ಆ್ಯಪ್ನಗರ

ಬೆಳ್ಳಂದೂರು ಕೆರೆಯಲ್ಲಿ ರಶ್ಮಿಕಾ ಮಂದಣ್ಣ ಅಂಡರ್‌ವಾಟರ್ ಫೋಟೋಶೂಟ್

ಬೆಳ್ಳಂದೂರು ಕೆರೆ ಬಗ್ಗೆ, ಜಲ ಮಾಲಿನ್ಯದ ಕುರಿತು ಜಾಗೃತಿ ಮೂಡಿಸಲು ನಟಿ ರಶ್ಮಿಕಾ ಮಂದಣ್ಣ ವಿಭಿನ್ನ ಫೋಟೋಶೂಟ್ ಮಾಡಿಸಿದ್ದಾರೆ. ಬೆಳ್ಳಂದೂರು ಕೆರೆಯಲ್ಲಿ ಅಂಡರ್‌ವಾಟರ್ ಫೋಟೋಶೂಟ್ ಮಾಡಿಸಿದ್ದು ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Vijaya Karnataka Web 15 Dec 2018, 8:40 am
ಬೆಳ್ಳಂದೂರು ಕೆರೆ ಎಷ್ಟೆಲ್ಲಾ ಮಾಲಿನ್ಯಕ್ಕೆ ಒಳಗಾಗಿದೆ ಎಂಬುದು ಗೊತ್ತೇ ಇದೆ. ಆಗಾಗ ಭಾರಿ ಪ್ರಮಾಣದಲ್ಲಿ ನೊರೆ ಕಾಣಿಸಿಕೊಂಡು, ರಾಸಾಯನಿಕಗಳ ಕಾರಣ ಕೆರೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದೂ ಗೊತ್ತೇ ಇದೆ. ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ರಾಜ್ಯ ಸರಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 50 ಕೋಟಿ ಮತ್ತು ಬಿಬಿಎಂಪಿಗೆ 25 ಕೋಟಿ ರೂ. ದಂಡ ವಿಧಿಸಿದೆ. ಆದರೂ ಕೆರೆ ಪರಿಸ್ಥಿತಿ ಮಾತ್ರ ಇನ್ನೂ ಶೋಚನೀಯವಾಗಿಯೇ ಇದೆ.
Vijaya Karnataka Web rashmika


ಬೆಳ್ಳಂದೂರು ಕೆರೆ ಬಗ್ಗೆ, ಜಲ ಮಾಲಿನ್ಯದ ಕುರಿತು ಜಾಗೃತಿ ಮೂಡಿಸಲು ನಟಿ ರಶ್ಮಿಕಾ ಮಂದಣ್ಣ ವಿಭಿನ್ನ ಫೋಟೋಶೂಟ್ ಮಾಡಿಸಿದ್ದಾರೆ. ಬೆಳ್ಳಂದೂರು ಕೆರೆಯಲ್ಲಿ ಅಂಡರ್‌ವಾಟರ್ ಫೋಟೋಶೂಟ್ ಮಾಡಿಸಿದ್ದು ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.


ಈ ಫೋಟೋಶೂಟ್ ಸನ್ಮತಿ ಡಿ ಪ್ರಸಾದ್ ನಿರ್ದೇಶನದಲ್ಲಿ ಮೂಡಿಬಂದಿದೆ. ಬೆಳ್ಳಂದೂರು ಕೆರೆ ಎಷ್ಟೆಲ್ಲಾ ಕಲುಷಿತವಾಗಿದೆ ಎಂಬ ಬಗ್ಗೆ ಅಲ್ಲಿಗೆ ಭೇಟಿ ನೀಡುವವರೆಗೂ ತಮಗೆ ಗೊತ್ತಾಗಲಿಲ್ಲ. ಅಲ್ಲಿ ಕಣ್ಣಾರೆ ನೋಡಿದಾಗ ಹೃದಯ ಚೂರಾದಂತಾಯಿತು. ಇದು ಹೀಗೆ ಮುಂದುವರೆದರೆ ಕೆಲವು ವರ್ಷಗಳಲ್ಲೇ ಎಲ್ಲಾ ಕಡೆಯೂ ಇದೇ ಪರಿಸ್ಥಿತಿಯಾಗುತ್ತವೆ ಎಂದಿದ್ದಾರೆ ರಶ್ಮಿಕಾ.

ಕೆರೆಗಳನ್ನು ಉಳಿಸಿ ಎಂಬ ಅರಿವು ಮೂಡಿಸುವ ಸಲುವಾಗಿ ರಶ್ಮಿಕಾ ಮಹತ್ವದ ಕೆಲಸಕ್ಕೆ ಕೈಹಾಕಿದ್ದಾರೆ. ಈ ಮೂಲಕ ಜಾಗೃತಿ ಮೂಡಿಸಲು ಕಂಕಣ ತೊಟ್ಟಿದ್ದಾರೆ. ಏನೇ ಆಗಲಿ ರಶ್ಮಿಕಾ ಮಾಡಿರುವ ಸಾಹಸ ನಿಜಕ್ಕೂ ಮೆಚ್ಚಬೇಕಾದಂತಹದ್ದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌