ಆ್ಯಪ್ನಗರ

ಕರ್ನಾಟಕದ ನ್ಯೂ ಕ್ರಶ್‌ ಆದ ಸಂಜನಾ ಆನಂದ್

ಅಜಯ್‌ ರಾವ್‌ ನಟನೆಯ ಹೊಸ ಚಿತ್ರದಲ್ಲಿ ಸಂಜನಾ ಹಳ್ಳಿ ಹುಡುಗಿಯ ಪಾತ್ರ ಮಾಡುತ್ತಿದ್ದರೆ, ದುನಿಯಾ ವಿಜಯ್‌ ನಿರ್ದೇಶನದ ಸಲಗ ಚಿತ್ರದಲ್ಲಿ ಮತ್ತೊಂದು ಹೊಸ ಬಗೆಯ ಪಾತ್ರ. ಚಿರಂಜೀವಿ ಸರ್ಜಾ ಅಭಿಯನದ ಕ್ಷತ್ರಿಯ ಚಿತ್ರಕ್ಕೂ ಇವರೇ ನಾಯಕಿ. ಜತೆಗೆ ಕಾಮಿಡಿ ಜಾನರ್‌ನ 'ಕುಷ್ಕ' ಚಿತ್ರದಲ್ಲೂ ಇವರು ನಟಿಸುತ್ತಿದ್ದಾರೆ ಎನ್ನುವುದು ವಿಶೇಷ.

Vijaya Karnataka 4 Jun 2019, 6:00 am
ಕೆಮಿಸ್ಟ್ರಿ ಆಫ್‌ ಕರಿಯಪ್ಪ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾದ ನಟಿ ಸಂಜನಾ ಆನಂದ್‌, ಇದೀಗ ಕರ್ನಾಟಕದ ಹೊಸ ಕ್ರಷ್‌ ಆಗಿದ್ದಾರೆ. ಕಡಿಮೆ ಅವಧಿಯಲ್ಲೇ ಸ್ಟಾರ್‌ ನಟರ ಜತೆಗೆ ತೆರೆ ಹಂಚಿಕೊಳ್ಳುವ ಅದೃಷ್ಟ ಪಡೆದಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಇವರ ನಗು, ಮುದ್ದಾದ ಮಾತು, ಸಹಜ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ನ್ಯಾಚುರಲ್‌ ಬ್ಯೂಟಿ ಎಂದು ಇವರನ್ನು ಕೊಂಡಾಡುತ್ತಿದ್ದಾರೆ.
Vijaya Karnataka Web sanjana-anand


ಅಜಯ್‌ ರಾವ್‌ ನಟನೆಯ ಹೊಸ ಚಿತ್ರದಲ್ಲಿ ಸಂಜನಾ ಹಳ್ಳಿ ಹುಡುಗಿಯ ಪಾತ್ರ ಮಾಡುತ್ತಿದ್ದರೆ, ದುನಿಯಾ ವಿಜಯ್‌ ನಿರ್ದೇಶನದ ಸಲಗ ಚಿತ್ರದಲ್ಲಿ ಮತ್ತೊಂದು ಹೊಸ ಬಗೆಯ ಪಾತ್ರ. ಚಿರಂಜೀವಿ ಸರ್ಜಾ ಅಭಿಯನದ ಕ್ಷತ್ರಿಯ ಚಿತ್ರಕ್ಕೂ ಇವರೇ ನಾಯಕಿ. ಜತೆಗೆ ಕಾಮಿಡಿ ಜಾನರ್‌ನ 'ಕುಷ್ಕ' ಚಿತ್ರದಲ್ಲೂ ಇವರು ನಟಿಸುತ್ತಿದ್ದಾರೆ ಎನ್ನುವುದು ವಿಶೇಷ.

ಚಿತ್ರರಂಗಕ್ಕೆ ಬರುವ ಮೊದಲು ಡೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಸಂಜನಾ. ಆ ಸಮಯದಲ್ಲಿ ಅವರಿಗೆ ಕಿರುಚಿತ್ರದಲ್ಲಿ ನಟಿಸುವ ಅವಕಾಶವೊಂದು ದೊರಕಿತ್ತು. ಅದಕ್ಕೆ ಖುಷಿಯಿಂದ ಒಪ್ಪಿಕೊಂಡ ಸಂಜನಾ, ಆ ಕಿರುಚಿತ್ರದ ಮೂಲಕ ಬೆಳ್ಳಿತೆರೆಗೆ ಹಾರುವ ಅವಕಾಶ ಪಡೆದರು.

ಸಂಜನಾ ನಟಿಸಿದ ಕಿರುಚಿತ್ರದ ನಟನೆ ನೋಡಿದ 'ಕೆಮಿಸ್ಟಿ ಆಫ್ ಕರಿಯಪ್ಪ' ಟೀಂ ಸಂಜನಾ ಅವರನ್ನು ಆಡಿಷನ್ ಗೆ ಕರೆದಿತ್ತು. ಆಡಿಷನ್‌ನಲ್ಲೂ ಸುಲಭವಾಗಿ ಆಯ್ಕೆಯಾದ ನಟಿ ಸಿನಿಮಾ ತಂಡವನ್ನು ಸೇರಿಕೊಂಡಿದ್ದಾರೆ. ಆ ಬಳಿಕ ಸಿನಿಮಾ ವೃತ್ತಿಯನ್ನೇ ಆಯ್ಕೆ ಮಾಡಿಕೊಂಡು ತಮ್ಮ ಸಾಫ್ಟ್‌ವೇರ್ ಉದ್ಯೋಗವನ್ನೇ ತ್ಯಜಿಸಿದ್ದಾರೆ ಸಂಜನಾ. ಸಂಜನಾ ನಟನೆಯ ಮೊದಲ ಚಿತ್ರದಲ್ಲೇ ಸಂಜನಾ ನಟನೆಯನ್ನು ಕನ್ನಡ ಪ್ರೇಕ್ಷಕರು ಮೆಚ್ಚಿ ಬೆನ್ನು ತಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌