ಆ್ಯಪ್ನಗರ

ಕೊಪ್ಪಳದಲ್ಲಿ ಸುಮಲತಾ ಬಗ್ಗೆ 'ಹಾಗೆ' ಹೇಳಿ ಅಚ್ಚರಿ ಮೂಡಿಸಿದ ಉಪೇಂದ್ರ!

"ಪ್ರಸ್ತುತ ರಾಜಕೀಯದಲ್ಲಿ ಎಂಎಲ್ಎ ಗಳಿಗೆ ಸಂಬಳ ಇದೆ ಅನ್ನೋದು ಬಹಳ ಜನಕ್ಕೆ ಗೊತ್ತಿಲ್ಲ. ಕೋಟಿಗಟ್ಟಲೇ ಗಳಿಸಿದವರು‌ ಮಾತ್ರ ಎಲೆಕ್ಷನ್ ನಿಲ್ಲುವಂತ ಪರಿಸ್ಥಿತಿ ಇಡೀ ದೇಶದಲ್ಲಿದೆ. ಲೋಕಸಭೆ ಚುನಾವಣೆಗೆ ಯಾರು ಬೇಕಾದ್ರೂ ಸ್ಪರ್ಧಿಸಬಹುದು" ಎಂದಿದ್ದಾರೆ ಉಪೇಂದ್ರ.

Vijaya Karnataka Web 15 Apr 2019, 12:38 pm
ಮುಂಬರುವ ಲೋಕಸಭೆ ಚುನಾವಣೆಗೆ ತಮ್ಮದೇ 'ಉತ್ತಮ ಪ್ರಜಾಕೀಯ ಪಕ್ಷದ' ಮೂಲಕ ಸಕ್ರಿಯರಾಗಿರುವ ನಟ ಉಪೇಂದ್ರ ಅವರು ಕೊಪ್ಪಳದಲ್ಲಿ ಚುನಾವಣೆ ಪ್ರಚಾರದ ಸಭೆಯಲ್ಲಿ ಮಾತನಾಡಿದ್ದಾರೆ. "ಸುಮಲತಾ ಬಗ್ಗೆ ನನಗೆ ತುಂಬಾ ಗೌರವ ಇದೆ. ಸುಮಲತಾ ನಮ್ಮ ಅತ್ತಿಗೆ ಇದ್ದಂಗೆ" ಎಂದು ನಟ ರಿಯಲ್ ಸ್ಟಾರ್ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.
Vijaya Karnataka Web upendra1404


ಕೊಪ್ಪಳದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, "ರೇಬಲ್ ಸ್ಟಾರ್ ಅಂಬರೀಶ ನನ್ನ ಅಣ್ಣ, ಸುಮಲತಾ ಅಂಬರಿಶ್ ನನಗೆ ಅತ್ತಿಗೆ ಇದ್ದ ಹಾಗೆ. ಅವರ ಮೇಲೆ ಅಪಾರ ಗೌರವವನ್ನು ಹೊಂದಿದ್ದೇನೆ. ಅವರಿಗೆ ಚುನಾವಣೆಯಲ್ಲಿ ಒಳ್ಳೆದಾಗುತ್ತೆ. ನಾನು ನಟನಾಗಿ ಮತ ಕೇಳ್ತಾ ಇಲ್ಲ. ನಟನಾಗಿ ಓಟು ಕೇಳಿದರೆ ನೀವೇಲ್ಲಾ ಖಂಡಿತ ನಗುತ್ತೀರಾ! ಒಳ್ಳೆಯ ವಿಚಾರಗಳಿಗೆ ಮತ ಹಾಕಿ ಎಂದು ಕೇಳ್ತಾ ಇದೀನಿ. ಅಷ್ಟೇ ಅಲ್ಲ, ಸುಂದರವಾದ ಕಲ್ಪನೆ ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇನೆ. ದಯವಿಟ್ಟು ಉತ್ತಮ ಪ್ರಜಾಕೀಯ ಪಕ್ಷ ಬೆಂಬಲಿಸಿ" ಎಂದು ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದಾರೆ.

ಮೊನ್ನೆ ರಾಯಚೂರಿನಲ್ಲಿ ಮಾತನಾಡಿದ ಉಪೇಮದ್ರ "ರಾಷ್ಟ್ರೀಯ ಪಕ್ಷಗಳ ಇಂದಿನ ಚುನಾವಣೆ ಖರ್ಚು ವೆಚ್ಚ ನೋಡಿ ಸಹಿಸಿಕೊಳ್ಳಲು ಆಗುತ್ತಿಲ್ಲ" ಎಂದು ನಟ ಉಪೇಂದ್ರ ಕಿಡಿಕಾರಿದ್ದಾರೆ. ತಾವು ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಒಳ್ಳೆಯ ವಿಚಾರದೊಂದಿಗೆ ತಮ್ಮ ಪಕ್ಷದಿಂದ ಚುನಾವಣೆ ಕಣಕ್ಕೆ ಇಳಿಯುವುದಾಗಿ ಉಪೇಂದ್ರ ಹೇಳಿದ್ದಾರೆ.

ರಾಯಚೂರಿನಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಹಾಗೂ ಚಿತ್ರನಟ ಉಪೇಂದ್ರ "ಪಕ್ಷದ ರಾಯಚೂರು ಅಭ್ಯರ್ಥಿ ನಿರಂಜನ ಓರ್ವ ವಕೀಲರು. ಪ್ರಜಾಕೀಯದ ತತ್ವ ಸಿದ್ದಾಂತವನ್ನು ನೋಡಿ ಪಕ್ಷಕ್ಕೆ ಬಂದಿದ್ದಾರೆ. ಪ್ರಸ್ತುತ ರಾಜಕೀಯದಲ್ಲಿ ಎಂಎಲ್ಎ ಗಳಿಗೆ ಸಂಬಳ ಇದೆ ಅನ್ನೋದು ಬಹಳ ಜನಕ್ಕೆ ಗೊತ್ತಿಲ್ಲ. ಕೋಟಿಗಟ್ಟಲೇ ಗಳಿಸಿದವರು‌ ಮಾತ್ರ ಎಲೆಕ್ಷನ್ ನಿಲ್ಲುವಂತ ಪರಿಸ್ಥಿತಿ ಇಡೀ ದೇಶದಲ್ಲಿದೆ. ಲೋಕಸಭೆ ಚುನಾವಣೆಗೆ ಯಾರು ಬೇಕಾದ್ರೂ ಸ್ಪರ್ಧಿಸಬಹುದು" ಎಂದಿದ್ದಾರೆ ಉಪೇಂದ್ರ.

"ಪ್ರಣಾಳಿಕೆಗಳು ಈಡೇರಬೇಕು. ಅವು ಕೇವಲ ಆಶ್ವಾಸನೆಗಳಾಗಬಾರದು. ಪ್ರಣಾಳಿಕೆಯಲ್ಲಿನ ಅಂಶಗಳನ್ನುಈಡೇರಿಸದಿದ್ದಲ್ಲಿ ಅಂಥವರನ್ನ ಅಧಿಕಾರದಿಂದ ಕೆಳಗಿಳಿಸುವ ವ್ಯವಸ್ಥೆ ಬರಬೇಕು. ಮತದಾರರಲ್ಲಿ ನಂಬಿಕೆ ಕಡಿಮೆಯಾಗುತ್ತಿದೆ. ವಿಭಿನ್ನ ಪ್ರಯತ್ನ ಮಾಡುವವರು ಇಲ್ಲದಂತಾಗಿದೆ. ಭ್ರಷ್ಟಾಚಾರ ಎಂಬುದು ಮೊದಲು ತೊಲಗಬೇಕು. ಆತ್ಮ ತೃಪ್ತಿಗಾಗಿ ಎಲ್ಲರೂ ಬದಲಾಗಬೇಕಿದೆ. ಇದೊಂದು ಶಾಂತಿ ಸಹನೆಯ ಕ್ರಾಂತಿ, ಯುವಕರು ಬದಲಾವಣೆ ಬಯಸಿದ್ದಾರೆ" ಎಂದು ಉಪೇಂದ್ರ ರಾಯಚೂರಿನಲ್ಲಿ ಹೇಳಿದ್ದಾರೆ.

"ಇಲ್ಲಿ ಉಪೇಂದ್ರನಿಗೆ ಬೆಂಬಲ ಸಿಗ್ತಿಲ್ಲ, ಆದರೆ ವಿಚಾರಕ್ಕೆ ಬೆಂಬಲ ಸಿಗ್ತಿದೆ . ಒಂದು ವೇಳೆ ಗೆದ್ದಲ್ಲಿ ಜನರ ಬೇಡಿಕೆಗಳನ್ನ ಈಡೇರಿಸುವ ಪಕ್ಷಕ್ಕೆ ಬೆಂಬಲ ನೀಡುತ್ತೇವೆ. ಹಿಂದೆ5 ಜನರಿಗೆ ಚಹಾ ಕುಡಿಸಿ ನಾಯಕರಾದವರು ಇಂದು 50 ಕೋಟಿ ಖರ್ಚು ಮಾಡುವ ಮಟ್ಟಿಗೆ ಬಂದಿದ್ದಾರೆ. ಕುಟುಂಬ ರಾಜಕಾರಣಕ್ಕಿಂತ ಯೋಗ್ಯತೆ ಇರುವವರು ಯಾರಾದರೂ ಸ್ಪರ್ಧಿಸುವಂತಾಗಬೇಕು" ಎಂದಿದ್ದಾರೆ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ, ನಟ ಉಪೇಂದ್ರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌