ಆ್ಯಪ್ನಗರ

ಸ್ಯಾಂಡಲ್‌ವುಡ್ ನಿರ್ದೇಶಕ ಎ ಆರ್ ಬಾಬು ಇನ್ನಿಲ್ಲ

ಹಲೋ ಯಮ, ಚಮ್ಕಾಯಿಸಿ ಚಿಂದಿ ಉಡಾಯ್ಸಿ, ಸಪ್ನೋಂಕಿ ರಾಣಿ ಸೇರಿದಂತೆ ಹಲವು ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಪ್ರಖ್ಯಾತ ಕಲಾವಿದ, ನಿರ್ದೇಶಕ ಎ ಆರ್ ಬಾಬು ಕೊನೆಯುಸಿರೆಳೆದಿದ್ದಾರೆ. ಚರಣ್ ರಾಜ್, ಚಾರುಲತಾ, ಧೀರೇಂದ್ರ ಗೋಪಾಲ್ ಮುಖ್ಯಭೂಮಿಕೆಯಲ್ಲಿ 1998ರಲ್ಲಿ ತೆರೆ ಕಂಡಿದ್ದ ಚೋರ್ ಗುರು ಚಾಂಡಾಲ್ ಶಿಷ್ಯ ಅವರ ನಿರ್ದೇಶನದ ಪ್ರಥಮ ಸಿನಿಮಾವಾಗಿದ್ದು, 2015ರಲ್ಲಿ ಬಿಡುಗಡೆಯಾಗಿದ್ದ ಸಪ್ನೋಂಕಿ ರಾಣಿ ನಿರ್ದೇಶನದ ಕೊನೆಯ ಸಿನಿಮಾವಾಗಿದೆ.

Vijaya Karnataka Web 4 Dec 2018, 10:54 am
ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅಗಲಿಕೆ ಬೆನ್ನಲ್ಲೇ ಕನ್ನಡ ಚಿತ್ರರಂಗ ಮತ್ತೊಬ್ಬ ಪ್ರಖ್ಯಾತ ಕಲಾವಿದ, ನಿರ್ದೇಶಕ ಎ ಆರ್ ಬಾಬು ಅವರನ್ನು ಕಳೆದುಕೊಂಡಿದೆ. ಏಕಾಏಕಿ ಹೃದಯಾಘಾತಕ್ಕೊಳಗಾದ ಅವರು ಮಂಗಳವಾರ ಮುಂಜಾನೆ 8.55ಕ್ಕೆ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
Vijaya Karnataka Web Ar Babu


04-01-1962ರಲ್ಲಿ ಜನಿಸಿದ್ದ ಅವರಿಗೆ 56 ವರ್ಷ ವಯಸ್ಸಾಗಿತ್ತು.

ಪ್ರಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ನೆಚ್ಚಿನ ನಿರ್ದೇಶಕರಾಗಿದ್ದ ಬಾಬು ಕನ್ನಡ ಚಿತ್ರರಂಗಕ್ಕೆ ಹಲವಾರು ಉತ್ತಮ ಸಿನಿಮಾಗಳನ್ನು ನೀಡಿದ್ದಾರೆ, ಎಂದಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಕರಿ ಸುಬ್ಬು ಹಿರಿಯ ಕಲಾವಿದರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಚರಣ್ ರಾಜ್, ಚಾರುಲತಾ, ಧೀರೇಂದ್ರ ಗೋಪಾಲ್ ಮುಖ್ಯಭೂಮಿಕೆಯಲ್ಲಿ 1998ರಲ್ಲಿ ತೆರೆ ಕಂಡಿದ್ದ ಚೋರ್ ಗುರು ಚಾಂಡಾಲ್ ಶಿಷ್ಯ ಅವರ ನಿರ್ದೇಶನದ ಪ್ರಥಮ ಸಿನಿಮಾವಾಗಿದ್ದು, 2015ರಲ್ಲಿ ಬಿಡುಗಡೆಯಾಗಿದ್ದ ಸಪ್ನೋಂಕಿ ರಾಣಿ ನಿರ್ದೇಶನದ ಕೊನೆಯ ಸಿನಿಮಾವಾಗಿದೆ.

ಚೋರ್ ಗುರು ಚಾಂಡಾಲ್ ಶಿಷ್ಯ(1998), ಹಲೋ ಯಮ (1998), ಕೂಲಿ ರಾಜ (1999), ಖಳನಾಯಕ (1999), ಜೀಬೂಂಬಾ (2000), ಆಗೋದೆಲ್ಲ ಒಳ್ಳೆದಕ್ಕೆ (2004), ಮರುಜನ್ಮ (2008), ಚಮ್ಕಾಯಿಸಿ ಚಿಂದಿ ಉಡಾಯ್ಸಿ (2009), ಸಪ್ನೋಂಕಿ ರಾಣಿ (2015) ಇವರ ನಿರ್ದೇಶನದಡಿಯಲ್ಲಿ ತೆರೆ ಕಂಡ ಸಿನಿಮಾಗಳಾಗಿವೆ.


ಇವರ ಮಾರ್ಗದರ್ಶನದಡಿಯಲ್ಲೇ ಪ್ರಖ್ಯಾತ ನಿರ್ದೇಶಕ ಪ್ರೇಮ್ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ್ದರು ಎಂದು ಹೇಳಲಾಗುತ್ತಿದ್ದು, ಹಿಂದೊಮ್ಮೆ ಪ್ರೇಮ್ ಹೇಳಿಕೆಯ ವಿರುದ್ಧವೇ ಅವರು ತಿರುಗಿ ಬಿದ್ದಿದ್ದರು.

ನಿರ್ದೇಶಕ ಪ್ರೇಮ್ ವಿರುದ್ಧ ತಿರುಗಿ ಬಿದ್ದಿದ್ದ ಎ ಆರ್ ಬಾಬು

ದಿ ವಿಲನ್‌ ಚಿತ್ರದ ಟೀಸರ್‌ ಬಿಡುಗಡೆ ಸಮಾರಂಭದಲ್ಲಿ ಸಂಗ್ರಹವಾದ ಟಿಕೆಟ್‌ ಹಣವನ್ನು ಹಿರಿಯ ನಿರ್ದೇಶಕರಿಗೆ ನೀಡುವುದಾಗಿ ಎಫ್‌ಬಿ ಲೈವ್‌ ಹೇಳುತ್ತ, 'ನಿರ್ದೇಶಕರು ಚಿತ್ರದ ಹೀರೊ. ಆದರೆ, ಇಂದು ಎಷ್ಟೋ ಒಳ್ಳೆಯ ಚಿತ್ರಗಳನ್ನು ನೀಡಿದ ಹಿರಿಯ ನಿರ್ದೇಶಕರು ನಿರ್ಗತಿಕರಾಗಿದ್ದಾರೆ. ಟಿ. ರಘು, ಎ.ಆರ್‌. ಬಾಬು ಮತ್ತಿತರ ನಿರ್ದೇಶಕರು ಕಷ್ಟದಲ್ಲಿದ್ದಾರೆ. ಅವರಿಗೆ ಅಂದೇ ಸಮಾರಂಭದಲ್ಲಿ ಧನ ಸಹಾಯ ಮಾಡಲಾಗುವುದು' ಎಂದು ಹೇಳಿದರು. ಈ ಮಾತಿನಿಂದ ನೊಂದ ಎ.ಆರ್‌.ಬಾಬು ನಿರ್ಗತಿಕರು ಎಂಬ ಪದವನ್ನು ಬಳಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಪ್ರೇಮ್‌ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು.

ಜಗ್ಗೇಶ್ ಟ್ವೀಟ್

ಬಾಬು ನಿಧನಕ್ಕೆ ಕಂಬನಿ ಮಿಡಿದಿರುವ ಖ್ಯಾತ ನಟ ಜಗ್ಗೇಶ ಅವರ ಆತ್ಮಕ್ಕೆ ಶಾಂತಿ ಕೋರಿ ಟ್ವೀಟ್ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌