ಆ್ಯಪ್ನಗರ

ಇತರೆ ಚಿತ್ರರಂಗಗಳಿಗೆ ಸಡ್ಡು ಹೊಡೆಯಲು ನಿಂತ ಸ್ಯಾಂಡಲ್‌ವುಡ್‌

Sudeep Pailwan Movie:ಹಲವು ಭಾಷೆಗಳಲ್ಲಿರಿಲೀಸ್‌ ಆಗುತ್ತಿರುವ ಪೈಲ್ವಾನ್‌ ಸಿನಿಮಾದಲ್ಲಿಎಲ್ಲರೂ ಒಪ್ಪುವಂಥ ಕಥೆ ಇದೆ. ಎಲ್ಲರಿಗೂ ಇಷ್ಟವಾಗುವಂಥ ತಂಡ ಕೆಲಸ ಮಾಡಿದೆ. ಭಾರತೀಯ ಸಿನಿಮಾ ರಂಗದ ಗಣ್ಯರು ಚಿತ್ರದ ಟ್ರೇಲರ್‌ ಮತ್ತು ಹಾಡುಗಳನ್ನು ಮೆಚ್ಚಿಕೊಂಡಿದ್ದಾರೆ ಎನ್ನುತ್ತಾರೆ ಪೈಲ್ವಾನ್ ನಿರ್ದೇಶಕ ಕೃಷ್ಣ.

Vijaya Karnataka 21 Aug 2019, 2:53 pm

ದರ್ಶನ್‌ ನಟನೆಯ 'ಗಂಡಗಲಿ ಮದಕರಿ ನಾಯಕ' ಚಿತ್ರದ ಕೆಲಸ ಶುರು

* ಶರಣು ಹುಲ್ಲೂರು
Vijaya Karnataka Web madakari


ಕನ್ನಡ ಸಿನಿಮಾ ರಂಗದ ಮಾರುಕಟ್ಟೆ ವಿಸ್ತರಣೆಗೆ ಗಂಭೀರ ಪ್ರಯತ್ನ ಮಾಡುತ್ತಿರುವ ಸ್ಯಾಂಡಲ್‌ವುಡ್‌ ಇದೀಗ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ. ವಾರ್ಷಿಕ ಅಂದಾಜು 600 ಕೋಟಿ ರೂ. ವಹಿವಾಟಿನ ಚಿತ್ರರಂಗಕ್ಕೆ ಮತ್ತಷ್ಟು ಬಲ ತುಂಬುವ ಪ್ರಯತ್ನ ನಡೆದಿದ್ದು, ಹೊಸ ತಂಡಗಳ ಜತೆ ಜತೆಗೆ ಸ್ಟಾರ್‌ ನಟರು ಕೂಡ ಇದಕ್ಕೆ ಸಾಥ್‌ ನೀಡುತ್ತಿದ್ದಾರೆ.

ಕೇವಲ ರಾಜ್ಯದ ಮಾರುಕಟ್ಟೆ ಇಟ್ಟುಕೊಂಡು ತಯಾರಾಗುತ್ತಿದ್ದ ಸಿನಿಮಾಗಳು ಇದೀಗ ದಕ್ಷಿಣ ಭಾರತ ಮಾತ್ರವಲ್ಲ, ಇಡೀ ದೇಶವೇ ನೋಡುವಂಥ ಚಿತ್ರಗಳು ಬರುತ್ತಿವೆ. ಬಜೆಟ್‌ ಪ್ರಮಾಣ ಕೂಡ ಎರಡರಿಂದ ಮೂರು ಪಟ್ಟು ಹೆಚ್ಚಾಗಿದೆ.

ತೆಲುಗಿನಲ್ಲಿಬಂದ ಬಾಹುಬಲಿ, ತಮಿಳಿನಲ್ಲಿಬಂದ ಕಬಾಲಿ, ಬಾಲಿವುಡ್‌ನಲ್ಲಿ ಬಂದ ಭಾರತ್‌ ಚಿತ್ರಗಳಂಥ ಬಹುಭಾಷಾ ಪ್ರೇಕ್ಷಕರು ನೋಡುವಂಥ ಚಿತ್ರಗಳನ್ನು ತೆಗೆಯುವ ಪ್ರಯತ್ನ ಜೋರಾಗಿ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಬಾಲಿವುಡ್‌ನ ಲೈಕ್ಯಾ, ಸೋನಿ ಪಿಕ್ಚರ್ಸ್ ಸೇರಿದಂತೆ ಬಹುದೊಡ್ಡ ಬ್ಯಾನರ್‌ಗಳು ಸ್ಯಾಂಡಲ್‌ವುಡ್‌ ನಿರ್ದೇಶಕರಿಗೆ ಅವಕಾಶಗಳನ್ನು ನೀಡುತ್ತಿವೆ.

ಬಹುಭಾಷೆಯಲ್ಲಿ ಕನ್ನಡ ಚಿತ್ರಗಳು:

ಎಲ್ಲಭಾಷೆಯ ನೋಡುಗರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡುವುದು ಬಾಲಿವುಡ್‌ನಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಇದೇ ಹಾದಿಯಲ್ಲೇ ತಮಿಳು ಮತ್ತು ತೆಲುಗು ಸಿನಿಮಾ ರಂಗಗಳೂ ಸಾಗುತ್ತಿವೆ. ಇದೀಗ ಸ್ಯಾಂಡಲ್‌ವುಡ್‌ನ ನಿರ್ದೇಶಕರು ಇಂತಹ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಯಶ್‌ ನಟನೆಯ 'ಕೆಜಿಎಫ್‌', ಸುದೀಪ್‌ ನಟನೆಯ 'ಪೈಲ್ವಾನ್‌', ದರ್ಶನ್‌ ನಟನೆಯ 'ಕುರುಕ್ಷೇತ್ರ', ರಕ್ಷಿತ್‌ ಶೆಟ್ಟಿ ನಟನೆಯ 'ಅವನೇ ಶ್ರೀಮನ್ನಾರಾಯಣ' ದಂತಹ ಚಿತ್ರಗಳು ಹಲವು ಭಾಷೆಗಳಲ್ಲಿ ನಿರ್ಮಾಣವಾಗಿ, ರಿಲೀಸ್‌ ಕೂಡ ಆಗುತ್ತಿವೆ. ಜತೆಗೆ, ನಿರ್ಮಾಪಕರು ಕೂಡ ಭಾರತೀಯ ಸಿನಿಮಾಗಳನ್ನೇ ಮಾಡುವ ಆಕಾಂಕ್ಷೆ ಇಟ್ಟುಕೊಂಡಿದ್ದು, ಅದಕ್ಕೆ ತಕ್ಕ ಕಥೆಗಳನ್ನು ನಿರ್ದೇಶಕರು ರೆಡಿ ಮಾಡುತ್ತಿದ್ದಾರೆ.

ಹಿಗ್ಗಿದ ಬಜೆಟ್‌ ಗಾತ್ರ:

ಕನ್ನಡ ಸಿನಿಮಾ ಅಂದಾಕ್ಷಣ ಕಡಿಮೆ ಬಜೆಟ್‌ನ ಚಿತ್ರಗಳು ಎಂದು ಗೇಲಿ ಮಾಡುತ್ತಿದ್ದ ಕಾಲವಿತ್ತು. ಟಾಪ್‌ ನಟರೊಬ್ಬರ ಚಿತ್ರಕ್ಕೆ 30 ಕೋಟಿ ರೂ. ಹಾಕಲು ಹಿಂದೇಟು ಹಾಕುವಂಥ ಸ್ಥಿತಿ ಇತ್ತು. ಆದರೆ, 70 ಕೋಟಿಗೂ ಅಧಿಕ ಬಜೆಟ್‌ನ ಚಿತ್ರಗಳನ್ನು ತಯಾರಿಸಲು ಮುಂದಾಗಿದ್ದಾರೆ ಸ್ಯಾಂಡಲ್‌ವುಡ್‌ ನಿರ್ಮಾಪಕರು. ಬಹುತೇಕ ಸ್ಟಾರ್‌ ನಟರ ಚಿತ್ರಗಳ ಬಜೆಟ್‌ ಈಗ ಹಿಗ್ಗಿದೆ. ನೂರು ಕೋಟಿ ಕ್ಲಬ್‌ ಸೇರುವ ತವಕದಲ್ಲಿದೆ ಚಿತ್ರರಂಗ. ಕೆಜಿಎಫ್‌ 2, ಗಂಡುಗಲಿ ಮದಕರಿ ನಾಯಕ ಸೇರಿ ಕೆಲ ಚಿತ್ರಗಳ ಬಜೆಟ್‌ ಅಚ್ಚರಿ ಎನ್ನುವಂತೆ ಹಿಗ್ಗಿದೆ.

ಒಂದಾದ ತಾರೆಯರು:

ಆಯಾ ಭಾಷೆಯ ನೋಡುಗರಿಗೆ ಹತ್ತಿರ ಆಗುವಂಥ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಕನ್ನಡ ಸಿನಿಮಾವನ್ನು ಆ ನೋಡುಗರಿಗೆ ತಲುಪಿಸುವಂಥ ಕೆಲಸ ಕೂಡ ಆಗುತ್ತಿದೆ. 'ಪೈಲ್ವಾನ್‌' ಸಿನಿಮಾದಲ್ಲಿಬಾಲಿವುಡ್‌ ನಟ ಸುನೀಲ್‌ ಶೆಟ್ಟಿ, 'ಕೆಜಿಎಫ್‌ 2' ಚಿತ್ರದಲ್ಲಿಸಂಜಯ್‌ ದತ್‌್ತ, ಗಣೇಶ್‌ ನಟನೆಯ 'ಮೈ ನೇಮ್‌ ಇಸ್‌ ಕನ್ನಡಕ' ಚಿತ್ರದಲ್ಲಿಅರ್ಬಾಜ್‌ ಖಾನ್‌ ಹೀಗೆ ಖ್ಯಾತ ಕಲಾವಿದರ ಸಂಗಮವೇ ಕನ್ನಡ ಸಿನಿಮಾಗಳಲ್ಲಿಆಗುತ್ತಿದೆ. ಹೀಗಾಗಿ ಬಾಕಾಫೀಸ್‌ ಕೂಡ ಸಹಜವಾಗಿ ಭರ್ತಿ ಆಗಲಿದೆ.

ಎಲ್ಲಭಾಷಿಗರನ್ನು ಮೆಚ್ಚಿಸುವಂಥ ಚಿತ್ರಗಳು ಕನ್ನಡದಲ್ಲೂತಯಾರಾಗುತ್ತಿವೆ. ಆಯ್ಕೆ ಮಾಡಿಕೊಳ್ಳುವ ಕಥೆ, ಅದನ್ನು ನಿರೂಪಿಸುವ ರೀತಿ ಮತ್ತು ಅದ್ಭುತವಾಗಿ ಮೂಡಿ ಬರುವಂತೆ ನಿರ್ಮಾಣ ಮಾಡುತ್ತಿದ್ದೇವೆ. ಕನ್ನಡ ಸಿನಿಮಾ ರಂಗ ಈಗ ಭಾರತೀಯ ಚಿತ್ರರಂಗದಲ್ಲಿಮಾತ್ರವಲ್ಲ, ವಿದೇಶಿ ನೆಲದಲ್ಲೂಪ್ರಶಂಸೆಗೆ ಪಾತ್ರವಾಗಿದೆ.

-ಪುಷ್ಕರ್‌ ಮಲ್ಲಿಕಾರ್ಜುನಯ್ಯ, ನಿರ್ಮಾಪಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌