ಆ್ಯಪ್ನಗರ

ರಿಪ್ಪರ್‌ಗೆ ಶ್ರೀಮಯ್ಯ ನಾಯಕಿ

ಕಿರುತೆರೆಯಲ್ಲಿ ಬಿಝಿಯಾಗಿದ್ದ ಶ್ರೀಮಯ್ಯ ಈಗ ರಿಪ್ಪರ್‌ ಎನ್ನುವ ಸಿನಿಮಾಗೆ ನಾಯಕಿಯಾಗಿದ್ದಾರೆ. ಕ್ರೈಂ ಥ್ರಿಲ್ಲರ್‌ ಚಿತ್ರವಾಗಿರುವ ಇದನ್ನು ಕೃಷ್ಣ ಬೆಳ್ತಂಗಡಿ ನಿರ್ದೇಶನ ಮಾಡುತ್ತಿದ್ದಾರೆ.

Vijaya Karnataka 13 Dec 2017, 5:00 am

ಕಿರುತೆರೆ ಹಾಗು ನಿರೂಪಣೆಯಲ್ಲಿ ಹೆಸರು ಮಾಡಿರುವ ಶ್ರೀಮಯ್ಯ ರಿಪ್ಪರ್‌ ಸಿನಿಮಾಗೆ ನಾಯಕಿಯಾಗಿದ್ದಾರೆ. ರಾಜ್ಯ ಪ್ರಶಸ್ತಿ ಪಡೆದಿದ್ದ 'ಬಣ್ಣದ ಕೊಡೆ' ಸಿನಿಮಾವನ್ನು ನಿರ್ದೇಶನ ಮಾಡಿದ್ದ ಕೃಷ್ಣ ಬೆಳ್ತಂಗಿಡಿ ರಿಪ್ಪರ್‌ಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ಕಾಸರಗೋಡು ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಜನರಿಗೆ ನಿದ್ದೆಗೆಡಿಸಿದ್ದ ದರೋಡೆಕೋರ ರಿಪ್ಪರ್‌ ಚಂದ್ರುವಿನ ಕತೆಯೇ 'ರಿಪ್ಪರ್‌' ಸಿನಿಮಾವಾಗಿ ಬರುತ್ತಿದೆ. ಈ ಚಿತ್ರದಲ್ಲಿ ಶ್ರೀಮಯ್ಯ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು, ಬಹಳ ದಿನಗಳ ನಂತರ ಒಂದೊಳ್ಳೆ ಪಾತ್ರ ಸಿಕ್ಕಿರುವುದು ನನಗೆ ಸಂತೋಷ ತಂದಿದೆ ಎಂದಿದ್ದಾರೆ. ' ಈ ಚಿತ್ರದಲ್ಲಿ ನಾನು ಸ್ಟ್ರೈಟ್‌ ಫಾರ್ವರ್ಡ್‌ ಮತ್ತು ಎಲ್ಲವನ್ನು ಓಪನ್‌ ಆಗಿ ಮಾತನಾಡುವ ಹುಡುಗಿಯ ಕ್ಯಾರೆಕ್ಟರ್‌ ಪ್ಲೇ ಮಾಡುತ್ತಿದ್ದೇನೆ. ಮೊದಲ ಬಾರಿಗೆ ಮಲೆನಾಡ ಹುಡುಗಿಯಾಗಿರುವುದು ನನಗೆ ಇನ್ನಷ್ಟೂ ಖುಷಿ ತಂದಿದೆ,' ಎಂದು ಅವರು ಹೇಳುತ್ತಾರೆ.

ಇದೆಲ್ಲದರ ಜತೆಗೆ ತೆಲುಗು ತಮಿಳಿನಿಂದಲೂ ಶ್ರೀಮಯ್ಯಗೆ ಆಫರ್ಸ್‌ ಬರುತ್ತಿವೆಯಂತೆ. ತಮಿಳಿನ ಖ್ಯಾತ ನಿರ್ದೇಶಕ ರಾಘವ ಲಾರೆನ್ಸ್‌ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರದಲ್ಲಿ ಒಂದು ಪಾತ್ರಕ್ಕಾಗಿ ಶ್ರೀಮಯ್ಯ ಅವರನ್ನು ಸಂಪರ್ಕಿಸಲಾಗಿದೆಯಂತೆ. ತೆಲುಗಿನ ಹಾರರ್‌ ಕಮ್‌ ಥ್ರಿಲ್ಲರ್‌ ಸಬ್ಜೆಕ್ಟ್ ಇರುವ ಚಿತ್ರವೊಂದರಲ್ಲಿ ಒಂದು ಮುಖ್ಯ ಪಾತ್ರ ಮಾಡಲು ಶ್ರೀಮಯ್ಯ ಅವರನ್ನು ಕೇಳಿದ್ದಾರೆ. ಸದ್ಯ ತಮ್ಮ ತೂಕ ಇಳಿಸಿಕೊಂಡು ಸ್ಲಿಮ್‌ ಆಗಿರುವ ಶ್ರೀಮಯ್ಯ ಉತ್ತಮ ಕತೆಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದಾರೆ. ಸದ್ಯ ಅವರು ರಿಪ್ಪರ್‌ ಸಿನಿಮಾದ ಬಗ್ಗೆ ಗಮನ ಹರಿಸಿದ್ದು, ಆ ಸಿನಿಮಾದ ನಂತರ ತೆಲುಗು ತಮಿಳು ಚಿತ್ರರಂಗದ ಕಡೆ ಮುಖ ಮಾಡುತ್ತೇನೆ ಅಂತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌