-ನಂದಿನಿ ಕೆ.ಎಲ್
ನಟನೆಯಲ್ಲೇ ಮುಳುಗಿರುತ್ತಿದ್ದ ಸ್ಯಾಂಡಲ್ವುಡ್ ತಾರೆಯರು ಇದೀಗ ಪರಿಸರದ ಕಡೆಯೂ ಗಮನ ಹರಿಸಿದ್ದಾರೆ. ಎಲ್ಲೆಡೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಿಡ ನೆಡಲು ಇದು ಸಕಾಲ ಎಂದು ಸಾರುತ್ತಿದ್ದಾರೆ. ಜತೆಗೆ, ಸ್ವತಃ ಅವರೂ ಹಳ್ಳಿಗಳಿಗೆ ಹೋಗಿ ಗಿಡ ನೆಡಲು ಮುಂದಾಗಿದ್ದಾರೆ.
ತಾರೆಯರಾದ ಅಧಿತಿ ಪ್ರಭುದೇವ, ಪಾವನಾ, ಶರಣ್, ಜಗ್ಗೇಶ್ ಗಿಡ ನೆಡಲು ಮುಂದಾಗಿದ್ದು, ತಮ್ಮ ಅಭಿಮಾನಿಗಳು ಇದೇ ರೀತಿ ತಮ್ಮ ಹಳ್ಳಿಗಳಲ್ಲಿ ಗಿಡಗಳನ್ನು ಹಸಿರೀಕರಣ ಮಾಡಬೇಕೆಂದು ಮನವಿ ಮಾಡಿದ್ದಾರೆ.
* ಗಿಡಗಳನ್ನು ಬೆಳೆಸುವುದರಲ್ಲಿ ಖುಷಿ: ಶರಣ್
ನನಗೆ ಪರಿಸರದ ಬಗ್ಗೆ ಅಪಾರವಾದಂಥ ಕಾಳಜಿ ಇರುವುದರಿಂದ ನಮ್ಮ ಮನೆಯಲ್ಲಿಯೇ ಹೂವು,ಅಲಂಕಾರಿಕ ಗಿಡಗಳನ್ನು ಬೆಳೆಸುತ್ತೇನೆ.ಅಲ್ಲದೆ ನನ್ನ ಪತ್ನಿಯ ಊರಾದ ಸಕಲೇಶಪುರದ ಬಳಿಯ ಹಳ್ಳಿಯಲ್ಲಿ ನಾನು ಮಳೆಗಾಲದಲ್ಲಿ ಭೇಟಿ ಮಾಡಿ,ಅಲ್ಲಿರುವ ಜಾಗದಲ್ಲಿಯೇ ವೈವಿಧ್ಯಮಯ ಗಿಡಗಳನ್ನು ನೆಡುತ್ತಿರುತ್ತೇನೆ. ನಾವು ಊರಿಗೆ ಹೋದಾಗಲೆಲ್ಲಾ ಆ ಗಿಡಗಳು ಬೆಳೆದಿರುವುದನ್ನು ನೋಡಿ ಖುಷಿಯಾಗುತ್ತದೆ. ವಾತಾವರಣವನ್ನೂ ತಂಪು ಮಾಡುತ್ತದೆ. ಗಿಡ ನೆಡುವವರಿಗೆ ಈ ತಿಂಗಳು ಸೂಕ್ತ ಸಮಯವಾಗಿದೆ' ಎನ್ನುತ್ತಾರೆ ನಟ ಶರಣ್.
*ಮಳೆ ನೀರು ಸಂರಕ್ಷಣೆ ಬಗ್ಗೆ ಜಾಗೃತಿ ಬೇಕು: ಜಗ್ಗೇಶ್
ನಮ್ಮ ಮನೆಯ ಸುತ್ತಮುತ್ತ ರಸ್ತೆಯ ಇಕ್ಕೆಲಗಳಲ್ಲಿ ನಾನು ನೀರೆರೆದು ಹಲವಾರು ವರ್ಷಗಳಿಂದ ಗಿಡಗಳನ್ನು ಬೆಳೆಸಿದ್ದೇನೆ. ಅವುಗಳೀಗ ದಾರಿಹೋಕರಿಗೆ ತಂಪು ನೀಡುತ್ತೇವೆ. ಉತ್ತಮವಾದ ಗಾಳಿ ನಿಡುತ್ತೇವೆ. ಎರಡು ದಿನದ ಹಿಂದೆಯಷ್ಟೇ ಮಂಗಳೂರಿನ ಬೆಳ್ತಗಂಡಿ ಸರಕಾರಿ ಶಾಲೆಯ ಮಕ್ಕಳಿಗೆ ಮಳೆ ನೀರಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿ ದಂಪತಿಗಳಿಬ್ಬರೂ ಗಿಡವನ್ನು ನೆಟ್ಟು ಬಂದೆವು. ಅದಲ್ಲದೇ ನಮ್ಮೂರಿನಲ್ಲಿ ನಾನು ಕಟ್ಟಿಸುತ್ತಿರುವ ದೇವಸ್ಥಾನದ ಸುತ್ತಲೂ ಗಿಡಗಳನ್ನು ನೆಟ್ಟಿದ್ದೇನೆ. ಅಲ್ಲಿರುವ ಮರಗಳನ್ನು ಉಳಿಸಬೇಕೆಂದು ಯುವಕರಿಗೂ ಹೇಳಿದ್ದೇನೆ. ಪ್ರಕೃತಿ, ಮರಗಿಡಗಳ ಮಹತ್ವವನ್ನು ಶಾಲೆಯಿಂದಲೇ ಮಕ್ಕಳಿಗೆ ಹೇಳಿಕೊಟ್ಟು ಅವರಿಂದ ಈ ಸೀಸನ್ನಲ್ಲಿ ಗಿಡಗಳನ್ನು ಬೆಳೆಸಿ ಆರೈಕೆ ಮಾಡುವಂತೆ ಹೇಳಿಕೊಡಬೇಕು. ಬೇಸಿಗೆ,ಚಳಿಗಾಲದಲ್ಲಿಯೂ ಗಿಡಗಳಿಗೆ ನೀರಿನ ಅಭಾವ ಆಗದಂತೆ ನೋಡಿಕೊಳ್ಳಬೇಕು' ಎಂದು ಸಲಹೆ ನೀಡುತ್ತಾರೆ ನಟ ಜಗ್ಗೇಶ್.
*ಹಸಿರೆಂದರೆ ಜೀವ: ಅಧಿತಿ
ನಾನು ಬೆಂಗಳೂರಿನಲ್ಲಿದ್ದರೂ ಸದಾ ನಮ್ಮೂರಿನ ಸೆಳೆತ ಬಿಟ್ಟಿರುವುದಿಲ್ಲ. ನಮ್ಮದು ಉತ್ತರ ಕರ್ನಾಟಕದ ಕಡೆಯ ಹಳ್ಳಿ. ಅಲ್ಲಿ ಮಳೆಯ ಪ್ರಮಾಣ ಕಡಿಮೆಯಿದ್ದರೂ, ಮಾನ್ಸೂನ್ನಲ್ಲಿ ಗಿಡಗಳನ್ನು ನೆಟ್ಟು ಬೆಳೆಸಬಹುದು. ಈ ವರ್ಷ ನಾನು ನಮ್ಮೂರಿನ ಹಳ್ಳಿಗೆ ಹೋಗಿ ಸಾಧ್ಯವಾದಷ್ಟು ತಂಪು ನೀಡುವ ಗಿಡಗಳನ್ನು ಊರಿನ ರಸ್ತೆ ಬದಿಗಳಲ್ಲಿ, ಖಾಲಿಯಿರುವ ಜಮೀನಿನಲ್ಲಿ ಬೆಳೆಸಬೇಕೆಂಬ ಪ್ಲಾನ್ ಮಾಡಿದ್ದೇನೆ. ಅದಕ್ಕಾಗಿ ಈಗಾಗಲೇ ತಯಾರಿ ಮಾಡಿಕೊಂಡಿದ್ದೇನೆ. ನಮ್ಮ ಕೈಲಾದಷ್ಟು ಪ್ರಕೃತಿ ಮಾತೆಯ ಸೇವೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎನ್ನುವುದು ಅಧಿತಿ ಪ್ರಭುದೇವ ಮಾತಾಗಿದೆ.
*ಮನೆಗೊಂದು ಗಿಡ ಬೆಳೆಸಿ: ಪಾವಾನಾ
ನಾವು ಬದುಕು ಕಟ್ಟಿಕೊಳ್ಳಲು ಊರು ಬಿಟ್ಟು ಪಟ್ಟಣ್ಣಕ್ಕೆ ಬಂದರೂ ನಮ್ಮೂರೇ ನಮಗೆ ಸ್ವರ್ಗ. ಅಂತಹ ಊರನ್ನು ಅಭಿವೃದ್ಧಿ ಹಾಗೂ ಆರೋಗ್ಯಕರವಾದ ವಾತಾವರಣ ನಿರ್ಮಿಸುವುದು ಪ್ರತಿಯೊಬ್ಬ ಮನೆ ಮಗನ ಹಾಗೂ ಮಗಳ ಜವಬ್ದಾರಿಯಾಗಿದೆ. ಪ್ರತಿ ವರ್ಷವೂ ಮಳೆ ಬಂದಾಗ ನಮ್ಮ ತೋಟದಲ್ಲಿ ನಾನೇ ತೆಂಗು, ಬಾಳೆ, ಸಿಲ್ವರ್ ಸೇರಿ ಹಲವಾರು ಗಿಡಗಳನ್ನು ನೆಡುತ್ತೇನೆ. ಈ ಬಾರಿಯೂ ಮುಂದುವರಿಯುತ್ತದೆ. ಮನೆಯೊಂದು ಗಿಡ ಬೆಳೆಡಸಿದರೆ ಆ ಊರು ಹಸಿರಿನಿಂದ ಕಂಗೊಳಿಸಿದ್ದೂ ಸಂವೃದ್ಧಿಯಾಗುತ್ತದೆ ಎನ್ನುತ್ತಾರೆ ನಟಿ ಪಾವಾನಾ.
ನಟನೆಯಲ್ಲೇ ಮುಳುಗಿರುತ್ತಿದ್ದ ಸ್ಯಾಂಡಲ್ವುಡ್ ತಾರೆಯರು ಇದೀಗ ಪರಿಸರದ ಕಡೆಯೂ ಗಮನ ಹರಿಸಿದ್ದಾರೆ. ಎಲ್ಲೆಡೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಿಡ ನೆಡಲು ಇದು ಸಕಾಲ ಎಂದು ಸಾರುತ್ತಿದ್ದಾರೆ. ಜತೆಗೆ, ಸ್ವತಃ ಅವರೂ ಹಳ್ಳಿಗಳಿಗೆ ಹೋಗಿ ಗಿಡ ನೆಡಲು ಮುಂದಾಗಿದ್ದಾರೆ.
ತಾರೆಯರಾದ ಅಧಿತಿ ಪ್ರಭುದೇವ, ಪಾವನಾ, ಶರಣ್, ಜಗ್ಗೇಶ್ ಗಿಡ ನೆಡಲು ಮುಂದಾಗಿದ್ದು, ತಮ್ಮ ಅಭಿಮಾನಿಗಳು ಇದೇ ರೀತಿ ತಮ್ಮ ಹಳ್ಳಿಗಳಲ್ಲಿ ಗಿಡಗಳನ್ನು ಹಸಿರೀಕರಣ ಮಾಡಬೇಕೆಂದು ಮನವಿ ಮಾಡಿದ್ದಾರೆ.
* ಗಿಡಗಳನ್ನು ಬೆಳೆಸುವುದರಲ್ಲಿ ಖುಷಿ: ಶರಣ್
ನನಗೆ ಪರಿಸರದ ಬಗ್ಗೆ ಅಪಾರವಾದಂಥ ಕಾಳಜಿ ಇರುವುದರಿಂದ ನಮ್ಮ ಮನೆಯಲ್ಲಿಯೇ ಹೂವು,ಅಲಂಕಾರಿಕ ಗಿಡಗಳನ್ನು ಬೆಳೆಸುತ್ತೇನೆ.ಅಲ್ಲದೆ ನನ್ನ ಪತ್ನಿಯ ಊರಾದ ಸಕಲೇಶಪುರದ ಬಳಿಯ ಹಳ್ಳಿಯಲ್ಲಿ ನಾನು ಮಳೆಗಾಲದಲ್ಲಿ ಭೇಟಿ ಮಾಡಿ,ಅಲ್ಲಿರುವ ಜಾಗದಲ್ಲಿಯೇ ವೈವಿಧ್ಯಮಯ ಗಿಡಗಳನ್ನು ನೆಡುತ್ತಿರುತ್ತೇನೆ. ನಾವು ಊರಿಗೆ ಹೋದಾಗಲೆಲ್ಲಾ ಆ ಗಿಡಗಳು ಬೆಳೆದಿರುವುದನ್ನು ನೋಡಿ ಖುಷಿಯಾಗುತ್ತದೆ. ವಾತಾವರಣವನ್ನೂ ತಂಪು ಮಾಡುತ್ತದೆ. ಗಿಡ ನೆಡುವವರಿಗೆ ಈ ತಿಂಗಳು ಸೂಕ್ತ ಸಮಯವಾಗಿದೆ' ಎನ್ನುತ್ತಾರೆ ನಟ ಶರಣ್.
*ಮಳೆ ನೀರು ಸಂರಕ್ಷಣೆ ಬಗ್ಗೆ ಜಾಗೃತಿ ಬೇಕು: ಜಗ್ಗೇಶ್
ನಮ್ಮ ಮನೆಯ ಸುತ್ತಮುತ್ತ ರಸ್ತೆಯ ಇಕ್ಕೆಲಗಳಲ್ಲಿ ನಾನು ನೀರೆರೆದು ಹಲವಾರು ವರ್ಷಗಳಿಂದ ಗಿಡಗಳನ್ನು ಬೆಳೆಸಿದ್ದೇನೆ. ಅವುಗಳೀಗ ದಾರಿಹೋಕರಿಗೆ ತಂಪು ನೀಡುತ್ತೇವೆ. ಉತ್ತಮವಾದ ಗಾಳಿ ನಿಡುತ್ತೇವೆ. ಎರಡು ದಿನದ ಹಿಂದೆಯಷ್ಟೇ ಮಂಗಳೂರಿನ ಬೆಳ್ತಗಂಡಿ ಸರಕಾರಿ ಶಾಲೆಯ ಮಕ್ಕಳಿಗೆ ಮಳೆ ನೀರಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿ ದಂಪತಿಗಳಿಬ್ಬರೂ ಗಿಡವನ್ನು ನೆಟ್ಟು ಬಂದೆವು. ಅದಲ್ಲದೇ ನಮ್ಮೂರಿನಲ್ಲಿ ನಾನು ಕಟ್ಟಿಸುತ್ತಿರುವ ದೇವಸ್ಥಾನದ ಸುತ್ತಲೂ ಗಿಡಗಳನ್ನು ನೆಟ್ಟಿದ್ದೇನೆ. ಅಲ್ಲಿರುವ ಮರಗಳನ್ನು ಉಳಿಸಬೇಕೆಂದು ಯುವಕರಿಗೂ ಹೇಳಿದ್ದೇನೆ. ಪ್ರಕೃತಿ, ಮರಗಿಡಗಳ ಮಹತ್ವವನ್ನು ಶಾಲೆಯಿಂದಲೇ ಮಕ್ಕಳಿಗೆ ಹೇಳಿಕೊಟ್ಟು ಅವರಿಂದ ಈ ಸೀಸನ್ನಲ್ಲಿ ಗಿಡಗಳನ್ನು ಬೆಳೆಸಿ ಆರೈಕೆ ಮಾಡುವಂತೆ ಹೇಳಿಕೊಡಬೇಕು. ಬೇಸಿಗೆ,ಚಳಿಗಾಲದಲ್ಲಿಯೂ ಗಿಡಗಳಿಗೆ ನೀರಿನ ಅಭಾವ ಆಗದಂತೆ ನೋಡಿಕೊಳ್ಳಬೇಕು' ಎಂದು ಸಲಹೆ ನೀಡುತ್ತಾರೆ ನಟ ಜಗ್ಗೇಶ್.
*ಹಸಿರೆಂದರೆ ಜೀವ: ಅಧಿತಿ
ನಾನು ಬೆಂಗಳೂರಿನಲ್ಲಿದ್ದರೂ ಸದಾ ನಮ್ಮೂರಿನ ಸೆಳೆತ ಬಿಟ್ಟಿರುವುದಿಲ್ಲ. ನಮ್ಮದು ಉತ್ತರ ಕರ್ನಾಟಕದ ಕಡೆಯ ಹಳ್ಳಿ. ಅಲ್ಲಿ ಮಳೆಯ ಪ್ರಮಾಣ ಕಡಿಮೆಯಿದ್ದರೂ, ಮಾನ್ಸೂನ್ನಲ್ಲಿ ಗಿಡಗಳನ್ನು ನೆಟ್ಟು ಬೆಳೆಸಬಹುದು. ಈ ವರ್ಷ ನಾನು ನಮ್ಮೂರಿನ ಹಳ್ಳಿಗೆ ಹೋಗಿ ಸಾಧ್ಯವಾದಷ್ಟು ತಂಪು ನೀಡುವ ಗಿಡಗಳನ್ನು ಊರಿನ ರಸ್ತೆ ಬದಿಗಳಲ್ಲಿ, ಖಾಲಿಯಿರುವ ಜಮೀನಿನಲ್ಲಿ ಬೆಳೆಸಬೇಕೆಂಬ ಪ್ಲಾನ್ ಮಾಡಿದ್ದೇನೆ. ಅದಕ್ಕಾಗಿ ಈಗಾಗಲೇ ತಯಾರಿ ಮಾಡಿಕೊಂಡಿದ್ದೇನೆ. ನಮ್ಮ ಕೈಲಾದಷ್ಟು ಪ್ರಕೃತಿ ಮಾತೆಯ ಸೇವೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎನ್ನುವುದು ಅಧಿತಿ ಪ್ರಭುದೇವ ಮಾತಾಗಿದೆ.
*ಮನೆಗೊಂದು ಗಿಡ ಬೆಳೆಸಿ: ಪಾವಾನಾ
ನಾವು ಬದುಕು ಕಟ್ಟಿಕೊಳ್ಳಲು ಊರು ಬಿಟ್ಟು ಪಟ್ಟಣ್ಣಕ್ಕೆ ಬಂದರೂ ನಮ್ಮೂರೇ ನಮಗೆ ಸ್ವರ್ಗ. ಅಂತಹ ಊರನ್ನು ಅಭಿವೃದ್ಧಿ ಹಾಗೂ ಆರೋಗ್ಯಕರವಾದ ವಾತಾವರಣ ನಿರ್ಮಿಸುವುದು ಪ್ರತಿಯೊಬ್ಬ ಮನೆ ಮಗನ ಹಾಗೂ ಮಗಳ ಜವಬ್ದಾರಿಯಾಗಿದೆ. ಪ್ರತಿ ವರ್ಷವೂ ಮಳೆ ಬಂದಾಗ ನಮ್ಮ ತೋಟದಲ್ಲಿ ನಾನೇ ತೆಂಗು, ಬಾಳೆ, ಸಿಲ್ವರ್ ಸೇರಿ ಹಲವಾರು ಗಿಡಗಳನ್ನು ನೆಡುತ್ತೇನೆ. ಈ ಬಾರಿಯೂ ಮುಂದುವರಿಯುತ್ತದೆ. ಮನೆಯೊಂದು ಗಿಡ ಬೆಳೆಡಸಿದರೆ ಆ ಊರು ಹಸಿರಿನಿಂದ ಕಂಗೊಳಿಸಿದ್ದೂ ಸಂವೃದ್ಧಿಯಾಗುತ್ತದೆ ಎನ್ನುತ್ತಾರೆ ನಟಿ ಪಾವಾನಾ.