ಆ್ಯಪ್ನಗರ

ತಂಗಿಗೆ ಅಭಯ ನೀಡಿದ ರಾಖಿ ಭಾಯ್ ಯಶ್

ರಕ್ಷಾ ಬಂಧನದ ದಿನ ರಾಕಿಂಗ್ ಸ್ಟಾರ್ ಯಶ್ ತನ್ನ ತಂಗಿಗೆ ವಿಶ್ ಮಾಡಿದ್ದು ಅಭಯ ನೀಡಿದ್ದಾರೆ. ನನ್ನ ಕೈಯಲ್ಲಿ ರಾಖಿ ಇರುವ ತನಕ ನನಗೆ ಭಯ ಇಲ್ಲ, ಈ ರಾಖಿ ಇರುವವರೆಗೆ ನೀನು ಭಯ ಪಡಬೇಕಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

Vijaya Karnataka 16 Aug 2019, 10:48 am
ನಟ ಯಶ್‌ ರಕ್ಷಾ ಬಂಧನಕ್ಕೆ ತಮ್ಮ ಸಹೋದರಿಗೆ ಶುಭ ಹಾರೈಸಿದ್ದಾರೆ. ಯಶ್‌ಗೆ ತಮ್ಮ ತಂಗಿ ನಂದಿನಿ ಕಂಡರೆ ಅಪಾರವಾದ ಪ್ರೀತಿ. ಸದಾ ತಂಗಿಯ ಒಳಿತನ್ನೇ ಬಯಸುವ ಅವರು ನನಗೆ ತಂಗಿಗಿಂತ ಹೆಚ್ಚು ಯಾರೂ ಇಲ್ಲ ಎನ್ನುತ್ತಿದ್ದರು. ಇದೀಗ ಮತ್ತೆ ರಕ್ಷಾ ಬಂಧನ ದಿನ ಬಂದಿದೆ. ಅಣ್ಣ ತಂಗಿ ಪ್ರೀತಿಯನ್ನು ಸ್ಮರಿಸುವ ಈ ಕ್ಷಣದಲ್ಲಿ ಅವರು ತಮ್ಮ ತಂಗಿಯ ಜತೆ ಇರುವ ಫೋಟೋ ಒಂದನ್ನು ಟ್ವೀಟ್‌ ಮಾಡಿದ್ದಾರೆ.
Vijaya Karnataka Web yash


ಕೈಗೆ ರಾಖಿ ಕಟ್ಟಿಸಿಕೊಂಡು ಕ್ಯಾಮೆರಾಗೆ ಪೋಸ್‌ ನೀಡಿರುವ ಅವರು, ಪ್ರೀತಿ ಸಂದೇಶವನ್ನೂ ನೀಡಿದ್ದಾರೆ. 'ನನ್ನ ಕೈಯಲ್ಲಿ ರಾಖಿ ಇರುವವರೆಗೆ ನನಗೆ ವರಿ ಇಲ್ಲ, ಈ ರಾಕಿ ಇರುವವರೆಗೆ ನೀನು ವರಿ ಮಾಡಬೇಕಿಲ್ಲ. ಹ್ಯಾಪಿ ರಕ್ಷಾಬಂಧನ್‌ ಮತ್ತು ಎಲ್ಲರಿಗೂ ಹ್ಯಾಪಿ ಇಂಡಿಪೆಂಡೆನ್ಸ್‌ ಡೇ' ಎಂದು ಬರೆದುಕೊಂಡಿದ್ದಾರೆ.

ಕೆಜಿಎಫ್‌ ಚಿತ್ರದಲ್ಲಿ ಅವರ ಪಾತ್ರದ ಹೆಸರೂ ರಾಕಿ. ಅದನ್ನೇ ಅವರು ತಮ್ಮ ತಂಗಿಗೆ ಹೇಳಿದ್ದಾರೆ. ಈ ರಾಕಿ ಇರುವವರೆಗೆ ನೀನು ಚಿಂತಿಸಬೇಕಿಲ್ಲ ಎಂದು ಅಭಯ ನೀಡಿ ಅಣ್ಣನ ಕರ್ತವ್ಯ, ತಂಗಿಯ ಬಗ್ಗೆ ಇರುವ ಕಾಳಜಿಯನ್ನು ಮೆರೆದಿದ್ದಾರೆ. ಯಶ್‌ ನಟನೆಯ ಕೆಜಿಎಫ್‌ 2 ಚಿತ್ರದ ಶೂಟಿಂಗ್‌ ಭರದಿಂದ ಸಾಗಿದೆ. ಮುಂದಿನ ವರ್ಷ ಚಿತ್ರ ತೆರೆಕಾಣಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌