ಆ್ಯಪ್ನಗರ

ಅನಂತು-ನುಸ್ರತ್‌ ಪ್ರೀತಿಗೆ ಮಾರು ಹೋದ ಸ್ಯಾಂಡಲ್‌ವುಡ್‌

ವಿನಯ್‌ ರಾಜ್‌ಕುಮಾರ್‌ ನಟನೆಯ ಅನಂತು ವರ್ಸಸ್‌ ನುಸ್ರತ್‌ ಚಿತ್ರಕ್ಕೆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ನಟ ಸುದೀಪ್‌ ಸೇರಿದಂತೆ ಸ್ಯಾಂಡಲ್‌ವುಡ್‌ನ ಅನೇಕರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

Vijaya Karnataka 31 Dec 2018, 8:47 am
ಪದ್ಮಾ ಶಿವಮೊಗ್ಗ
Vijaya Karnataka Web ananthu


ಸುಧೀರ್‌ ಶಾನುಭೋಗ್‌ ನಿರ್ದೇಶನದ ಅನಂತು ವರ್ಸಸ್‌ ನುಸ್ರತ್‌ ಕಳೆದ ಶುಕ್ರವಾರ ರಿಲೀಸ್‌ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ಯಾಂಡಲ್‌ವುಡ್‌ ಗಣ್ಯರು, ಪ್ರೇಕ್ಷಕರು ಮೆಚ್ಚಿಕೊಂಡು ಟ್ವೀಟ್‌ ಮಾಡುತ್ತಿದ್ದಾರೆ. ನಟ ಸುದೀಪ್‌ ಅವರು ಈ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿದ್ದಾರೆ.

'ವಿನಯ್‌ ನಟನೆಯ ಅನಂತು ವರ್ಸಸ್‌ ನುಸ್ರತ್‌' ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ವಿಮರ್ಶೆ ಉತ್ತಮವಾಗಿರೋದು ಸಂತಸದ ಸಂಗತಿ. ಚಿತ್ರತಂಡಕ್ಕೆ ಒಳ್ಳೆಯದಾಗಲಿ' ಎಂದು ಸುದೀಪ್‌ ಟ್ವೀಟ್‌ ಮಾಡಿದ್ದಾರೆ.

ನಟ ಪುನೀತ್‌ ರಾಜ್‌ಕುಮಾರ್‌ ಕೂಡ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಅಲ್ಲದೆ, ಚಿತ್ರದಲ್ಲಿ ತಮಗೆ ಇಷ್ಟವಾದ ಹಾಡೊಂದನ್ನು ಹಾಡಿರುವ ವಿಡಿಯೋ ಕ್ಲಿಪ್‌ ಅನ್ನು ಟ್ವೀಟ್‌ ಮಾಡಿದ್ದಾರೆ.'ಈ ಕ್ಷಣವೇ ಜಾರಿಯಾಗಿದೆ.. ಎಂಬ ಹಾಡು ನನಗೆ ಬಹಳ ಇಷ್ಟವಾಗಿದೆ. ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುತ್ತಿದೆ. ತಂಡಕ್ಕೆ ಒಳ್ಳೆಯದಾಗಲಿ' ಎಂದು ವಿಶ್‌ ಮಾಡಿದ್ದಾರೆ.

ನಿರ್ದೇಶಕ ಯೋಗ್‌ರಾಜ್‌ ಭಟ್‌ ಕೂಡಾ ಟ್ವೀಟ್‌ ಮಾಡಿದ್ದಾರೆ. 'ಅನಂತಪ್ಪನಿಗೆ ನುಸ್ರತಮ್ಮನಿಗೆ ಹಾಗೂ ಇಡೀ ತಂಡಕ್ಕೆ ಶುಭಾಶಯಗಳು. ಬರೀ ಒಳ್ಳೆಯದೇ ಆಗಲಿ, ಜೈ ವಿನಯ್‌ ರಾಜ್‌ಕುಮಾರ್‌ ಜೈ ಅನಂತು ವರ್ಸಸ್‌ ನುಸ್ರತ್‌' ಎಂದು ತಮಾಷೆಯಾಗಿ ಬರೆದು ಶುಭ ಕೋರಿದ್ದಾರೆ.

ಹಾಗೆಯೇ ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಸೇರಿದಂತೆ ಚಿತ್ರರಂಗದ ಗಣ್ಯರನೇಕರು ಸಂತಸ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

ತುಂಬಾ ಜನ ಫೋನ್‌ ಮಾಡಿ ಪ್ರಶಂಸೆ ಮಾಡ್ತಿದ್ದಾರೆ. ಬಹಳ ಖುಷಿಯಾಗಿದೆ. ನೋಡಿದ ಪ್ರೇಕ್ಷಕರೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಸಿನಿಮಾಗೆ ಪ್ರೋತ್ಸಾಹ ನೀಡುತ್ತಿರುವುದು ಸಂತೋಷ ಕೊಟ್ಟಿದೆ. ಅವರಿಗೆಲ್ಲಾ ಥ್ಯಾಂಕ್ಸ್‌. ಸ್ಯಾಂಡಲ್‌ವುಡ್‌ನ ನಿರ್ದೇಶಕರು, ನಟರು ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ- ವಿನಯ್‌ ರಾಜ್‌ಕುಮಾರ್‌. ನಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌