ಆ್ಯಪ್ನಗರ

ಸಂತೋಷ್ ಆನಂದ್‌ರಾಮ್-ಗಣೇಶ್ ಪದೇ ಪದೇ ಭೇಟಿಯ ಉದ್ದೇಶವೇನು?

ಸದ್ಯಕ್ಕೆ 'ಯುವರತ್ನ' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಸಂತೋಷ್ ಆನಂದ್ ರಾಮ್ ಅವರು ನಟ ಗಣೇಶ್ ಅವರನ್ನು ಗಣೇಶ್ ನಾಯಕತ್ವದ 'ಗೀತಾ' ಚಿತ್ರದ ಶೂಟಿಂಗ್‌ ಸೆಟ್‌ನಲ್ಲಿ ಭೇಟಿಯಾಗಿದ್ದಾರೆ. ಅದಕ್ಕೂ ಮೊದಲು ಗಣೇಶ್ ಸಂತೋಷ್ ಆನಂದ್ ರಾಮ್ ಅವರನ್ನು ಅವರ ಮನೆಗೇ ಹೋಗಿ ಭೇಟಿಯಾಗಿದ್ದಾರೆ.

Vijaya Karnataka Web 28 Mar 2019, 3:49 pm
ಸದ್ಯಕ್ಕೆ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ 'ಯುವರತ್ನ' ಚಿತ್ರದಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಸಂತೋಷ್ ಆನಂದ್‌ ರಾಮ್ ಅವರು ಇತ್ತೀಚೆಗೆ 'ಗೀತಾ' ಶೂಟಿಂಗ್ ಸೆಟ್‌ಗೆ ಹೋಗಿ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ಇತ್ತೀಚೆಗೆ ನಟ ಗಣೇಶ್ ಅವರು ಕೂಡ ಸಂತೋಷ್ ಆನಂದ್‌ರಾಮ್ ಮನೆಗೆ ಭೇಟಿ ನೀಡಿದ್ದರಂತೆ. ಈ ವಿಷಯವೀಗ ಸಾಕಷ್ಟು ಜನರ ಕುತೂಹಲವನ್ನು ಕೆರಳಿಸಿದೆ ಎನ್ನಬಹುದು.
Vijaya Karnataka Web ganesh


ಸ್ಯಾಂಡಲ್‌ವುಡ್‌ನಲ್ಲಿ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಅವರು ಈಗಾಗಲೇ ಎರಡು ಯಶಸ್ವಿ ಚಿತ್ರಗಳನ್ನು ನೀಡಿ ಗ್ರೇಟ್ ಡೈರೆಕ್ಟರ್ ಎನಿಸಿಕೊಂಡಿದ್ದಾರೆ. ಯಶ್ ನಾಯಕತ್ವದ 'ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಹಾಗೂ ಪುನೀತ್ ರಾಜ್‌ಕುಮಾರ್ ನಾಯಕತ್ವದ 'ರಾಜಕುಮಾರ' ಈ ಎರಡೂ ಚಿತ್ರಗಳು ಸಂತೋ‍ಷ್ ಆನಂದ್‌ರಾಮ್ ಅವರಿಗೆ ಸೂಪರ್ ಹಿಟ್ ಸಕ್ಸಸ್ ತಂದುಕೊಟ್ಟಿವೆ. ಈಗ, ಮತ್ತೆ ಎರಡನೇ ಬಾರಿಗೆ ಪವರ್‌ ಸ್ಟರ್ ಪುನೀತ್ ಅವರಿಗೆ ಸಿನಿಮಾ ಮಾಡುತ್ತಿದ್ದಾರೆ ಸಂತೋಷ್ ಆನಂದ್‌ರಾಮ್.

ಸದ್ಯಕ್ಕೆ 'ಯುವರತ್ನ' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಸಂತೋಷ್ ಆನಂದ್ ರಾಮ್ ಅವರು ನಟ ಗಣೇಶ್ ಅವರನ್ನು ಗಣೇಶ್ ನಾಯಕತ್ವದ 'ಗೀತಾ' ಚಿತ್ರದ ಶೂಟಿಂಗ್‌ ಸೆಟ್‌ನಲ್ಲಿ ಭೇಟಿಯಾಗಿದ್ದಾರೆ. ಅದಕ್ಕೂ ಮೊದಲು ಗಣೇಶ್ ಸಂತೋಷ್ ಆನಂದ್ ರಾಮ್ ಅವರನ್ನು ಅವರ ಮನೆಗೇ ಹೋಗಿ ಭೇಟಿಯಾಗಿದ್ದಾರೆ. ಅಲ್ಲಿಗೆ ಅವರಿಬ್ಬರೂ ಸೇರಿ ಹೊಸ ಚಿತ್ರವೊಂದನ್ನು ಮಾಡುತ್ತಿರಬಹುದು ಅಥವಾ 'ಯುವರತ್ನ' ಚಿತ್ರದಲ್ಲಿ ನಟ ಗಣೇಶ್ 'ಗೆಸ್ಟ್ ರೋಲ್' ಮಾಡಬಹುದು ಎಂಬ ಸುದ್ದಿಯೀಗ ಗಾಂಧಿನಗರದ ಗಲ್ಲಿಗಲ್ಲಿಯಲ್ಲಿ ಸುತ್ತುತ್ತಿದೆ.

ಅಂದಹಾಗೆ, ಪುನೀತ್ ರಾಜ್‌ಕುಮಾರ್ ನಾಯಕತ್ವದ 'ಯುವರತ್ನ' ಚಿತ್ರದಲ್ಲಿ ಧನಂಜಯ್, ವಸಿಷ್ಠ ಸಿಂಹ, ಸಯೇಶಾ ಸೈಗಲ್, ರಾಧಿಕಾ ಶರತ್ ಕುಮಾರ್ ಮುಂತಾದ ಸ್ಟಾರ್ ಕಲಾವಿದರಿದ್ದಾರೆ. ಇದೀಗ ಕನ್ನಡದ ಗೋಲ್ಡನ್ ಸ್ಟಾರ್ ಗಣೇಶ್ ಅವರು ಕೂಡ ಈ ಚಿತ್ರದಲ್ಲಿ ನಟಿಸಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ. ನೋಡೋಣ, ಆದಷ್ಟು ಬೇಗ ಸಂತೋಷ್ ಆನಂದ್‌ರಾಮ್ ಅಥವಾ ಗಣೇಶ್ ಅವರಲ್ಲಿ ಯಾರಾದರೊಬ್ಬರು ಸಿಹಿ ಸುದ್ದಿ ನೀಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌