ಆ್ಯಪ್ನಗರ

ಅಂಬಿ ನೆನೆದು ಗದ್ಗದಿತರಾದ ರಾಕ್‌ಲೈನ್ ವೆಂಕಟೇಶ್

ಅಂಬಿ ಕುಟುಂಬದ ಸದ್ಯದ ಪರಿಸ್ಥಿತಿ ನೆನೆದು ದುಃಖಿತರಾದರು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್. ಮಾತಿನ ಮಧ್ಯೆ ಎರಡೆರಡು ಬಾರಿ ಮಾತು ನಿಲ್ಲಿಸಿದ ರಾಕ್‌ಲೈನ್ ಕಟೇಶ್. ಒತ್ತರಿಸಿ ಬರುತ್ತಿದ್ದ ದುಖಃ ತಡೆದುಕೊಂಡು ಮಾತನಾಡಿದರು.

Vijaya Karnataka Web 2 Mar 2019, 4:57 pm
ಸುಮಲತಾ ಅಂಬರೀಶ್ ಅವರು ಇಂದು ಮೈಸೂರಿನ ಶ್ರೀಕ್ಷೇತ್ರ ಸುತ್ತೂರಿನಲ್ಲಿರುವ ಸುತ್ತೂರು ಗದ್ದುಗೆ ಮಠದಲ್ಲಿ ಶ್ರೀಗಳನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ
Vijaya Karnataka Web rockline-venkatesh

ಸ್ಯಾಂಡಲ್‍ವುಡ್ ನಿರ್ಮಾಪರಾದ ರಾಕ್‍ಲೈನ್ ವೆಂಕಟೇಶ್ ಮತ್ತು ನಟ ದೊಡ್ಡಣ್ಣ ಸಹ ಉಪಸ್ಥಿತರಿದ್ದರು.

ಶ್ರೀಗಳಿಗೆ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ ಚೊಚ್ಚಲ ಚಿತ್ರ ಅಮರ್ ಟ್ರೇಲರ್ ತೋರಿಸಲಾಯಿತು. ಬಳಿಕ ಅಂಬಿಯನ್ನು ನೆನೆದ ರಾಕ್‍ಲೈನ್ ವೆಂಕಟೇಶ್ ಈ ಸಂದರ್ಭದಲ್ಲಿ ಭಾವುಕರಾದ ಘಟನೆ ನಡೆದಿದೆ. ['ಅಮರ್' ಚಿತ್ರದ ಟ್ರೇಲರ್‌ ವೀಕ್ಷಿಸಿ ಆಶೀರ್ವದಿಸಿದ ಸುತ್ತೂರು ಶ್ರೀಗಳು]

ಅಂಬಿ ಕುಟುಂಬದ ಸದ್ಯದ ಪರಿಸ್ಥಿತಿ ನೆನೆದು ದುಃಖಿತರಾದರು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್. ಮಾತಿನ ಮಧ್ಯೆ ಎರಡೆರಡು ಬಾರಿ ಮಾತು ನಿಲ್ಲಿಸಿದ ರಾಕ್‌ಲೈನ್ ವೆಂಕಟೇಶ್. ಒತ್ತರಿಸಿ ಬರುತ್ತಿದ್ದ ದುಖಃ ತಡೆದುಕೊಂಡು ಮಾತನಾಡಿದರು.

"ಅವರ ಆರೋಗ್ಯ ಕ್ಷೀಣಿಸಿದ ನಂತರ ಅವರು ನನಗೆ ತಂದೆಯೇ ಆಗಿಬಿಟ್ಟಿದ್ದರು. ಮಂಡ್ಯದ ಜನರನ್ನು ಸಕ್ಕರೆ ಜನರು ಅಂತಾ ಕರೀತಿದ್ದರು. ಅವರು ಇದ್ದಾಗಿನ ಪರಿಸ್ಥಿತಿಯೇ ಬೇರೆ. ಈಗಿನ ಪರಿಸ್ಥಿತಿಯೇ ಬೇರೆ ಆಗಿದೆ. ನಾನು ಸದಾ ಅವರ ಕುಟುಂಬದ ಜೊತೆ ಇರುವೆ. ಸುತ್ತೂರು ಶ್ರೀಗಳಿಗೆ ಅಮರ್ ಚಿತ್ರದ ಟ್ರೈಲರ್ ತೋರಿಸಿದೆ. ತುಂಬಾ ಖುಷಿ ಆಗುತ್ತಿದೆ" ಎಂದಿದ್ದಾರೆ ರಾಕ್ ಲೈನ್ ವೆಂಕಟೇಶ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌