ಆ್ಯಪ್ನಗರ

ಕಾಸರಗೋಡು ಶಾಲೆಗಳಲ್ಲಿ ಕನ್ನಡ ರಕ್ಷಣೆಗೆ ಮುಂದಾದ ರಿಶಬ್‌ ಶೆಟ್ಟಿ ಶಾಲೆ

ಭಾಷಾ ಅಲ್ಪ ಸಂಖ್ಯಾತ ಪ್ರದೇಶ ಕಾಸರಗೋಡುನಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲೆಯಾಳಿ ಶಿಕ್ಷಕರನ್ನು ನೇಮಕ ಮಾಡಿ, ಮಲೆಯಾಳಂ ಭಾಷೆಯನ್ನು ಅನಗತ್ಯವಾಗಿ ಹೇರಲಾಗುತ್ತಿದೆ.

Vijaya Karnataka 4 Dec 2022, 7:38 pm
ಭಾಷಾ ಅಲ್ಪ ಸಂಖ್ಯಾತ ಪ್ರದೇಶ ಕಾಸರಗೋಡುನಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲೆಯಾಳಿ ಶಿಕ್ಷಕರನ್ನು ನೇಮಕ ಮಾಡಿ, ಮಲೆಯಾಳಂ ಭಾಷೆಯನ್ನು ಅನಗತ್ಯವಾಗಿ ಹೇರಲಾಗುತ್ತಿದೆ. ಈ ವಿಷಯವಾಗಿ ಕಾಸರಗೋಡು ಸುತ್ತಮುತ್ತಲಿನ ಪ್ರದೇಶದಲ್ಲಿ ಕನ್ನಡಿಗರು ಹೋರಾಟ ಮಾಡುತ್ತಿದ್ದಾರೆ. ಇದೇ ವಿಷಯವನ್ನು ಇಟ್ಟುಕೊಂಡು ರಿಷಬ್‌ ಶೆಟ್ಟಿ ಸಿನಿಮಾ ಮಾಡಿದ್ದಾರೆ.
Vijaya Karnataka Web sarkari


ಕರಾವಳಿ ಕರ್ನಾಟಕ್ಕೆ ಹೊಂದಿಕೊಂಡಿರುವ ಕಾಸರಗೋಡು ಸುತ್ತಮುತ್ತ ಸಾಕಷ್ಟು ಕನ್ನಡ ಮಾಧ್ಯಮ ಶಾಲೆಗಳಿವೆ. ಈ ಶಾಲೆಗಳಿಗೆ ಕೇರಳ ಸರಕಾರ ಈಗಾಗಲೇ 19 ಮಲೆಯಾಳಿ ಶಿಕ್ಷಕರನ್ನು ನೇಮಕ ಮಾಡಿದೆ. ಇದು ಕನ್ನಡಿಗರ ಸಾಂಸ್ಕೃತಿಕ , ಸಾಮಾಜಿಕ ಸ್ಥಿತಿಯ ಮೇಲೆ ಪ್ರತಿಕೂಲಕರ ಪರಿಣಾಮ ಬೀರಲಿದೆ. ಇದೇ ವಿಷಯವಾಗಿ ಆ ಕನ್ನಡ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಪ್ರತಿಭಟನೆ ಮಾಡಲು ಯೋಚಿಸಿದ್ದಾರೆ. ಇದೇ ವಿಷಯದ ಪ್ರಸ್ತಾಪ ರಿಶಬ್‌ಶೆಟ್ಟಿ ತಮ್ಮ ಸಿನಿಮಾದಲ್ಲಿ ಪ್ರಸ್ತಾಪಿಸಿದ್ದಾರೆ.

'ನಾನು ಬಹಳ ಹಿಂದಿನಿಂದಲೂ ಕಾಸರಗೋಡಿನಲ್ಲಿ ಕನ್ನಡದ ಉಳಿವಿಗಾಗಿ ನಡೆಯುತ್ತಿರುವ ಹೋರಾಟವನ್ನು ನೋಡಿದ್ದೇನೆ. ನನ್ನ ಸಿನಿಮಾದಲ್ಲಿ ಆ ವಿಷಯವನ್ನು ಇಟ್ಟುಕೊಂಡಿದ್ದೇನೆ. ಹಿಂದೆಯೂ ಹೀಗೆ ಕನ್ನಡ ಶಾಲೆಗಳಿಗೆ ಮಲೆಯಾಳಿ ಶಿಕ್ಷಕರನ್ನು ನೇಮಕ ಮಾಡಿತ್ತು. ಆಗ ಹೋರಾಟ ನಡೆದ ಆ ನಡೆಯನ್ನು ಸರಕಾರ ಹಿಂದಕ್ಕೆ ಪಡೆದಿತ್ತು. ಇಂತಹದ್ದೇ ವಿಷಯ ನನ್ನ ಸಿನಿಮಾದಲ್ಲಿಯೂ ಇದೆ. ಇದರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಮುಖ್ಯ ಉದ್ದೇಶವೇ ಗಡಿ ನಾಡಲ್ಲಿ ಕನ್ನಡ ಉಳಿಸುವ ಬಗ್ಗೆ' ಎನ್ನುತ್ತಾರೆ ರಿಶಬ್‌ ಶೆಟ್ಟಿ.

ಗಡಿ ನಾಡಲ್ಲಿ ಕನ್ನಡ ಉಳಿಯಬೇಕು ಎನ್ನುವ ಸೀರಿಯಸ್‌ ವಿಷಯವನ್ನು ಸ್ವಲ್ಪ ಹಾಸ್ಯ ಬೆರೆಸಿ ಹೇಳುವ ಸಣ್ಣ ಪ್ರಯತ್ನ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿದೆ. ಈ ಸಿನಿಮಾದಲ್ಲಿ ಕನ್ನಡ ಕಲಿಕೆ ಕಡ್ಡಾಯ ಎಂಬುದು ಬಿಂಬಿತವಾಗಿದೆ. ಒಂದು ಸರ್ಕಾರಿ ಶಾಲೆಯನ್ನು ಉಳಿಸಲು ಅದೇ ಶಾಲೆಯ ಮಕ್ಕಳು ಹೇಗೆ ಒಂದಾಗುತ್ತಾರೆ ಎಂಬುದು ಈ ಚಿತ್ರದಲ್ಲಿದೆ ಎಂದು ಹೇಳಿದ್ದಾರೆ ರಿಶಬ್‌.

ಇನ್ನೊಂದೆಡೆ ಕಾಸರಗೋಡು ಕನ್ನಡ ಶಾಲೆಗಳಿಗೆ ಮಲೆಯಾಳಿ ಶಿಕ್ಷಕರನ್ನು ತುಂಬುತ್ತಿರುವ ಬಗ್ಗೆ ಈಗಾಗಲೇ ಕರಾವಳಿಯ ಪತ್ರಿಕೆಗಳಲ್ಲಿ ವ್ಯಾಪಕವಾಗಿ ವರದಿಯಾಗಿದೆ. ಮುಖ್ಯವಾಗಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಈ ಕುರಿತು ಸರಣಿ ವರದಿಗಳು ಪ್ರಕಟವಾಗಿವೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದಲ್ಲಿ ಗಡಿನಾಡ ಕನ್ನಡ ಶಾಲೆಗಳನ್ನು ಉಳಿಸುವ ಸಬ್ಜೆಕ್ಟ್ ಇದೆ. ಜನ ಇದನ್ನು ಇಷ್ಟಪಡುತ್ತಾರೆ. ಗಡಿಯಲ್ಲಿ ನಮ್ಮ ಭಾಷೆ ಉಳಿದು ಬಾಳಬೇಕಿದೆ. ಅದು ನನ್ನ ಉದ್ದೇಶವಾಗಿದೆ.
ರಿಶಬ್‌ಶೆಟ್ಟಿ, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌