ಆ್ಯಪ್ನಗರ

ಜಗ್ಗೇಶ್‌ ಹೊಡೆದ ಡೈಲಾಗ್‌‌ಗೆ ತಲೆದೂಗಿದ ಯುವ ನಿರ್ದೇಶಕರು

ರಮೇಶ್‌ ಇಂದಿರಾ ನಿರ್ದೇಶನದ 'ಪ್ರಿಮಿಯರ್‌ ಪದ್ಮಿನಿ' ಸಿನಿಮಾದ ಟ್ರೇಲರ್‌ ಅನ್ನು ಸ್ಯಾಂಡಲ್‌ವುಡ್‌ ಸಿಲಿಬ್ರಿಟಿಗಳು ಮೆಚ್ಚಿದ್ದಾರೆ. ಈ ಸಿನಿಮಾದ ನಿರೀಕ್ಷೆಯ ಬಗ್ಗೆ ಅವರೆಲ್ಲ ಮಾತನಾಡಿದ್ದಾರೆ.

Vijaya Karnataka 12 Apr 2019, 7:33 pm
ಕನ್ನಡದ ಹೆಸರಾಂತ ನಿರ್ದೇಶಕರಾದ ಜೋಗಿ ಪ್ರೇಮ್‌, ರಿಷಭ್‌ ಶೆಟ್ಟಿ, ಸಂತೋಷ್‌ ಆನಂದ್‌ ರಾಮ್‌, ಎ.ಪಿ ಅರ್ಜುನ್‌ ಸೇರಿದಂತೆ ಬಹುತೇಕ ಡೈರೆಕ್ಟರ್ಸ್‌ 'ಪ್ರಿಮಿಯರ್‌ ಪದ್ಮಿನಿ' ಸಿನಿಮಾದ ಟ್ರೇಲರ್‌ ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ ಎಂದು ಹಾರೈಸಿದ್ದಾರೆ.
Vijaya Karnataka Web premier-padmini


ಸ್ಯಾಂಡಲ್‌ವುಡ್‌ ನಿರ್ದೇಶಕರಾದ ಅನೂಪ್‌ ಭಂಡಾರಿ, ಚೇತನ್‌ ಕುಮಾರ್‌, ಚೈತನ್ಯ, ಹರ್ಷ, ಇಮ್ರಾನ್‌ ಸರ್ದಾರಿಯಾ, ನಂದ ಕಿಶೋರ್‌, ರಾಜ್‌ ಬಿ ಶೆಟ್ಟಿ, ತರುಣ್‌ ಸುಧೀರ್‌ ಹೀಗೆ ಅನೇಕ ನಿರ್ದೇಶಕರು ಜಗ್ಗೇಶ್‌ ಅವರ ನಟನೆಯನ್ನೂ ಕೊಂಡಾಡಿದ್ದಾರೆ.

'ಕನ್ನಡದ ಬಹುತೇಕ ನಿರ್ದೇಶಕರು ಟ್ರೇಲರ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಅವರ ಮೆಚ್ಚುಗೆಯ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಅದರಲ್ಲೂ ಟ್ರೇಲರ್‌ನಲ್ಲಿ ಜಗ್ಗೇಶ್‌ ಹೊಡೆದ ಡೈಲಾಗ್‌ ಅನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಪ್ರಿಮಿಯರ್‌ ಪದ್ಮಿನಿ ಸಿನಿಮಾದ ಮೂಲಕ ಮೊದಲ ಬಾರಿಗೆ ಚಿತ್ರವೊಂದನ್ನು ನಿರ್ಮಾಣ ಮಾಡಿದ್ದೇನೆ. ಹಾಗಾಗಿ ಸಹಜವಾಗಿಯೇ ನನಗೂ ಸಂಭ್ರಮ ತಂದಿದೆ' ಎನ್ನುತ್ತಾರೆ ನಿರ್ಮಾಪಕಿ ಶ್ರುತಿ ನಾಯ್ಡು.

ರಮೇಶ್‌ ಇಂದಿರಾ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಕನ್ನಡದ ಹೆಸರಾಂತ ಕಲಾವಿದರು ತಾರಾಗಣದಲ್ಲಿ ಇದ್ದಾರೆ. ಸುಧಾರಾಣಿ, ಮಧುಬಾಲಾ, ವೀಣಾ ಸುಂದರ್‌, ಹಿತಾ ಚಂದ್ರಶೇಖರ್‌, ಪ್ರಮೋದ್‌ ಹೀಗೆ ಪ್ರತಿಭಾವಂತ ಕಲಾವಿದರ ದಂಡೇ ಸಿನಿಮಾದಲ್ಲಿದೆ.

ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಈಗಾಗಲೇ ರಿಲೀಸ್‌ ಆಗಿರುವ ಕೆಲ ಗೀತೆಗಳು ಕೇಳುಗರ ಮೆಚ್ಚುಗೆಗೆ ಪಾತ್ರವಾಗಿವೆ.

'ಸಿನಿಮಾದ ಟ್ರೇಲರ್‌ ಮೆಚ್ಚಿಕೊಂಡಿರುವ ಪ್ರತಿಯೊಬ್ಬ ನಿರ್ದೇಶಕರು, ತಮ್ಮದೇ ರೀತಿಯ ಸಿನಿಮಾ ಕೊಟ್ಟವರು. ಚಿತ್ರರಂಗದಲ್ಲಿ ಹೊಸ ಮನ್ವಂತರ ಸೃಷ್ಟಿ ಮಾಡಿದವರು. ಬಾಕ್ಸ್‌ ಆಫೀಸ್‌ನಲ್ಲಿ ಬಹುತೇಕರ ಚಿತ್ರಗಳು ಗೆದ್ದಿವೆ. ಇವರ ಸಿನಿಮಾ ನೋಡುವುದಕ್ಕಾಗಿಯೇ ಪ್ರೇಕ್ಷಕರು ಕಾಯುತ್ತಾರೆ. ಇಂತಹ ನಿರ್ದೇಶಕರು ನನ್ನ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ' ಎನ್ನುವುದು ನಿರ್ದೇಶಕ ರಮೇಶ್‌ ಇಂದಿರಾ ಮಾತು.

ಈಗಾಗಲೇ ಟ್ರೇಲರ್‌ ಮತ್ತು ಹಾಡುಗಳು ನೋಡುಗರ ಮೆಚ್ಚುಗೆಗೆ ಪಾತ್ರವಾಗಿವೆ. ಅದರಲ್ಲೂ ಯುಗಾದಿ ದಿನದಂದು ರಿಲೀಸ್‌ ಆದ ಟ್ರೇಲರ್‌ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾಗಿ ಸಹಜವಾಗಿಯೇ ಸಿನಿಮಾ ನಿರೀಕ್ಷೆ ಮೂಡಿಸಿದೆ. ಇದೇ ಏ.26ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌