶ್ಮಿಕಾ ಅವರನ್ನು ಕೇಳಲಾಗಿದೆ. ಈ ಹಿಂದೆ 'ಗೀತಾ ಗೋವಿಂದಂ' ನಿರ್ಮಿಸಿದ್ದ ಅಲ್ಲು ಅರವಿಂದ್‌, ನಿರ್ದೇಶಿಸಿದ್ದ ಪರಶುರಾಮ್ ಅವರ ಮುಂದಿನ ಸಿನಿಮಾಕ್ಕೆ ನಾಗ ಚೈತನ್ಯ ಹೀರೋ. ಅದೇ ಸಿನಿಮಾಕ್ಕೆ ರಶ್ಮಿಕಾ ಅವರನ್ನು ಕೇಳಲಾಗಿದೆ. ಆದರೆ, ಅವರು ನೋ ಎಂದಿದ್ದಾರೆ ಎನ್ನಲಾಗಿದೆ!

ಸ್ಟಾರ್ ಹೀರೋ ಸಿನಿಮಾಗಳಿಗೆ ಕಾಲ್‌ಶೀಟ್‌
ಚೈತನ್ಯ ತೆಲುಗಿನಲ್ಲಿ ಎರಡನೇ ದರ್ಜೆಯ ನಟ. ಇನ್ನೂ ಅವರು ಸೂಪರ್ ಸ್ಟಾರ್ ಎಂಬ ಇಮೇಜ್‌ ಅನ್ನು ಗಿಟ್ಟಿಸಿಕೊಂಡಿಲ್ಲ. ಹಾಗಾಗಿ, ಅವರ ಚಿತ್ರವನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಕಥೆ ಮತ್ತು ಹೀರೋ ಗಮನದಲ್ಲಿಟ್ಟುಕೊಂಡು, ಬಹಳ ಎಚ್ಚರಿಕೆಯಿಂದ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರಂತೆ ರಶ್ಮಿಕಾ.

ಮುಂದಿನ ಮೂರು ತಿಂಗಳು ರಶ್ಮಿಕಾ ದರ್ಬಾರ್‌!

ಹೌದು, ರಶ್ಮಿಕಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಕನ್ನಡದ 'ಪೊಗರು' ತೆರೆಗೆ ಸಿದ್ಧವಾಗಿದೆ. ಮಹೇಶ್ ಬಾಬು ಜತೆಗಿನ 'ಸರಿಲೇರು ನೀಕೆವ್ವರು' ಚಿತ್ರವು ಸಂಕ್ರಾತಿಗೆ ರಿಲೀಸ್ ಆಗಲಿದೆ. ಅದಾದ ಬಳಿಕ ನಿತಿನ್ ಜತೆ ನಟಿಸಿರುವ 'ಭೀಷ್ಮ' ಚಿತ್ರವು ತೆರೆಗೆ ಬರಲಿದೆ. ಇದೆಲ್ಲದರ ನಡುವೆ ಅಲ್ಲು ಅರ್ಜುನ್ ಅವರೊಂದಿಗಿನ ಹೊಸ ಸಿನಿಮಾ ಶೂಟಿಂಗ್ ಶೀಘ್ರದಲ್ಲೇ ಶುರುವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌