ಆ್ಯಪ್ನಗರ

'ಜೆಡಿಎಸ್ ಕಳ್ಳರ ಪಕ್ಷ ಎಂದಿಲ್ಲ' ಎಂದು ನಾನು ಹೇಳಿಲ್ಲ: ಸ್ಪಷ್ಟನೆ ಕೊಟ್ಟ ಯಶ್

"ನನಗೆ ಜೆಡಿಎಸ್ ಪಕ್ಷದಲ್ಲಿ ಬಹಳಷ್ಟು ಜನ ಸ್ನೇಹಿತರಿದ್ದಾರೆ. ಹಾಗಿದ್ದರೆ ನಾನು ಅವರ ಪಕ್ಷದಲ್ಲಿರುವ ನನ್ನ ಸ್ನೇಹಿತರಿಗೆ ಕಳ್ಳರು ಎಂದಿದ್ದೀನಾ? ಸುಮ್ಮನೇ ಯಾರೋ ಈ ವಿಚಾರದಲ್ಲಿ ಯಾರೋ ಸಿಎಂ ಕುಮಾರಸ್ವಾಮಿಗೆ ಚಾಡಿ ಹೇಳಿ ಮಿಸ್ ಗೈಡ್ ಮಾಡಿರಬೇಕು. ನಾವೆಂದೂ ಜೆಡಿಎಸ್ ಪಕ್ಷವನ್ನು ಕಳ್ಳರ ಪಕ್ಷ ಎಂದಿಲ್ಲ" ಎಂದು ಯಶ್ ಸ್ಪಷ್ಟನೆ ನೀಡಿದ್ದಾರೆ.

Vijaya Karnataka 15 Apr 2019, 7:42 pm
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಕಣಕ್ಕೆ ಇಳಿದಿರುವ ನಟಿ ಸುಮಲತಾ ಅಂಬರೀಷ್ ಪರ ದುಡಿಯುತ್ತಾ ಜೋಡೆತ್ತುಗಳು ಎಂದೇ ಗುರುತಿಸಿಕೊಂಡಿದ್ದಾರೆ ಸಿನಿಮಾ ನಟರಾದ ದರ್ಶನ್ ಮತ್ತು ಯಶ್. ಅವರಿಬ್ಬರೂ ಸುಮಲತಾ ಪರ ಪ್ರಚಾರಕಾರ್ಯಕ್ಕೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಅವರಿಬ್ಬರು ಹೋದಲ್ಲೆಲ್ಲ ಲಕ್ಷಾಂತರ ಜನರು ಸೇರುತ್ತಿದ್ದಾರೆ. ಡಿ ಬಾಸ್ ಹಾಗೂ ರಾಕಿಂಗ್ ಸ್ಟಾರ್ ಅವರಿಬ್ಬರಿಗೂ ಮಂಡ್ಯದಲ್ಲಿ ಅಭೂತಪೂರ್ವ ಸ್ವಾಗತ ಸಿಗುತ್ತಿದೆ. ಸುಮಲತಾ ಅವರಿಗೆ ಈ ಇಬ್ಬರೂ ಮನೆಯ ಮಕ್ಕಳಂತೆ ಬೆಂಬಲ ನೀಡುತ್ತಿದ್ದಾರೆ.
Vijaya Karnataka Web yash1504


ಈ ಬಗ್ಗೆ ಕೆಂಡಾಮಂಡಲವಾದ ಸಿಎಂ ಕುಮಾರಸ್ವಾಮಿ "ಯಶ್ ಮಂಡ್ಯದ ಹಳ್ಳಿಹಳ್ಳಿಗೂ ಹೋಗಿ ಸುಮಲತಾ ಪರ ಪ್ರಚಾರ ಮಾಡುತ್ತಿದ್ದಾರೆ. ಯಶ್ ನೋಡಲು ಮಂಡ್ಯದ ಹಳ್ಳಿಗಳಲ್ಲಿ ಜನಜಾತ್ರೆಯೇ ಸೇರುತ್ತಿದೆ. ಇದರಿಂದ ಕೆಂಡಾಮಂಡಲವಾಗಿರುವ ಸಿಎಂ ಕುಮಾರಸ್ವಾಮಿ "ಯಾವನೊ ಅವನು ಯಶ್? ನನ್ನ ಪಕ್ಷ ಕಳ್ಳರ ಪಕ್ಷ ಅಂತಾನೆ..

ಅವರಿಗೆ ಇನ್ನೂ ಗೊತ್ತಿಲ್ಲ. ನನ್ನ ಕಾರ್ಯಕರ್ತರು ಸುಮ್ಮನಿರೋದು ನನ್ನ ಬಗ್ಗೆ ತಪ್ಪು ಸಂದೇಶ ಹೊಗುತ್ತೆ ಅಂತ..

ನಾನು ನಿರ್ಮಾಪಕ ಆಗಿದ್ದವನು. ನನ್ನಂಥ ನಿರ್ಮಾಪಕ ಇಲ್ಲದಿದ್ರೆ ಎಲ್ಲಿ ಬದುಕ್ತಾವೆ ಇವು.. ಸಿನೆಮಾದಲ್ಲಿ ನೋಡೋದು ನಿಜ ಅನ್ಕೋಬೇಡಿ. ನಿಮ್ಮ ಮನೆಯಲ್ಲಿ ನಡಿತಿರೋದು ನಿಜವಾದ ಜೀವನ.." ಎಂದು ಗುಡುಗಿದ್ದಾರೆ.

ಸಿಎಂ ಕುಮಾರಸ್ವಾಮಿ ಆಡಿರುವ ಮಾತು ಸತ್ಯಕ್ಕೆ ದೂರವಾದುದು ಎಂದಿರುವ ಯಶ್ ಆ ಬಗ್ಗೆ ಮಾತಿಗೆ ರಾಕಿಂಗ್ ಸ್ಟಾರ್ ಯಶ್ ಸ್ಪಷ್ಟೀಕರಣ ನೀಡಿದ್ದಾರೆ. "ನಾವೆಂದೂ ಜೆಡಿಎಸ್ ಪಕ್ಷವನ್ನು ಕಳ್ಳರ ಪಕ್ಷ ಎಂದಿಲ್ಲ. ಯಾರಾದರೂ ಒಬ್ಬರು ನಾನು ಆ ಬಗ್ಗೆ ಮಾತನಾಡಿದ್ದೀನಿ ಎಂದು ಸಾಕ್ಷಿ ತೋರಿಸಿದರೆ ಅವರು ಏನು ಹೇಳಿದರೂ ನಾನು ಕೇಳ್ತೀನಿ.." ಎಂದಿರುವ ಯಶ್ 'ಆ ಬಗ್ಗೆ ನನ್ನಲ್ಲಿ ಸ್ಪಷ್ಟತೆಯಿದೆ" ಎಂದು ಸಿಎಂ ಮಾತಿಗೆ ತಿರುಗೇಟು ನೀಡಿದ್ದಾರೆ.

ಜಿಲ್ಲೆಯ ದ್ಯಾಪಸಂದ್ರ ಗ್ರಾಮದಲ್ಲಿ ಸುಮಲತಾ ಪರ ಪ್ರಚಾರ ನಡೆಸಿದ ಯಶ್ "ನನಗೆ ಜೆಡಿಎಸ್ ಪಕ್ಷದಲ್ಲಿ ಬಹಳಷ್ಟು ಜನ ಸ್ನೇಹಿತರಿದ್ದಾರೆ. ಹಾಗಿದ್ದರೆ ನಾನು ಅವರ ಪಕ್ಷದಲ್ಲಿರುವ ನನ್ನ ಸ್ನೇಹಿತರಿಗೆ ಕಳ್ಳರು ಎಂದಿದ್ದೀನಾ? ಸುಮ್ಮನೇ ಯಾರೋ ಈ ವಿಚಾರದಲ್ಲಿ ಯಾರೋ ಸಿಎಂ ಕುಮಾರಸ್ವಾಮಿಗೆ ಚಾಡಿ ಹೇಳಿ ಮಿಸ್ ಗೈಡ್ ಮಾಡಿರಬೇಕು. ನಾವೆಂದೂ ಜೆಡಿಎಸ್ ಪಕ್ಷವನ್ನು ಕಳ್ಳರ ಪಕ್ಷ ಎಂದಿಲ್ಲ" ಎಂದು ಯಶ್ ಸ್ಪಷ್ಟನೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌