ಆ್ಯಪ್ನಗರ

2019ರಲ್ಲಿ ಬೆಳ್ಳಿತೆರೆ ಮೇಲೆ ನೀವು ನೋಡಲಿರುವ ಹೊಸ ಮುಖಗಳು

ಈ ವರ್ಷ ಹಲವಾರು ಮಂದಿ ಹೊಸಬರು ಸ್ಯಾಂಡಲ್‍ವುಡ್‌ಗೆ ಅಡಿಯಿಡುತ್ತಿದ್ದಾರೆ. ಮುಖ್ಯವಾಗಿ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್, ರಾಜ್ ಕುಮಾರ್ ಕುಟುಂಬದ ಕುಡಿ ಧೀರನ್ ರಾಮಕುಮಾರ್, ಧನ್ಯಾ ರಾಮ್ ಕುಮಾರ್ ಸೇರಿದಂತೆ ಶ್ರೇಯಸ್, ತಾನ್ಯಾ ಹೋಪ್, ಶ್ರೀಲೀಲಾ ಮುಂತಾದ ಹೊಸಬರು ಸ್ಯಾಂಡಲ್‍ವುಡ್‌ಗೆ ಆಗಮಿಸಿದ್ದಾರೆ. ಅವರ ಅಭಿನಯದ ಚಿತ್ರಗಳು ಈ ವರ್ಷ ತೆರೆಕಾಣಲಿವೆ.

Vijaya Karnataka Web 1 Jan 2019, 6:50 pm
2018ನೇ ಸಾಲಿನಲ್ಲಿ 240ಕ್ಕೂ ಹೆಚ್ಚು ಸಿನಿಮಾಗಳು ತೆರೆಕಂಡಿವೆ. 2019ರಲ್ಲಿ ಹಲವಾರು ಬಿಗ್ ಬಜೆಟ್ ಸಿನಿಮಾಗಳು ತೆರೆಕಾಣಲು ಸಿದ್ಧವಾಗುತ್ತಿವೆ. ಮುಖ್ಯವಾಗಿ ಸುದೀಪ್, ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಶ್ರೀಮುರಳಿ, ಗಣೇಶ್ ಅವರ ಚಿತ್ರಗಳು ಬಿಡುಗಡೆ ಕಾಣುತ್ತಿವೆ. ಅದೇ ರೀತಿ ಈ ವರ್ಷ ಹಲವಾರು ಹೊಸಬರು ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. ಹಲವಾರು ಹೊಸ ಮುಖಗಳು ಬೆಳ್ಳಿತೆರೆ ಬೆಳಗಲು ರೆಡಿಯಾಗಿದ್ದಾರೆ.
Vijaya Karnataka Web abhishek


ಜ್ಯೂನಿಯರ್ ರೆಬೆಲ್ ಸ್ಟಾರ್
ಈ ವರ್ಷ ಸ್ಯಾಂಡಲ್‍ವುಡ್‌ಗೆ ಅಡಿಯಿಟ್ಟು ಭಾರಿ ಸದ್ದು ಮಾಡಿದ್ದು ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್. ಅಮರ್ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ನಾಗಶೇಖರ್ ನಿರ್ದೇಶನದ ಈ ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಿಸುತ್ತಿದ್ದಾರೆ. ಮಾರ್ಷಲ್ ಆರ್ಟ್ಸ್, ಕಿಕ್ ಬಾಕ್ಸಿಂಗ್ ಕಲಿತು ಕ್ಯಾಮೆರಾ ಮುಂದೆ ಬಂದಿದ್ದಾರೆ. ಅಂಬರೀಶ್ ಅವರ ಸ್ಥಾನವನ್ನು ತುಂಬಲು ಅಭಿಷೇಕ್ ಆಗಮನವಾಗಿದೆ.

'ಪಡ್ಡೆಹುಲಿ' ಎಂಟ್ರಿ
ಪಡ್ಡೆಹುಲಿ ಚಿತ್ರದ ಮೂಲಕ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಸ್ಯಾಂಡಲ್‍ವುಡ್‍ಗೆ ಅಡಿಯಿಡುತ್ತಿದ್ದಾರೆ. ಗುರು ದೇಶಪಾಂಡೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ರಂಗಭೂಮಿಯಲ್ಲಿ ಬಣ್ಣ ಹಚ್ಚಿರುವ ಇವರು ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲೂ ತರಬೇತಿ ಪಡೆದಿದ್ದಾರೆ.


ಧೀರನ್ ರಾಮ್‍ಕುಮಾರ್
ವರನಟ ಡಾ.ರಾಜ್ ಕುಮಾರ್ ಕುಟುಂಬದ ಕುಡಿ ಧೀರನ್ ರಾಜ್ ಕುಮಾರ್. ರಾಮ್ ಕುಮಾರ್ ಮತ್ತು ಪೂರ್ಣಿಮಾ ರಾಮ್‍ಕುಮಾರ್ ಮಗ. ದಾರಿ ತಪ್ಪಿದ ಮಗ ಸಿನಿಮಾ ಮೂಲಕ ಬೆಳ್ಳಿಪರದೆಗೆ ಅಡಿಯಿಡುತ್ತಿದ್ದಾರೆ. ಅನಿಲ್ ಕುಮಾರ್ ನಿರ್ದೇಶನದ ಸಿನಿಮಾ ಇದು.

ಧನ್ಯಾ ರಾಮ್‌ಕುಮಾರ್
ವರನಟ ಡಾ.ರಾಜ್ ಕುಮಾರ್ ಮೊಮ್ಮಗಳು. ರಾಮ್ ಕುಮಾರ್ ಮತ್ತು ಪೂರ್ಣಿಮಾ ಪುತ್ರಿ. ಅಭಿನಯದ ತರಂಗದಲ್ಲಿ ತರಬೇತಿ ಪಡೆದು ಬೆಳ್ಳಿ ಪರದೆ ಮೇಲೆ ತಮ್ಮ ಛಾಪು ಮೂಡಿಸಲು ಬಂದಿದ್ದಾರೆ.

ಸ್ಯಾಂಡಲ್‍ವುಡ್‍ಗೆ 'ಕಿಸ್' ಕೊಟ್ಟ ಶ್ರೀಲೀಲಾ
ಕಿಸ್‌' ಚಿತ್ರದ ಮೂಲಕ ವಿರಾಟ್‌ ಮತ್ತು ಶ್ರೀಲೀಲಾ ಎಂಬ ಹೊಸ ಕಲಾವಿದರನ್ನು ಸ್ಯಾಂಡಲ್‌ವುಡ್‌ಗೆ ಪರಿಚಯ ಮಾಡುತ್ತಿದ್ದಾರೆ ನಿರ್ದೇಶಕ ಎ.ಪಿ. ಅರ್ಜುನ್. ಟೀನೇಜ್‌ ಹುಡುಗ ಹುಡುಗಿಯರ ಕತೆ ಇದಾಗಿದ್ದು, ಇಡೀ ಸಿನಿಮಾವನ್ನು ಕಲರ್‌ಫುಲ್‌ ಆಗಿ ಕಟ್ಟಿಕೊಟ್ಟಿದ್ದಾರಂತೆ. ಶ್ರೀಲೀಲಾ ಈ ಸಿನಿಮಾವನ್ನು ಒಪ್ಪಿಕೊಳ್ಳಲು ಕಾರಣ ಚಿತ್ರದ ಕತೆಯಂತೆ. ನಿರ್ದೇಶಕರು ಹೇಳಿದ ಕಿಸ್‌ ಕತೆಗೆ ಫಿದಾ ಆಗಿ, ಪಾತ್ರ ಮಾಡಲು ಒಪ್ಪಿಕೊಂಡಂರಂತೆ. ಅಲ್ಲದೇ ಮೊದಲ ಸಿನಿಮಾದಲ್ಲಿಯೇ ಅವರಿಗೆ ವಿಭಿನ್ನ ರೀತಿಯ ಪಾತ್ರ ಸಿಕ್ಕಿದೆಯಂತೆ.

ತಾನ್ಯಾ ಹೋಪ್
2105ರ ಮಿಸ್ ಇಂಡಿಯಾ ಫೈನಲಿಸ್ಟ್ ಇವರು. ಈ ವರ್ಷ ಸ್ಯಾಂಡಲ್‍ವುಡ್‌ಗೆ ಅಡಿಯಿಡುತ್ತಿದ್ದಾರೆ. ದರ್ಶನ್ ಜತೆಗಿನ ಯಜಮಾನ, ಉಪೇಂದ್ರ ಜತೆಗಿನ ಹೋಂ ಮಿನಿಸ್ಟರ್, ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಘರ್ಷ ಚಿತ್ರಗಳ ಮೂಲಕ ಬೆಳ್ಳಿ ತೆರೆಗೆ ಅಡಿಯಿಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌