ಆ್ಯಪ್ನಗರ

ಅಣ್ಣಾಮಲೈ ಪ್ರೇರಿತ ಎಸಿಪಿ ಪಾತ್ರದಲ್ಲಿ ಧನಂಜಯ್ ಸಖತ್ ಲುಕ್!

ಸದ್ಯಕ್ಕೆ ನಟ ದನಂಜಯ್ ಅವರು ದುನಿಯಾ ವಿಜಯ್ ಮೊಟ್ಟಮೊದಲ ನಿರ್ದೇಶನದ 'ಸಲಗ' ಚಿತ್ರದಲ್ಲಿ ಪ್ರಮುಖ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಮ್ಮ ಮುಂಬರುವ ಪೊಲೀಸ್ ಪಾತ್ರದ ಚಿತ್ರಕ್ಕಾಗಿ ಕ್ಲೀನ್ ಶೇವ್ ಮತ್ತು ಶಾರ್ಟ್ ಹೇರ್ ಮಾಡಿಕೊಂಡಿರುವ ಧನಂಜಯ್ ಅವರಿಗೆ ಈ ಲುಕ್ ಸಖತ್ ಇಷ್ಟವಾಗಿದೆಯಂತೆ.

TIMESOFINDIA.COM 28 Jul 2019, 10:24 am
ಸ್ಯಾಂಡಲ್‌ವುಡ್ ನಟ ಧನಂಜಯ್ ಅವರು ಖ್ಯಾತ ಎಸಿಪಿ ಅಣ್ಣಾಮಲೈ ಅವರಿಂದ ಪ್ರೇರಿತವಾದ ಪೊಲೀಸ್ ಪಾತ್ರ ಮಾಡಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಈ ವಿಷಯವನ್ನು ಬಹಿರಂಗಪಡಿಸಿರುವ ಧನಂಜಯ್, "ಪೊಲೀಸ್ ಪಾತ್ರವು ತಮ್ಮ ಕನಸಿನ ಪಾತ್ರವಾಗಿದೆ. ನಾನು ಚಿಕ್ಕವರಿದ್ದಾಗ ಯಾರಾದರೂ ದೊಡ್ಡವನಾದ ಬಳಿಕ ಏನಾಗುತ್ತೀಯ ಎಂದು ಕೇಳಲು ಪೊಲೀಸ್ ಆಗುತ್ತೇನೆ ಎನ್ನುತ್ತಿದ್ದೆ. ಇದೀಗ ಪ್ರಾಮಾಣಿಕ ಅಧಿಕಾರಿಯೊಬ್ಬರ ಪಾತ್ರ ಮಾಡುತ್ತಿರುವುದು ನನಗೆ ಸಖತ್ ಖುಷಿ ತಂದಿದೆ" ಎಂದಿದ್ದಾರೆ ದನಂಜಯ್.
Vijaya Karnataka Web dhananjay2807


ಸದ್ಯಕ್ಕೆ ನಟ ದನಂಜಯ್ ಅವರು ದುನಿಯಾ ವಿಜಯ್ ಮೊಟ್ಟಮೊದಲ ನಿರ್ದೇಶನದ 'ಸಲಗ' ಚಿತ್ರದಲ್ಲಿ ಪ್ರಮುಖ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ನಾಯಕ ದುನಿಯಾ ವಿಜಯ್ ಎದುರು ಭಾರೀ ಅಬ್ಬರಿಸಲಿದ್ದಾರೆ ಎನ್ನಲಾಗಿದೆ. ಪುನೀತ್ ರಾಜ್‌ಕುಮಾರ್ ಜತೆ 'ಯುವರತ್ನ' ಚಿತ್ರದಲ್ಲಿ ಸಹ ನಟಿಸಲಿರುವ ಧನಂಜಯ್ ಅವರು ಇತ್ತೀಚೆಗೆ ತಮ್ಮ ಹೆಚ್ಚು ಸಮಯವನ್ನು ದುನಿಯಾ ಸೂರಿ ನಿರ್ದೇಶನದ 'ಪಾಪ್‌ಕಾರ್ನ್ ಮಂಕಿ ಟೈಗರ್' ಚಿತ್ರಕ್ಕೆ ಮೀಸಲಿಟ್ಟಿದ್ದಾರೆ ಎನ್ನಲಾಗಿದೆ.

ತಮ್ಮ ಮುಂಬರುವ ಪೊಲೀಸ್ ಪಾತ್ರದ ಚಿತ್ರಕ್ಕಾಗಿ ಕ್ಲೀನ್ ಶೇವ್ ಮತ್ತು ಶಾರ್ಟ್ ಹೇರ್ ಮಾಡಿಕೊಂಡಿರುವ ಧನಂಜಯ್ ಅವರಿಗೆ ಈ ಲುಕ್ ಸಖತ್ ಇಷ್ಟವಾಗಿದೆಯಂತೆ. ಕಾರಣ, ಅದಕ್ಕೂ ಮೊದಲು ತಮ್ಮ ಕ್ಲೀನ್ ಶೇವ್ ಲುಕ್ ನೋಡಿ ಆಪ್ತರು ಏನೆನ್ನುತ್ತಾರೋ ಎಂಬ ಅಳುಕು ಅವರನ್ನು ಕಾಡಿತ್ತಂತೆ. ಆದರೆ, ಕ್ಲೀನ್ ಶೇವ್ ಮಾಡಿದ ಧನಂಜಯ್ ನೋಡಿ ಅವರ ಆಪ್ತರು 'ನಿಮ್ ಈ ಲುಕ್ ಚೆನ್ನಾಗಿದೆ' ಎಂದು ಪ್ರೋತ್ಸಾಹ ನೀಡಿದ್ದಾರಂತೆ. ಹೀಗಾಗಿ ಧನಂಜಯ್ ತಾವು ಖುಷಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಮುಂಬರುವ 'ಅಣ್ಣಾಮಲೈ' ಪಾತ್ರದ ಧನಂಜಯ್ ಹೆಸರು ಸಾಮ್ರಾಟ್ ಆಗಿದ್ದು, ಈ ಪಾತ್ರದ ಸಲುವಾಗಿ ಅವರು ಹೋಮ್ ವರ್ಕ್ ಸಹ ಮಾಡಿಕೊಂಡಿದ್ದಾರಂತೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಸಾಕಷ್ಟು ಸ್ನೇಹಿತರು ಧನಂಜಯ್ ಅವರಿಗಿದ್ದು, ಅವರಲ್ಲಿ ಹವರು ಬೆಂಗಳೂರಿನಲ್ಲೇ ಇದ್ದಾರಂತೆ. ಹೀಗಾಗಿ ಪೊಲೀಸ್ ಸ್ನೇಹಿತರನ್ನು ಭೇಟಿಯಾಗಿ ಧನಂಜಯ್ ತಮ್ಮ ಮುಂಬರುವ ಪೊಲೀಸ್ ಪಾತ್ರಕ್ಕೆ ತಯಾರಿ ಮಾಡಿಕೊಂಡಿದ್ದಾರಂತೆ.

ಯುವರತ್ನ, ಪೊಗರು, ಪಾಪ್‌ಕಾರ್ನ್ ಮಂಕಿ ಟೈಗರ್ ಮೂಂತಾದ ಸಿನಿಮಾಗಳಲ್ಲಿ ನಟಿಸುತ್ತ ಬ್ಯಸಿಯಾಗಿರುವ ನಟ ಧನಂಜಯ್ ಅವರು ಪ್ರಮುಖ ಹಾಗೂ ವಿಭಿನ್ನ ಪಾತ್ರಗಳ ಆಯ್ಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದೇ ತರನಾದ ಪಾತ್ರಕ್ಕಿಂತ ವಿಭಿನ್ನತೆಯಲ್ಲಿ ಹೆಚ್ಚು ಚೂಸಿಯಾಗಿರುವ ಧನಂಜಯ್ ಅವರು ಇದೀಗ ಖ್ಯಾತ ಎಸಿಪಿಯಾಗಿದ್ದ 'ಅಣ್ಣಾಮಲೈ' ಪಾತ್ರದ ಮೂಲಕ ಇನ್ನೂ ಸಖತ್ ಕ್ರೇಜ್ ಹುಟ್ಟಿಸಲಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ನಟ ಧನಂಜಯ್ ಪ್ರತಿಭೆ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ವಿಭಿನ್ನ ದಾರಿಯಲ್ಲಿ ಸಾಗುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌