ಆ್ಯಪ್ನಗರ

'ಪರಿಮಳ ಲಾಡ್ಜ್' ಟೀಸರ್ ನೋಡಿ 'ಬೆಳ್ ಬೆಳಗ್ಗೆ' ಗರಂ ಆದ ರವಿ ಬೆಳಗೆರೆ

ಪರಿಮಳ ಲಾಡ್ಜ್ ಟೀಸರ್ ನೋಡಿ ಹಿರಿಯ ಪತ್ರಕರ್ತ ರವಿ ಬೆಳಗೆರೆ ಬೆಳ್ ಬೆಳಗ್ಗೆ ಗರಂ ಆಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಸಿನಿಮಾ ರಿಲೀಸ್ ಆದರೆ ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತೇನೆ ಎಂದು ಗುಟುರು ಹಾಕಿದ್ದಾರೆ.

Vijaya Karnataka Web 2 Sep 2019, 4:34 pm

'ಪರಿಮಳ ಲಾಡ್ಜ್' ಟೀಸರ್ ಇತ್ತೀಚೆಗೆ ರಿಲೀಸ್ ಆಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಹವಾ ಎಬ್ಬಿಸಿದ್ದು ಗೊತ್ತೇ ಇದೆ. ಈ ಟೀಸರ್ ನೋಡಿ ಹಿರಿಯ ಪತ್ರಕರ್ತ ರವಿ ಬೆಳಗೆರೆ ಗರಂ ಆಗಿದ್ದಾರೆ. ಈ ಟೀಸರ್ ಹಿಂಪಡೆಯುವಂತೆ ರವಿ ಬೆಳಗೆರೆ ಆಗ್ರಹಿಸಿದ್ದಾರೆ. ಈ ಸಿನೆಮಾ ರಿಲೀಸ್ ಆದರೆ ಕೇಸ್ ಹಾಕಿ ಅವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದಿದ್ದಾರೆ ರವಿ ಬೆಳಗೆರೆ.
Vijaya Karnataka Web ravi-belagere-main


ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ವಿಡಿಯೋ ಮಾಡಿರುವ ರವಿ ಬೆಳೆಗೆರೆ, "ನನಗೆ ಚಿತ್ರರಂಗ ಚೆನ್ನಾಗಿ ಗೊತ್ತು, ಬಹಳ ಪರಿಚಿತ. ಅಣ್ಣಾವ್ರ ಅಭಿಮಾನಿ ನಾನು, ಅವರನ್ನು ಭೇಟಿ ಮಾಡಿದ್ದೆ. ವಿಷ್ಣುವರ್ಧನ್ ನನ್ನ ಪರ್ಸನಲ್ ಫ್ರೆಂಡ್. ಅಂಬಿ ನನ್ನ ಏಕವಚನದ ಗೆಳೆಯ. 'ಪರಿಮಳ ಲಾಡ್ಜ್' ಎನ್ನುವ ಸಿನೆಮಾ ಟೀಸರ್‌ನಲ್ಲಿ ಅಶ್ಲೀಲ, ಡಬಲ್ ಮೀನಿಂಗ್ ಪದಗಳನ್ನು ಬಳಸಿದ್ದಾರೆ. ಆದರೆ ಸೆನ್ಸಾರ್ ಇದನ್ನು ಒಪ್ಪುವುದಿಲ್ಲ. ಕಲ್ಲೆಸೆಯುವ ಹುಚ್ಚ ವೆಂಕಟ್‌ಗಿಂತ ಈ 'ಪರಿಮಳ ಲಾಡ್ಜ್' ಟೀಸರ್ ಮಾಡಿದವರು ತುಂಬ ಡೇಂಜರಸ್. ಇದು ಸಮಾಜಕ್ಕೆ ತುಂಬ ಮಾರಕ. ನಮ್ಮ ಸಮಾಜವನ್ನು ಈ ರೀತಿ ಬೆಳೆಯಲು ಬಿಡಬಾರದು" ಎಂದಿದ್ದಾರೆ.
'ಪರಿಮಳ ಲಾಡ್ಜ್' ರೂಮ್ ನಂಬರ್ 231 ನಟಿ ರಮ್ಯಾ ಪ್ರತ್ಯಕ್ಷ

"ನಾನು ಹೇಳಿದ್ದು ಎಲ್ಲರಿಗೂ ಸರಿ ಕಾಣದೇ ಇರಬಹುದು. ನಾನು ನನ್ನ ಅನುಭವ, ಗ್ರಹಿಕೆ ಮೇಲೆ ಹೇಳುತ್ತಿದ್ದೇನೆ, ನೀವು ಇದನ್ನು ಒಪ್ಪಬಹುದು, ಒಪ್ಪದೇ ಇರಬಹುದು. ಆದರೆ ಸಿನೆಮಾ ರಿಲೀಸ್ ಆದರೆ ಮಾತ್ರ ಅವರನ್ನೆಲ್ಲ ಜೈಲಿಗೆ ಕಳುಹಿಸುತ್ತೇನೆ" ಎಂದು ಕೂಡ ಹೇಳಿದ್ದಾರೆ. ಈ ಟೀಸರ್‌ನಲ್ಲಿ ಬಾಯಿಗೆ ಸಿಕ್ಕ ಹಾಗೆ ಮಾತನಾಡ್ತೀರಾ ? ಬಾಯಿಗೆ ಬಂದ ಹಾಗೆ ಸಿನೆಮಾ ಮಾಡ್ತೀರಾ? ಹೊಲಸು" ಅಂಥ ರವಿ ಬೆಳಗೆರೆ 'ಪರಿಮಳ ಲಾಡ್ಜ್' ವಿರುದ್ಧ ಕೆಂಡಕಾರಿದ್ದಾರೆ.

ಆಗಸ್ಟ್ 28ರಂದು ನೀನಾಸಂ ಸತೀಶ್, ಲೂಸ್ ಮಾದ ಯೋಗಿ ಅಭಿನಯದ 'ಪರಿಮಳ ಲಾಡ್ಜ್' ಸಿನೆಮಾ ಟೀಸರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದ್ದರು. ನೀರ್ ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ರಿಲೀಸ್ ಆದ 24 ಗಂಟೆಯಲ್ಲಿಯೇ ಈ ಟೀಸರ್ ಸ್ಯಾಂಡಲ್ ವುಡ್‌ನಲ್ಲಿ ಹೊಸ ಸಂಚಲನ ಮೂಡಿಸಿತ್ತು.

ಪೋಲಿತನದಿಂದ ಕೂಡಿದ ಈ ಟೀಸರ್ ನೋಡಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಹಾಗೆಯೇ ಚಿತ್ರದ ಪಾತ್ರಗಳ ಟೈಟಲ್ ಕಾರ್ಡ್ ಬಗ್ಗೆ ಹಲವರು ಸಿಟ್ಟಾಗಿದ್ದರು. ಚಿತ್ರದ ಪಾತ್ರಗಳ ಬಗ್ಗೆ ಪರಿಚಯಿಸಿದ ಈ ಟೀಸರ್ನಲ್ಲಿ ನೀನಾಸಂ ಸತೀಶ್, ಲೂಸ್ ಮಾದ ಯೋಗಿ ಅವರಿಗೆ ಸಲಿಂಗಕಾಮಿ ಅಂತ ಟೈಟಲ್ ನೀಡಲಾಗಿತ್ತು. ಈ ಚಿತ್ರವು ಸಲಿಂಗ ಕಾಮದ ಕಥೆ ಹೊಂದಿರಲಿದೆ ಎಂಬಂತಹ ಸುದ್ದಿ ಹರಿದಾಡಿದ್ದವು. ತದನಂತರದಲ್ಲಿ ನೀನಾಸಂ ಸತೀಶ್ ತಾನು ಸಲಿಂಗಕಾಮಿ ಪಾತ್ರ ಮಾಡುತ್ತಿಲ್ಲ, ಅದು ಕೇವಲ ಚೇಷ್ಟೆ ಅಂಥ ಸ್ಪಷ್ಟನೆ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌