ಆ್ಯಪ್ನಗರ

ಸುದ್ದಿ ವಾಹಿನಿಗಳ ಮೇಲೆ ಸಿಡಿಮಿಡಿಗೊಂಡು ಶಿವಣ್ಣ ಹೇಳಿದ್ದೇನು?

"ನಮ್ಮ ಸಿನಿಮಾ ಓಕೆ ಬಿಡಿ, ನಾವು ಹೇಗೋ ಮ್ಯಾನೇಜ್ ಮಾಡ್ತೀವಿ. ಆದ್ರೆ, ಎಷ್ಟೊಂದು ಹೊಸ ಹೊಸ ಸಿನಿಮಾಗಳು ಬರುತ್ತವೆ. ಅವರೆಲ್ಲಾ ಏನ್ ಮಾಡೋಕಾಗುತ್ತೆ? ಎಲ್ಲರೂ ದುಡ್ಡು ಹಾಕಿರ್ತಾರೆ. ನಾವು ದುಡ್ಡಿಗಾಗಿ ಕೆಲಸ ಮಾಡ್ತೀವಿ, ನೀವೂ ಕೂಡ ದುಡ್ಡಿಗಾಗಿ ಬಿಸಿನೆಸ್‌ ಮಾಡ್ತೀರಿ. ಕಾಲ ಹೀಗೆ ಇರಲ್ಲ, ಬದಲಾಗುತ್ತೆ..

Vijaya Karnataka Web 17 Apr 2019, 3:21 pm
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ಬಂದು 33 ವರ್ಷ ಕಳೆದಿದೆ. ಇದೀಗ ನಟ ಶಿವಣ್ಣ ಸುದ್ದಿ ಟಿವಿ ವಾಹಿನಿಗಳ ಮೇಲೆ ಬೇಸರಗೊಂಡಿದ್ದಾರೆ. ಸುದ್ದಿ ವಾಹಿನಿಗಳು ಮಾಡುತ್ತಿರುವುದು ಸರಿಯಿಲ್ಲ ಎಂದಿದ್ದಾರೆ. ಶಿವರಾಜ್ ಕುಮಾರ್ ಅವರು ಲೋಕಸಭೆ ಚುನಾವಣೆಯ ಅಬ್ಬರದ ಪ್ರಚಾರದಲ್ಲಿ ಮುಳುಗಿ, ಕನ್ನಡ ಸಿನಿಮಾಗಳ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿದೆ. ವಿಶೇಷವಾಗಿ ಟಿವಿ ಚಾನಲ್ ಗಳು ಬರಿ ಎಲೆಕ್ಷನ್ ಕುರಿತಾಗಿ ಕಾರ್ಯಕ್ರಮಗಳನ್ನ ಪ್ರಸಾರ ಮಾಡುತ್ತಿದೆ ಎಂದು ನಟ ಶಿವರಾಜ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
Vijaya Karnataka Web shiva1704


"ದಿನಪೂರ್ತಿ ಎಲೆಕ್ಷನ್ ಬಗ್ಗೆನೇ ಪ್ರಸಾರ ಮಾಡಿದ್ರೆ ಹೇಗೆ? ನಮ್ಮ ಕಡೆಯೂ ಸ್ವಲ್ಪ ನೋಡಿ ಸಾರ್. ಅದೇ ಬಿಡುವು ಇದ್ದಾಗ, ನಮ್ಮ ಬಳಿ ಬಂದು ಬೇರೆ ಬೇರೆ ವಿಷ್ಯದ ಬಗ್ಗೆ ಬೈಟ್ ಕೇಳ್ತೀರ. ನಾವು ಕೂಡ ನಿಮಗೆ ಗೌರವ ಕೊಟ್ಟು, ಮಾತನಾಡುತ್ತೇವೆ. ಆದರೆ, ಇಂತಹ ಸಮಯದಲ್ಲಿ ನಮ್ಮ ಸಿನಿಮಾಗಳ ಬಗ್ಗೆ ಯಾವುದೇ ಕೇರ್ ಮಾಡಲ್ಲ ಯಾಕೆ?' ಎಂದು ಶಿವಣ್ಣ ಅವರು ತಮ್ಮ 'ಕವಚ' ಪ್ರೆಸ್ ಮೀಟ್ ವೇಳೆ ನೇರವಾಗಿ ಸುದ್ದಿ ವಾಹಿನಿಗಳನ್ನು ಪ್ರಶ್ನಿಸಿದ್ದಾರೆ.

''ಒಳ್ಳೆ ಸಿನಿಮಾಗಳು ಬರೋದು ಅಪರೂಪ. ಬಂದಾಗ ಅದಕ್ಕೆ ಸಪೋರ್ಟ್ ಮಾಡುವುದು ಎಲ್ಲರ ಜವಾಬ್ದಾರಿ. 33 ವರ್ಷದ ನಂತರ ಶಿವಣ್ಣ ಯಾಕೆ ಹೀಗೆ ಮಾತಾಡ್ತಿದ್ದಾರೆ ಅಂತ ಕೇಳಬಹುದು. 33 ಅಲ್ಲ, 50 ವರ್ಷ ಆದ್ರೂ ಸಿನಿಮಾ ಅಂತ ಬಂದಾಗ ಪ್ರಾಣ ಕೊಡ್ತೀನಿ'' ಎಂದಿದ್ದಾರೆ ಶಿವಣ್ಣ. ದಯವಿಟ್ಟು ಒಂದು ಸ್ವಲ್ಪ ಸಮಯ ಕೊಡಿ. ರಾಜಕೀಯ ಹಾಕಬಾರದು ಅಂತ ಅಲ್ಲ, 24 ಗಂಟೆಗಳು ಬರೀ ರಾಜಕೀಯವೇ ಯಾಕೆ? ಒಂದು ಅರ್ಧ ಗಂಟೆ ನಮ್ಮ ಸಿನಿಮಾಗಳಿಗೆ ಟೈಂ ಕೊಡಿ.

ನಮ್ಮ ಸಿನಿಮಾ ಓಕೆ ಬಿಡಿ, ನಾವು ಹೇಗೋ ಮ್ಯಾನೇಜ್ ಮಾಡ್ತೀವಿ. ಆದ್ರೆ, ಎಷ್ಟೊಂದು ಹೊಸ ಹೊಸ ಸಿನಿಮಾಗಳು ಬರುತ್ತವೆ. ಅವರೆಲ್ಲಾ ಏನ್ ಮಾಡೋಕಾಗುತ್ತೆ? ಎಲ್ಲರೂ ದುಡ್ಡು ಹಾಕಿರ್ತಾರೆ. ನಾವು ದುಡ್ಡಿಗಾಗಿ ಕೆಲಸ ಮಾಡ್ತೀವಿ, ನೀವೂ ಕೂಡ ದುಡ್ಡಿಗಾಗಿ ಬಿಸಿನೆಸ್‌ ಮಾಡ್ತೀರಿ. ಕಾಲ ಹೀಗೆ ಇರಲ್ಲ, ಬದಲಾಗುತ್ತೆ.. " ಎಂದಿದ್ದಾರೆ ನಟ ಶಿವಣ್ಣ.

''ಕೆಲವರಿಗೆ ಇವರೇನೋ ಜಬರ್‌ದದಸ್ತ್ ಮಾಡ್ತಿದ್ದಾರೆ ಅನಿಸಬಹುದು. ಇವರಿಗೇನು ಎಂಬ ಭಾವನೆ ಇರಬಹುದು. ಆಯ್ತು, ನೀವೇ ದೊಡ್ಡವರು ಬಿಡಿ. ಆದರೆ, ಕಾಲ ಯಾವುತ್ತೂ ಹೀಗೇ ಇರಲ್ಲ. ಸ್ವಲ್ಪ ಟೈಮ್ ಕಳೆದ ಮೇಲೆ ಬೇರೆ ರೀತಿ ಆಗುತ್ತೆ. ಇದನ್ನ ನೀವು ವಾರ್ನಿಂಗ್ ಅಂದುಕೊಂಡರೂ ಪರವಾಗಿಲ್ಲ. ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. ಆದ್ರೆ, ಎಲ್ಲೋ ಒಂದು ಕಡೆ ಸಿನಿಮಾ ಬಗ್ಗೆ ನಿರ್ಲಕ್ಷ್ಯ ಆಗ್ತಿದೆ ಎಂಬ ಭಾವನೆ ನನಗಿದೆ" ಎಂದು ಹೇಳಿ ತಮ್ಮ ಸಿನಿಮಾ ಪ್ರೀತಿ ಮೆರೆದಿದ್ದಾರೆ ಶಿವಣ್ಣ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌