ಆ್ಯಪ್ನಗರ

'ಕೆಜಿಎಫ್ 2' ಸಿನಿಮಾದಲ್ಲಿ 'ಅಧೀರ' ಪಾತ್ರದ ರಹಸ್ಯ ಬಿಚ್ಚಿಟ್ಟ ಸಂಜಯ್ ದತ್

'ಕೆಜಿಎಫ್ 1'ರಲ್ಲಿ ಸಂಜಯ್ ದತ್ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಅವರು ಆಗ ನಟಿಸಿದರಲಿಲ್ಲ. ಕೆಜಿಎಫ್ 2ನೇ ಭಾಗ ಬರುವ ಹೊತ್ತಿಗೆ ಮತ್ತೆ ಸಂಜಯ್ ನಟಿಸುತ್ತಿದ್ದಾರೆ. ತಮ್ಮ ಪಾತ್ರದ ಬಗ್ಗೆ ಸಂಜಯ್ ದತ್ ಈಗ ಹೇಳಿದ್ದಾರೆ.

Vijaya Karnataka Web 18 Sep 2019, 5:26 pm
ಸಂಜಯ್ ದತ್ ಹುಟ್ಟುಹಬ್ಬದ ದಿನ ಅವರು 'ಕೆಜಿಎಫ್'ನಲ್ಲಿ ನಟಿಸುತ್ತಾರೆ ಎಂದು ಚಿತ್ರತಂಡ ಅಧಿಕೃತವಾಗಿ ಹೇಳಿತ್ತು. ಸಂಜು ಕನ್ನಡ ಚಿತ್ರದಲ್ಲಿ ನಟಿಸುತ್ತಾರೆ ಎಂದಾದಾಗ ಎಲ್ಲರೂ ಖುಷಿಪಟ್ಟಿದ್ದರು. ಅವರ ಪಾತ್ರ ಯಾವ ರೀತಿ ಇರಲಿದೆ ಎಂದು ಎಲ್ಲರೂ ಕುತೂಹಲದಿಂದಿದ್ದರು. ಈಗ ಅವರ ಪಾತ್ರದ ಬಗ್ಗೆ ಸಂಜು ಮಾತನಾಡಿದ್ದಾರೆ.
Vijaya Karnataka Web sanjay dutt


" ನಾನು 2012ರಲ್ಲಿ ತೆರೆ ಕಂಡ 'ಅಗ್ನೀಪತ್' ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದೆ. ಮತ್ತೆ ನೆಗೆಟಿವ್ ಶೇಡ್‌ಗೆ ಬಣ್ಣ ಹಚ್ಚಲು ಕಾಯುತ್ತಿದ್ದೆ. ಅದೇ ಸಮಯಕ್ಕೆ 'ಕೆಜಿಎಫ್ 2' ಸಿಕ್ಕಿತು. ಈ ಅವಕಾಶ ಸಿಕ್ಕಾಗ ನನಗೆ ಇದು ಸೂಕ್ತ ಅನಿಸಿತು. ಈಗ 'ಕೆಜಿಎಫ್ 2'ದಲ್ಲಿ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದೇನೆ. ಇದೊಂದು ಆ್ಯಕ್ಷನ್ ಆಧಾರಿತ ಪಾತ್ರ. ಈ ಪಾತ್ರ ನನಗೆ ಸೂಕ್ತವಾಗುತ್ತದೆ"ಎಂದಿದ್ದಾರೆ.
ಭರ್ಜರಿ ಶಾಪಿಂಗ್ ಶುರು ಮಾಡಿದ ಯಶ್ ಮತ್ತು ರಾಧಿಕಾ; ಕಾರಣ ?
'ಕೆಜಿಎಫ್ 2' ಸಿನಿಮಾದಲ್ಲಿ ಅಧೀರನ ಪಾತ್ರದ ಬಗ್ಗೆ ಮಾತನಾಡಿದ ಸಂಜಯ್ ದತ್ "ಅಗ್ನೀಪತ್‌ ಸಿನಿಮಾದಲ್ಲಿನ ಕಾಂಚಾ ಚೀನಾಗಿಂತ ಅಧೀರ ಪಾತ್ರ ಹೆಚ್ಚು ಭಯಬೀಳಿಸುವಂತಿರಬೇಕು ಇದು ಎಂದು ನಿರೀಕ್ಷೆ ಮಾಡುತ್ತಿದ್ದೇನೆ.ನಾನು ಕನ್ನಡ ಕಲಿಯುವ ಅವಶ್ಯಕತೆ ಬೀಳತ್ತೋ ಇಲ್ಲವೋ ಗೊತ್ತಿಲ್ಲ. ಚಿತ್ರ ತಯಾರಕರ ಚಿಂತನೆ ಹೊರತಾಗಿ ನಾನು ಡೈಲಾಗ್ ಡೆಲಿವರಿ ಮಾಡಲು ಬಯಸುತ್ತೇನೆ" ಎಂದಿದ್ದಾರೆ. ಮೂಲಗಳ ಪ್ರಕಾರ ಸಂಜಯ್ ದತ್ ಅಧೀರನಾಗಿ ತನ್ನ ಸಹೋದರ ಗರುಡನ ಸಾವಿಗೆ ಕಾರಣನಾದ ರಾಕಿಬಾಯ್‌ನ ಮೇಲೆ ಸೇಡು ತೀರಿಸಿಕೊಳ್ಳುತ್ತಾನೆ.
ಯಶ್ ಅಭಿನಯದ 'ಕೆಜಿಎಫ್: ಚಾಪ್ಟರ್ 2' ಚಿತ್ರೀಕರಣಕ್ಕೆ ಕೋರ್ಟ್ ತಡೆಯಾಜ್ಞೆ

ಸಂಜಯ್ ದತ್ ಬಗ್ಗೆ ಮಾತನಾಡಿದ್ದ ಯಶ್ "ಕೆಜಿಎಫ್ ಬಳಗಕ್ಕೆ ಸ್ವಾಗತ. ಸಂಜಯ್ ಅವರಿಂದಾಗಿ ಕೆಜಿಎಫ್‌ ಮೇಲೆ ಇನ್ನಷ್ಟು ಪ್ರಭಾವ ಬೀರಲಿದೆ. ಸಂಜಯ್ ಅವರ ಇಮೇಜ್, ಪರಂಪರೆ ಸಿನಿಮಾಕ್ಕೆ ಇನ್ನಷ್ಟು ಪುಷ್ಠಿ ಕೊಡುತ್ತದೆ " ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಕೆಜಿಎಫ್ ಚಿತ್ರೀಕರಣದಿಂದ ಸೈನೇಡ್ ದಿಬ್ಬ ನಾಶ ಆಗುತ್ತಿದ್ದು, ಪರಿಸರ ಹಾಳಾಗುತ್ತಿದೆ ಎಂದು ಆರೋಪಿಸಿ ಎನ್.ಶ್ರೀನಿವಾಸ್ ದೂರು ನೀಡಿದ್ದರು. ಹೀಗಾಗಿ ಕೆಜಿಎಫ್‌ ಸ್ಥಳದಲ್ಲಿ ಶೂಟಿಂಗ್ ಮುಗಿಸುವ ಒಂದು ದಿನ ಮುಂಚೆ ಸ್ಟೇ ಆರ್ಡರ್ ತರಲಾಗಿತ್ತು. ಹೀಗಾಗಿ ಕಾನೂನು ರೀತಿಯಲ್ಲಿ ಈ ಸಮಸ್ಯೆ ಬಗೆಹರಿಸಿಕೊಳ್ಳಲು ಚಿತ್ರತಂಡ ನಿರ್ಧಾರ ಮಾಡಿದೆ.
ಈ ಬಗ್ಗೆ ಮಾತನಾಡಿರುವ ಕೆಜಿಎಫ್ ವಿತರಕ ಕಾರ್ತಿಕ್ ಗೌಡ "ಅದೇ ಸ್ಥಳದಲ್ಲಿ ಆರು ತಿಂಗಳಿನಿಂದ ಚಿತ್ರೀಕರಣ ಮಾಡುತ್ತಿದ್ದೇವೆ. ಕೆಜಿಎಫ್ 1 ಶೂಟಿಂಗ್ ಮಾಡುವಾಗ ಯಾವುದೇ ಸಮಸ್ಯೆಗಳಾಗಿರಲಿಲ್ಲ. ಈ ಬಾರಿ ಒಂದು ತಿಂಗಳು ಚಿತ್ರೀಕರಣಕ್ಕೆ ವೇಳಾಪಟ್ಟಿ ಸಿದ್ಧಮಾಡಿಕೊಂಡಿದ್ದೆವು. ಯಾವುದೇ ಮಾಹಿತಿ ನೀಡದೆ ದೂರು ನೀಡಿದ್ದಾರೆ. ನಮ್ಮ ತಂಡದ ಕೆಲಸದಿಂದ ಪರಿಸರ ಕಲುಷಿತವಾಗುತ್ತಿದೆ, ಸೈನೇಡ್ ದಿಬ್ಬ ಹಾಳಾಗುತ್ತಿದೆ ಎಂದು ದೂರುದಾರರು ಹೇಳಿದ್ದಾರೆ. ಆದರೆ ನಿಜಕ್ಕೂ ಅದು ಸತ್ಯವಲ್ಲ. ಅಲ್ಲಿನ ನಿವಾಸಿಗಳು ಕೂಡ ಈ ಬಗ್ಗೆ ದೂರಿಲ್ಲ. ವಸ್ತುಗಳ ಸಾಗಾಟ, ಇನ್ನುಳಿದ ಯಾವುದೇ ಕೆಲಸದಿಂದ ಧೂಳು ಉಂಟಾಗಿಲ್ಲ. ಜೊತೆಗೆ ಸ್ಥಳೀಯರಿಗೆ ತಾತ್ಕಾಲಿಕ ಕೆಲಸ ನೀಡಿದ್ದೇವೆ. ಹೀಗಾಗಿ ಕಾನೂನು ಮಾರ್ಗ ಅನುಸರಿಸುತ್ತೇವೆ" ಎಂದು ಸ್ಪಷ್ಟನೆ ನೀಡಿದ್ದಾರೆ.

2020ರ ಆರಂಭದಲ್ಲಿ 'ಕೆಜಿಎಫ್ 2' ತೆರೆಗೆ ಅಪ್ಪಳಿಸುವ ಸಾಧ್ಯತೆಯಿದೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಚಿತ್ರ ಮೂಡಿಬರಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌