ಆ್ಯಪ್ನಗರ

ಸಂಕಷ್ಟಕರ ಗಣಪತಿ ಹಿಂದೆ ಹೊರಟ ಅರ್ಜುನ್‌

ಪನ್ಮಂಡಿ ಕ್ರಾಸ್‌ ಅವಾರ್ಡ್‌ ವಿನ್ನಿಂಗ್‌ ಕಿರು ಚಿತ್ರ ನಿರ್ದೇಶಿಸಿದ ಅರ್ಜುನ್‌ ಕುಮಾರ್‌ ಸಂಕಷ್ಟಕರ ಗಣಪತಿ ಎಂಬ ಚಿತ್ರವನ್ನು ನಿರ್ದೇಶಿಸಲು ಹೊರಟಿದ್ದಾರೆ...

Vijaya Karnataka Web 11 Aug 2017, 4:00 am

ಇಂಟ್ರೋ: ಪನ್ಮಂಡಿ ಕ್ರಾಸ್‌ ಅವಾರ್ಡ್‌ ವಿನ್ನಿಂಗ್‌ ಕಿರು ಚಿತ್ರ ನಿರ್ದೇಶಿಸಿದ ಅರ್ಜುನ್‌ ಕುಮಾರ್‌ ಸಂಕಷ್ಟಕರ ಗಣಪತಿ ಎಂಬ ಚಿತ್ರವನ್ನು ನಿರ್ದೇಶಿಸಲು ಹೊರಟಿದ್ದಾರೆ.

-----

Vijaya Karnataka Web sankastakara ganapathi
ಸಂಕಷ್ಟಕರ ಗಣಪತಿ ಹಿಂದೆ ಹೊರಟ ಅರ್ಜುನ್‌

ಕನ್ನಡ ಕಿರು ಚಿತ್ರದ ಇತಿಹಾಸದಲ್ಲಿ ದಾಖಲೆ ಸೃಷ್ಟಿಸಿದ ಪನ್ಮಂಡಿ ಕ್ರಾಸ್‌ನ ನಿರ್ದೇಶಕ ಅರ್ಜುನ್‌ಕುಮಾರ್‌ 'ಸಂಕಷ್ಟಕರ ಗಣಪತಿ' ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಕಳೆದ ಏಳು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅರ್ಜುನ್‌ ತಮ್ಮ ಮೊದಲ ನಿರ್ದೇಶನದ ಪನ್ಮಂಡಿ ಕ್ರಾಸ್‌ ಕಿರು ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನ ಗಮನ ಸೆಳೆದಿದ್ದರು, ಆ ಕಿರು ಚಿತ್ರಕ್ಕೆ ರಾಷ್ಟ್ರ ಮಟ್ಟದ ಪ್ರಶಸ್ತಿಯೂ ಬಂದಿತ್ತು.

ಈಗ ಸಂಕಷ್ಟಕರ ಗಣಪತಿ ಚಿತ್ರ ಸಂಪೂರ್ಣ ರೊಮ್ಯಾಂಟಿಕ್‌ ಹಾಗೂ ಕಾಮಿಡಿ ಅಂಶಗಳನ್ನು ಒಳಗೊಂಡಿದ್ದು, ಒಬ್ಬ ಕಾರ್ಟೂನಿಸ್ಟ್‌ ಜೀವನನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರಂತೆ ಅರ್ಜುನ್‌. ಏಲಿಯಮ್‌ ಹ್ಯಾಂಡ್‌ ಎಂಬ ನ್ಯೂರೊಲೋಜಿಕಲ್‌ ಸಿಂಡ್ರೋಮ್‌ ಬಗ್ಗೆಯೂ ಇದರಲ್ಲಿ ಪ್ರಸ್ತಾಪ ಮಾಡಲಾಗಿದೆಯಂತೆ. ಏಲಿಯಮ್‌ ಹ್ಯಾಂಡ್‌ ನ್ಯೂರೋಲೋಜಿಕಲ್‌ ಸಿಂಡ್ರೋಮ್‌ ಎಂದರೆ ತಮ್ಮ ಎಡಗೈಯಿಂದ ಬೇರೆಯವರಿಗೆ ತನಗೆ ಅರಿವಿಲ್ಲದಂತೆ ಹೊಡೆಯುವುದು, ಈ ನ್ಯೂನ್ಯತೆಯಿಂದ ಬಳಲುವ ನಾಯಕ ಇದರಿಂದ ಎದುರಿಸುವ ಅನೇಕ ಸಂಕಷ್ಟಗಳನ್ನು ಯಾವರ ರೀತಿ ಎದುರಿಸಿ ಅದರಿಂದ ಹೇಗೆ ಪಾರಾಗುತ್ತಾನೆ ಎಂಬುದೇ ಕತೆ.

ಬೆಂಗಳೂರಿನ ಸುತ್ತಮುತ್ತವೇ ಚಿತ್ರೀಕರಣವನ್ನು ಮಾಡಲಾಗಿದ್ದೂ, ಸುಂದರವಾದ ಉದ್ಯಾನನಗರಿಯ ಸೌಂದರ್ಯವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ ಎನ್ನುತ್ತಾರೆ ನಿರ್ದೇಶಕ ಅರ್ಜುನ್‌ ಕುಮಾರ್‌.

ಈ ಚಿತ್ರಕ್ಕೆ ನಾಯಕನಾಗಿ ಲಿಖಿತ್‌ ಶೆಟ್ಟಿ ಹಾಗೂ ನಾಯಕಿಯಾಗಿ ಶೃತಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಚ್ಯುತ್‌ ಕುಮಾರ್‌ , ಮಂಜುನಾಥ್‌, ಭೂಷಣ್‌ ಸೇರಿದಂತೆ ನುರಿತ ಕಲಾವಿದರನ್ನು ಒಳಗೊಂಡಿದೆ. ಡೈನಾಮೈಟ್‌ ಫಿಲ್ಮ್ಸ್ ಎಂಬ ಬ್ಯಾನರ್‌ಅಡಿಯಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ ರಾಜೇಶ್‌ ಬಾಬು, ಫೈಜಾನ್‌ ಖಾನ್‌, ಲಿಖಿತ್‌ ಶೆಟ್ಟಿ ನಿರ್ಮಾಪಕರಾಗಿದ್ದಾರೆ. ರಿತ್ವಿಕ್‌ ಮುರುಳಿಧರ್‌ರವರ ಸಂಗೀತ ಸಂಯೋಜನೆಯಿದೆ.

-------

ಕೋಟ್ಸ್‌

ಚಿತ್ರದ ಅರ್ಧ ಭಾಗ ಚಿತ್ರೀಕರಣ ಮುಗಿದಿದ್ದು, ಯಾವುದೇ ಅದ್ಧೂರಿತನವಿಲ್ಲದೇ ಚಿತ್ರದಲ್ಲಿ ಸೂಕ್ಷ್ಮ ಸಾಮಾನ್ಯ ಸಂಗತಿಗಳನ್ನು ಇಟ್ಟುಕೊಂಡು ಮೊದಲ ಪ್ರಯತ್ನ ಮಾಡಿದ್ದೇವೆ.

-ಅರ್ಜುನ್‌ ಕುಮಾರ್‌ , ನಿರ್ದೇಶಕ,

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌