ಆ್ಯಪ್ನಗರ

ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ರಾಕಿಂಗ್ ಸ್ಟಾರ್ ಯಶ್ ತಾಯಿ ಎ ಪುಷ್ಪಾ!

ಯಶ್‌ ಅವರ ಕುಟುಂಬ ಬಾಡಿಗೆ ಇರುವ ಮನೆಯ ಮಾಲೀಕರಿಗೆ ಪಾವತಿಸಬೇಕಾಗಿದ್ದ 25 ಲಕ್ಷ ರೂ. ಡಿಡಿ ಬಿಡುಗಡೆ ಮಾಡಲು ರಿಜಿಸ್ಟ್ರಾರ್‌ಗೆ ಹೈಕೋರ್ಟ್‌ ಶುಕ್ರವಾರ ನಿರ್ದೇಶಿಸಿದೆ. ಈ ಹಿಂದೆ ನ್ಯಾಯಾಲಯದ ಸೂಚನೆ ಮೇರೆಗೆ ಹೈಕೋರ್ಟ್‌ ರಿಜಿಸ್ಟ್ರಾರ್‌ ಬಳಿ ಯಶ್‌ ಅವರ ತಾಯಿ ಎ ಪುಷ್ಪಾ ಅವರು 25 ಲಕ್ಷ ರೂ. ವನ್ನು ಡಿಡಿ ಮೂಲಕ ಠೇವಣಿ ಇರಿಸಿದ್ದರು.

Vijaya Karnataka Web 23 Mar 2019, 11:59 am
ಕೆಜಿಎಫ್ ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್ ಅವರು ಬನಶಂಕರಿಯ ಕತ್ರಿಗುಪ್ಪೆಯ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಈ ಮನೆಯನ್ನು ನ್ಯಾಯಾಲಯದ ಆದೇಶದಂತೆ ಮಾರ್ಚ್ 31, ನ್ನು 2019 ರ ಅಂತ್ಯದ ವೇಳೆ ಖಾಲಿ ಮಾಡುವುದಾಗಿ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದ ನಟ ಯಶ್‌ ತಾಯಿ ಎ ಪುಷ್ಪಾ ಅವರು, ಇದೀಗ ಇನ್ನೂ ಆರು ತಿಂಗಳ ಕಾಲಾವಕಾಶ ಕೋರಿ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.
Vijaya Karnataka Web pushpa2302


ತಾವು ಇದೇ ಮನೆಯಲ್ಲಿ ಇನ್ನೂ 6 ತಿಂಗಳು ಇರುವ ಅನಿವಾರ್ಯತೆಯಿದ್ದು, ತಮಗೆ ಆ ನಿಟ್ಟಿನಲ್ಲಿ ಅನುಕೂಲ ಮಾಡಿಕೊಡಬೇಕು ಎಂದು ನಟ ಯಶ್‌ ತಾಯಿ ಎ ಪುಷ್ಪಾ ಅವರು, ಇದೀಗ ಇನ್ನೂ ಆರು ತಿಂಗಳ ಕಾಲಾವಕಾಶ ಕೋರಿ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಅವಧಿ ವಿಸ್ತರಣೆಗಾಗಿ ನಿನ್ನೆ, 22 ಮಾರ್ಚ್ 2019ರಂದು ಶುಕ್ರವಾರ ಮಧ್ಯಂತರ ಅರ್ಜಿ ಸಲ್ಲಿಸಿದ್ದು, ನ್ಯಾಯಮೂಕರ್ತಿ ಬಿವಿ ನಾಗರತ್ನ ಮತ್ತು ನ್ಯಾಯಮೂರ್ತಿ ಎಚ್‌ಟಿ ನರೇಂದ್ರ ಪ್ರಸಾದ್‌ ಅವರಿದ್ದ ವಿಭಾಗೀಯ ಪೀಠದಲ್ಲಿ ಸದಯದಲ್ಲೇ ವಿಚಾರಣೆಗೆ ಬರುವ ಸಾಧ್ಯತೆಯಿದೆ.

ಇದಕ್ಕೂ ಮೊದಲು ನಡೆದಿದ್ದ ವಿಚಾರಣೆ ವೇಳೆ ಮಾರ್ಚ್ 31ರ ಒಳಗಾಗಿ ಮನೆ ಖಾಲಿ ಮಾಡುವುದಾಗಿ ನ್ಯಾಯಾಲಯಕ್ಕೆ ಪುಷ್ಪಾ ಅವರು ತಿಳಿಸಿದ್ದರು. ಆದರೆ, ಈಗ "ನಮ್ಮ ಕುಟುಂಬ ಹಾಸನದಲ್ಲಿ ನೆಲೆಸಲು ನಿರ್ಧರಿಸಿದೆ. ಅಲ್ಲಿ ಮನೆ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಮುಂದಿನ ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಆದ್ದರಿಂದ ಈ ಅವಧಿಗೆ ಮತ್ತೊಂದು ಮನೆ ಹುಡುಕುವುದು ನಮಗೆ ಕಷ್ಟಕರ. ಹಾಗಾಗಿ ಪ್ರಸ್ತುತ ವಾಸವಿರುವ ಮನೆಯಲ್ಲಿಯೇ ವಾಸ್ತವ್ಯ ಮುಂದುವರೆಸಲು ಅವಕಾಶ ಕಲ್ಪಿಸಬೇಕು" ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ.

ಇನ್ನೊಂದೆಡೆ, ಯಶ್‌ ಅವರ ಕುಟುಂಬ ಬಾಡಿಗೆ ಇರುವ ಮನೆಯ ಮಾಲೀಕರಿಗೆ ಪಾವತಿಸಬೇಕಾಗಿದ್ದ 25 ಲಕ್ಷ ರೂ. ಡಿಡಿ ಬಿಡುಗಡೆ ಮಾಡಲು ರಿಜಿಸ್ಟ್ರಾರ್‌ಗೆ ಹೈಕೋರ್ಟ್‌ ಶುಕ್ರವಾರ ನಿರ್ದೇಶಿಸಿದೆ. ಈ ಹಿಂದೆ ನ್ಯಾಯಾಲಯದ ಸೂಚನೆ ಮೇರೆಗೆ ಹೈಕೋರ್ಟ್‌ ರಿಜಿಸ್ಟ್ರಾರ್‌ ಬಳಿ ಯಶ್‌ ಅವರ ತಾಯಿ ಎ ಪುಷ್ಪಾ ಅವರು 25 ಲಕ್ಷ ರೂ. ವನ್ನು ಡಿಡಿ ಮೂಲಕ ಠೇವಣಿ ಇರಿಸಿದ್ದರು. ಈ ಮೊತ್ತದ ಡಿಡಿ ಬಿಡುಗಡೆ ಕೋರಿ ಮನೆಯ ಮಾಲೀಕ ಡಾ ಎಂ ಮುನಿಪ್ರಸಾದ್‌ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಯಶ್ ಕುಟುಂಬಕ್ಕೆ ಈ ಸೂಚನೆ ನೀಡಿದೆ.

ಯಶ್ ತಾಯಿ ಎ ಪುಷ್ಪಾ ಅವರು ಮನೆ ಮಾಲೀಕರಿಗೆ ಕೂಡಲೇ ಬಾಡಿಗೆ ಬಾಕಿ ಹಣ ಬಡ್ಡಿ ಸಹಿತ ಪಾವತಿಸಿದಲ್ಲಿ 2019ರ ಮಾರ್ಚ್ 31ರವರೆಗೆ ಈ ಮನೆಯಲ್ಲಿ ವಾಸ ಮುಂದುವರಿಸಬಹುದು. ಒಮ್ಮೆ ಬಾಡಿಗೆ ಹಣ ಪಾವತಿಸುವುದು ವಿಳಂಬವಾದರೆ, 2018ರ ಡಿ 31ರೊಳಗೆ ಮನೆ ಖಾಲಿ ಮಾಡಿಕೊಡಬೇಕು ಎಂದು 2018ರ ಸೆಪ್ಟೆಂಬರ್ 5ರಂದು ಹೈಕೋರ್ಟ್‌ ಆದೇಶಿಸಿತ್ತು. ಅದರಂತೆ ಪುಷ್ಪಾ, ಬಾಡಿಗೆ ಬಾಕಿ ಹಣವಾದ 25 ಲಕ್ಷವನ್ನು ಹೈಕೋರ್ಟ್‌ನಲ್ಲಿ ಠೇವಣಿ ಇರಿಸಿದ್ದಾರೆ. ಈಗ ಆಗಿರುವ ಬೆಳವಣಿಗೆಯಿಂದ ಮುಂದೇನು ಎಂಬ ಕುತೂಹಲ ಕ್ರಿಯೇಟ್ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌