ಆ್ಯಪ್ನಗರ

ಸುಮಲತಾಗೆ ಹೇಗೆ ಬೆಂಬಲ ಕೊಡಲಿ: ನಟ ಉಪೇಂದ್ರ

" ನಾನು ನನ್ನದೇ ಸಿದ್ಧಾಂತ ಇರುವ ಪಕ್ಷ ಕಟ್ಟಿಕೊಂಡು, ನನ್ನದೇ ಪಕ್ಷದವರನ್ನು ಚುನಾವಣೆಗೆ ನಿಲ್ಲಿಸುತ್ತಿರುವಾಗ ಸುಮಲತಾ ಅವರಿಗೆ ಹೇಗೆ ಬೆಂಬಲ ಕೊಡಲಿ" ಎಂದು ಪ್ರಶ್ನಿಸಿದವರನ್ನೇ ಪ್ರಶ್ನಿಸಿದ್ದಾರೆ 'ಬುದ್ಧಿವಂತ' ನಟ ಉಪೇಂದ್ರ.

Vijaya Karnataka Web 10 Mar 2019, 6:56 pm
ಸ್ಯಾಂಡಲ್‌ವುಡ್‌ ರಿಯಲ್ ಸ್ಟಾರ್ ಉಪೇಂದ್ರ ಅವರು ಸುಮಲತಾ ಅವರಿಗೆ ತಮ್ಮ ಬೆಂಬಲ ಇಲ್ಲ ಎಂದಿದ್ದಾರೆ. ಅವರ ಈ ಹೇಳಿಕೆ ಸಹಜವಾಗಿದೆ ಎನ್ನಬಹುದು. ಏಕೆಂದರೆ, ಉಪೇಂದ್ರ ಅವರು ತಮ್ಮದೇ ಪಕ್ಷವನ್ನು ಕಟ್ಟಿಕೊಂಡು ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವಾಗ ಅವರು ಇನ್ನೊಬ್ಬರಿಗೆ ಬೆಂಬಲ ಕೊಡುವ ಮಾತೇ ಬರಲಾರದು. ಆದರೂ, ಕೆಲವೊಮ್ಮೆ ಪರೋಕ್ಷವಾಗಿ ಬೆಂಬಲ ನೀಡಬಹುದಲ್ಲ! ಹೀಗಾಗಿ ನಟ ಉಪೇಂದ್ರ ಅವರಿಗೆ ಆ ಪ್ರಶ್ನೆ ಕೇಳಲಾಗಿದೆ; ಕೇಳಿರುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ ನಟ ಉಪೇಂದ್ರ.
Vijaya Karnataka Web upendra10


ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧರಾಗಿರುವ ನಟಿ ಸುಮಲತಾ ಅಂಬರೀಷ್‌ ಅವರಿಗೆ, ಪ್ರಜಾಕೀಯ ಪಕ್ಷದ ನೇತಾರರಾಗಿರುವ ಉಪೇಂದ್ರ ತಮ್ಮ ಪಕ್ಷದ ಬೆಂಬಲ ಇಲ್ಲ ಎಂದಿದ್ದಾರೆ. ಈ ಬಗ್ಗೆ ಮಾತನಾಡಿರುವ ಉಪೇಂದ್ರ ಅವರು " ನಾನು ನನ್ನದೇ ಸಿದ್ಧಾಂತ ಇರುವ ಪಕ್ಷ ಕಟ್ಟಿಕೊಂಡು, ನನ್ನದೇ ಪಕ್ಷದವರನ್ನು ಚುನಾವಣೆಗೆ ನಿಲ್ಲಿಸುತ್ತಿರುವಾಗ ಸುಮಲತಾ ಅವರಿಗೆ ಹೇಗೆ ಬೆಂಬಲ ಕೊಡಲಿ" ಎಂದು ಪ್ರಶ್ನಿಸಿದವರನ್ನೇ ಪ್ರಶ್ನಿಸಿದ್ದಾರೆ 'ಬುದ್ಧಿವಂತ' ನಟ ಉಪೇಂದ್ರ.

ಇನ್ನೇನು ಲೋಕಸಭೆ ಚುನಾವಣೆ ಘೋಷಣೆಯಾಗಿದೆ. ದಿವಂಗತ ರೆಬಲ್ ಸ್ಟಾರ್ ಅಂಬರೀಷ್ ಅವರು ಮಂಡ್ಯ ಶಾಸಕರಾಗಿ ಸೇವೆ ಸಲ್ಲಿಸಿರುವುದು ಎಲ್ಲರಿಗೂ ಗೊತ್ತಿದೆ. ಇದೀಗ, ರೆಬಲ್ ಸ್ಟಾರ್ ಪತ್ನಿ, ನಟಿ ಸುಮಲತಾ ಅವರು ಕೂಡ ಮಂಡ್ಯದಿಂದ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಇನ್ನೊಂದೆಡೆ, ಹಾಲಿ ಮುಖ್ಯಮಂತ್ರಿ ಮಗ, ನಟ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

ಇಂಥ ಸಂದರ್ಭದಲ್ಲಿ, ಮಂಡ್ಯದಲ್ಲಿ ಸುಮಲತಾ ಹಾಗೂ ನಿಖಿಲ್ ಮಧ್ಯೆ ಸ್ಪರ್ಧೆ ಗ್ಯಾರಂಟಿಯಾಗಿದೆ. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟ ದರ್ಶನ್ ಅವರು ಬಹಿರಂಗವಾಗಿಯೇ ನಟಿ ಸುಮಲತಾ ಪರ ಬೆಂಬಲ ಸೂಚಿಸಿದ್ದಾರೆ. ಕಿಚ್ಚ ಸುದೀಪ್ ಅವರು ಅತ್ತ ಕುಮಾರಸ್ವಾಮಿ ಮತ್ತು ನಿಖಿಲ್ ಅವರಿಗೆ ಆಪ್ತರು; ಇತ್ತ ಅಂಬರೀಷ್ ಫ್ಯಾಮಿಲಿಗೆ ಕೂಡ ಆಪ್ತರು. ಹೀಗಾಗಿ ಸುದೀಪ್ ಅವರು ಸುಮಲತಾ ಪರ ನಿಲ್ಲುವರೋ ಅಥವಾ ನಿಖಿಲ್ ಪರವೋ ಎಂಬುದು ಸದ್ಯಕಂತೂ ತೀವ್ರ ಕುತೂಹಲ ಕೆರಳಿಸಿರುವ ಸಂಗತಿ. ಇದೀಗ, ನಟ, ಪ್ರಜಾಕೀಯ ಪಕ್ಷದ ನೇತಾರ ಉಪೇಂದ್ರ ಅವರು ಸುಮಲತಾ ಪರ ಬೆಂಬಲ ಇಲ್ಲ ಎಂಬ ಮಾತು ಕೂಡ ಈ ಸಮಯದಲ್ಲಿ ತುಂಬಾ ಮಹತ್ವ ಪಡೆದುಕೊಂಡಿದೆ ಎನ್ನಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌