ಆ್ಯಪ್ನಗರ

ಭರ್ಜರಿ ಸೆಂಚುರಿ ಭಾರಿಸಿದ ಕೆಜಿಎಫ್‌: ಚಿತ್ರತಂಡ ಹೇಳಿದ್ದೇನು?

ಕೆಜಿಎಫ್ ಇಡೀ ಚಿತ್ರತಂಡವೇ ಇಂದು ಸಂತೋಷವನ್ನು ಅನುಭವಿಸುತ್ತಿದೆ. ಕಾರಣ, ಇಂದು ಕೆಜಿಎಫ್ ಚಿತ್ರತಂಡದ ಯಾರೊಬ್ಬರು ಕೂಡ ಖಾಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿಯಿಲ್ಲ. ಅಷ್ಟರಮಟ್ಟಿಗೆ ಈ ಚಿತ್ರವು ಚಿತ್ರತಂಡದ ಸದಸ್ಯರಿಗೆ ನೆರವಾಗಿದೆ.

Vijaya Karnataka Web 30 Mar 2019, 3:45 pm
ಸದ್ಯಕ್ಕೆ ಕೆಜಿಎಫ್ ಸಿನಿಮಾ ಹೆಸರು ಕೇಳಿದರೆ ಸಾಕು, ಎಲ್ಲರಿಗೂ ರೋಮಾಂಚನವಾಗುತ್ತದೆ. ಅಷ್ಟರಮಟ್ಟಿಗೆ ಈ ಸಿನಿಮಾ ಇಡೀ ಇಂಡಿಯಾ ತುಂಬ ಅಬ್ಬರಿಸಿದೆ, ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನು ದಾಖಲಿಸಿದ ಈ ಸಿನಿಮಾ, ನ್ಯಾಷನಲ್ ಸಿನಿಮಾ ಎಂದು ಕರೆಸಿಕೊಳ್ಳುವಷ್ಟರ ಮಟ್ಟಿಗೆ ಸದ್ದು ಮಾಡಿದೆ. ಕನ್ನಡ ಚಿತ್ರೋದ್ಯಮದ ಹೆಸರನ್ನು ಇಂಡಿಯಾ ಮೀರಿ ಫೇಮಸ್ ಮಾಡಿದ ಕೀರ್ತಿ ಕೆಜಿಎಫ್‌ಗೆ ಸಲ್ಲುತ್ತದೆ ಎಂದರೆ ಅತಿಶಯೋಕ್ತಿಯಲ್ಲ.
Vijaya Karnataka Web yash3003


ಕಳೆದ ವರ್ಷ, ಡಿಸೆಂಬರ್ 21 2019ರಂದು ಬಿಡುಗಡೆಯಾಗಿ ಇದೀಗ ಯಶಸ್ವಿಯಾಗಿ ನೂರು ದಿನ ಪೂರೈಸಿ ಮುಂದಕ್ಕೆ ಓಡುತ್ತಿದೆ ಕನ್ನಡಿಗರ ಹೆಮ್ಮೆಯ ಕೆಜಿಎಫ್. ಈ ವೇಳೆ ಚಿತ್ರತಂಡವು ಸಾಮಾಜಿಕ ಜಾಲತಾಣಗಳ ಮೂಲಕ "ನಿಮ್ಮ ಪ್ರೀತಿಗಾಗಿ ಪ್ರತಿಯೊಬ್ಬರಿಗೂ ಧನ್ಯವಾದಗಳು'" ಎಂದು ಪೋಸ್ಟ್ ಮಾಡಿ ಎದಲ್ಲರಿಗೂ ಕೃತಜ್ಞತೆ ಸಲ್ಲಿಸಿದೆ. ಚಿತ್ರತಂಡವು ಇನ್ನೂ ಖುಷಿಯಾಗಿ ಈಚಿತ್ರದ ಎರಡನೇ ಭಾಗವಾದ ಕೆಜಿಎಫ್ ಚಾಪ್ಟರ್ 2' ದ ಚಿತ್ರೀಕರಣದಲ್ಲಿ ಭಾಗಿಯಾಗಿದೆ.

ನೂರು ದಿನ ಭಾರಿ ಯಶಸ್ಸು ಗಳಿಸಿರುವ ಈ ಚಿತ್ರವು ಇನ್ನೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಎಂಬುದು ನಿಜವಾಗಿಯೂ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಈ ಚಿತ್ರವು ಕನ್ನಡದ ಮೊದಲಿನ ಎಲ್ಲ ದಾಖಲೆಗಳನ್ನು ಪುಡುಪುಡಿ ಮಾಡಿದ್ದು, ನಾಯಕ ನಟ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಅವರ ವೃತ್ತಿಜೀವನವನ್ನು ಎಷ್ಟೋ ಮೇಲ್ಮಟ್ಟದ ಹಂತಕ್ಕೆ ತಗೆದುಕೊಂಡು ಹೋಗಿರುವ ಸಿನಿಮಾ. ಇಂದು ಯಶ್ ನ್ಯಾಷನಲ್ ಸ್ಟಾರ್ ಆಗಿದ್ದು, ಪ್ರಶಾಂತ್ ನೀಲ್ ಭಾರತೀಯ ನಿರ್ದೇಶಕ ಎನಿಸಿದ್ದು ಈ ಚಿತ್ರದ ಮೂಲಕ ಎಂಬುದು ಸತ್ಯ ಸಂಗತಿ.

ಕೆಜಿಎಫ್ ಇಡೀ ಚಿತ್ರತಂಡವೇ ಇಂದು ಸಂತೋಷವನ್ನು ಅನುಭವಿಸುತ್ತಿದೆ. ಕಾರಣ, ಇಂದು ಕೆಜಿಎಫ್ ಚಿತ್ರತಂಡದ ಯಾರೊಬ್ಬರು ಕೂಡ ಖಾಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿಯಿಲ್ಲ. ಅಷ್ಟರಮಟ್ಟಿಗೆ ಈ ಚಿತ್ರವು ಚಿತ್ರತಂಡದ ಸದಸ್ಯರಿಗೆ ನೆರವಾಗಿದೆ. ಈಗಾಗಲೇ ಶುರುವಾಗಿರುವ 'ಕೆಜಿಎಫ್ ಚಾಪ್ಟರ್ -2' ಚಿತ್ರದಲ್ಲಿ ಕೆಜಿಎಫ್ ಚಿತ್ರದ ಬಹುತೇಕ ಕಲಾವಿದರು ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ, ಇನ್ನೂ ಹೆಚ್ಚಿನ ಕಲಾವಿದರು ಮುಂಬರುವ ಈ ಚಿತ್ರದ ಸೀಕ್ವೆಲ್‌ಗೆ ಸೇರ್ಪಡೆಯಾಗಿದ್ದಾರೆ.

ಒಟ್ಟನಲ್ಲಿ, ಯಶ್ ನಾಯಕತ್ವದ ಕೆಜಿಎಫ್ ಚಿತ್ರವು ನೂರನೇ ದಿನ ದಾಟಿ ಇನ್ನೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇದು ಕನ್ನಡದಲ್ಲಿ ಮೊದಲು ಕೋಟಿ ಕ್ಲಬ್ ದಾಖಲೆಗೆ ಸೇರಿದ ಚಿತ್ರ ಎಂಭ ಹಿರಿಮೆಗೆ ಪಾತ್ರವಾಗಿದೆ. ಈಗಾಗಲೇ ಈ ಚಿತ್ರದ ಮುಂದಿನ ಭಾಗದ ಶೂಟಿಂಗ್ ಪ್ರಾರಂಭವಾಗಿದೆ. ಚಿತ್ರತಂಡವು ಕೆಜಿಎಫ್ ಚಿತ್ರವನ್ನು ಯಶಸ್ವಿಯಾಗಿಸಿದ ಎಲ್ಲರಿಗೂ ಸಾಮಾಜಿಕ ಜಾಲತಾಣಘಲ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌