ಆ್ಯಪ್ನಗರ

ನಟ ಸದಾಶಿವ ಬ್ರಹ್ಮಾವರ್‌ ಅವರನ್ನು ಅನಾಥರಾಗಲು ಬಿಡಲ್ಲ: ಜಗ್ಗೇಶ್

ಸ್ಯಾಂಡಲ್‌ವುಡ್‌ನ 150ಕ್ಕೂ ಚಿತ್ರಗಳಲ್ಲಿ ಪೋಷಕ ನಟನಾಗಿ ನಟಿಸಿರುವ ಹಿರಿಯ ಜೀವ ಸದಾಶಿವ ಬ್ರಹ್ಮಾವರ್‌ ಮಕ್ಕಳ ನಿರ್ಲಕ್ಷ್ಯದಿಂದಾಗಿ ಬೀದಿ-ಬೀದಿ ಅಲೆಯುವಂಥ ಪರಿಸ್ಥಿತಿ ಉಂಟಾಗಿದೆ.

ವಿಕ ಸುದ್ದಿಲೋಕ 16 Aug 2017, 2:17 pm
ಬೆಂಗಳೂರು: ಸ್ಯಾಂಡಲ್‌ವುಡ್‌ನ 150ಕ್ಕೂ ಚಿತ್ರಗಳಲ್ಲಿ ಪೋಷಕ ನಟನಾಗಿ ನಟಿಸಿರುವ ಹಿರಿಯ ಜೀವ ಸದಾಶಿವ ಬ್ರಹ್ಮಾವರ್‌ ಮಕ್ಕಳ ನಿರ್ಲಕ್ಷ್ಯದಿಂದಾಗಿ ಬೀದಿ-ಬೀದಿ ಅಲೆಯುವಂಥ ಪರಿಸ್ಥಿತಿ ಉಂಟಾಗಿದೆ. ಈ ಸುದ್ದಿ ಕೇಳಿ ಈ ಹಿರಿ ಜೀವಕ್ಕೆ ಸಹಾಯ ಮಾಡಲು ಕನ್ನಡ ಚಿತ್ರರಂಗದ ಕಲಾವಿದರ ಸಂಘ ಮುಂದೆ ಬಂದಿದೆ.
Vijaya Karnataka Web sandalwood actor sadashiva brahmavar abandoned by children
ನಟ ಸದಾಶಿವ ಬ್ರಹ್ಮಾವರ್‌ ಅವರನ್ನು ಅನಾಥರಾಗಲು ಬಿಡಲ್ಲ: ಜಗ್ಗೇಶ್


ಈ ಕುರಿತು ಟ್ವೀಟ್‌ ಮಾಡಿರುವ ನಟ ಜಗ್ಗೇಶ್‌ ಅವರು, ಅವರ ವಿಳಾಸ ಕೊಡಿ, ಕಲಾವಿದರ ಸಂಘ ಅವರ ಜತೆಗಿದ್ದೇವೆ, ಅವರನ್ನು ಅನಾಥರಾಗಲು ಬಿಡಲ್ಲ ಎಂದಿದ್ದಾರೆ.

ದಯಮಾಡಿ ವಿಳಾಸ ಮಾಹಿತಿ ನೀಡಿ!ನಾವು ನಮ್ಮ ಕಲಾವಿದರ ಸಂಘ ಅವರಿಗಾಗಿ ಇದ್ದೇವೆ!ಅವರನ್ನು ಅನಾಥರಾಗಲು ಬಿಡುವುದಿಲ್ಲಾ!ದುಖ್ಖವಾಯಿತು!ಪಾಪಿದುನಿಯ!ಯಾಕೆ ಬೇಕು ಇಂಥ ಬಂಧುಗಳು! https://t.co/wqDJrO7Rxv — ನವರಸನಾಯಕ ಜಗ್ಗೇಶ್ (@Jaggesh2) August 16, 2017 ಮಕ್ಕಳು ನಿರ್ಲಕ್ಷ್ಯ ತೀರಿದಾಗ ಈ ಹಿರಿ ಜೀವ ಮನೆಬಿಟ್ಟು, ಬೆಂಗಳೂರು ಬಿಟ್ಟು ಕುಮಟಾಕ್ಕೆ ಹೋಗಿ ಅಲ್ಲಿಯ ರಸ್ತೆಗಳಲ್ಲಿ ಅಲೆದಾಡುತ್ತಿದ್ದರು. ಊಟಕ್ಕೂ ಇವರ ಬಳಿ ಹಣವಿರಲಿಲ್ಲ. ನಾನೊಬ್ಬ ಹಿರಿಯ ನಟ ಎಂದು ಅವರು ಹೇಳಿದಾಗ ಕುಮಟಾದ ಜನರು ಅವರಿಗೆ ಊಟ ನೀಡಿ ಸತ್ಕರಿಸಿ, ಕೈಗೆ ಸ್ವಲ್ಪ ಹಣ ಕೊಟ್ಟು ಕಳಿಸಿದ್ದಾರೆ. ಈಗ ಅವರು ಎಲ್ಲಿ ಹೋಗಿದ್ದಾರೆ ಎಂದು ಯಾರಿಗೂ ಗೊತ್ತಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌