ನಂದಿನಿ ಕೆ.ಎಲ್
ಸಮೃದ್ಧಿಯ ಸಂಕೇತವಾಗಿರುವ 'ಸಂಕ್ರಾಂತಿ' ಹಬ್ಬ ಬರಮಾಡಿಕೊಳ್ಳಲು ಕರುನಾಡು ತುದಿಗಾಲಲ್ಲಿ ನಿಂತಿದೆ. ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಆಚರಿಸಲ್ಪಡುವ ಈ ಹಬ್ಬಕ್ಕೆ ರೈತರು ಮಾತ್ರವಲ್ಲ, ಯುವಕ ಯುವತಿಯರು ಕೂಡ ತಮ್ಮದೇ ಆದ ರೀತಿಯಲ್ಲಿ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಮಾರುಕಟ್ಟೆ ಕೂಡ ಅದಕ್ಕೆ ತಕ್ಕಂತೆ ಬದಲಾಗಿದೆ.
ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಂಕ್ರಾಂತಿ ಅಬ್ಬರ ಜೋರಾಗಿದ್ದು, ಕವಿ ಮನಸ್ಸಿನ ಯೂತ್ಸ್ ಹೊಸ ಹೊಸ ಕವಿತೆಗಳನ್ನು ಬರೆದು, ಶುಭಾಶಯ ಕೋರುತ್ತಿದ್ದಾರೆ. ಟ್ರೆಂಡ್ಗೆ ತಕ್ಕಂತೆ ಧಿರಿಸುಗಳನ್ನು ಖರೀದಿಸುತ್ತಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಶುಭಾಶಯ ಕೋರುವಂಥ ವಿವಿಧ ಬಗೆಯ ವಿನ್ಯಾಸದ ಕಾರ್ಡ್ಗಳು ಕೂಡ ಗಮನ ಸೆಳೆಯುತ್ತಿವೆ.
ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬದಂದು ಸಕ್ಕರೆ ಅಚ್ಚು, ಎಳ್ಳು ಬೆಲ್ಲ ಮತ್ತು ಬಣ್ಣ ಬಣ್ಣದ ಗಾಳಿಪಟಗಳಿಗೆ ಬೇಡಿಕೆ ಹೆಚ್ಚು. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವಿವಿಧ ಆಕಾರದ ಗಾಳಿಪಟಗಳು ಮಾರ್ಕೆಟ್ನಲ್ಲಿ ಲಭ್ಯವಿವೆ.
ಈ ಕುರಿತು ಕಾಲೇಜ್ ವಿದ್ಯಾರ್ಥಿ ರವಿಶಂಕರ್ ಹೇಳುವುದು ಹೀಗೆ, 'ಸಂಕ್ರಾಂತಿ ಹಬ್ಬದಂದು ನಾವೆಲ್ಲ ಟ್ರೆಡಿಷನಲ್ ಉಡುಪು ಧರಿಸಿಕೊಂಡು ಹೋಗುತ್ತೇವೆ. ನಮ್ಮ ಮನೆಯಲ್ಲೇ ಮಾಡಿದ ಎಳ್ಳೆ ಬೆಲ್ಲ ಮಿಶ್ರಣದ ಸಿಹಿಯನ್ನು ಹಂಚುತ್ತೇವೆ. ಒಬ್ಬರಿಗೊಬ್ಬರು ವಿಶ್ ಮಾಡಿ ಸಂಭ್ರಮಿಸುತ್ತೇವೆ' ಅಂತಾರೆ.
ಸಂಕ್ರಾಂತಿಯ ಹಬ್ಬದ ವಿಶೇಷತೆ ಸಾರುವ ಎಳ್ಳು-ಬೆಲ್ಲವನ್ನು ಗಾಜಿನ ಬಟ್ಟಲಲ್ಲಿ ತುಂಬಿಡುವುದು ವಾಡಿಕೆ. ಆದರೆ, ಈ ಬಾರಿ ಮಾರುಕಟ್ಟೆಯಲ್ಲಿ ಮಣ್ಣಿನ ಮಡಕೆಗೆ ಸ್ಥಾನ ಸಿಕ್ಕಿದೆ. ಮಣ್ಣಿನ ಮಡಕೆಗೆ ವಿವಿಧ ಬಣ್ಣಗಳಿಂದ ಪೆಯಿಂಟಿಂಗ್ ಮಾಡಿ ಮಾರಾಟಕ್ಕಿಡಲಾಗಿದೆ. ಅದರಲ್ಲೂ ಸಾಂಪ್ರದಾಯಿಕ ಕಲೆಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ಅಲ್ಲದೇ ಸಕ್ಕರೆ ಅಚ್ಚುನಲ್ಲೂ ವಿಶೇಷತೆ ಬಂದಿದ್ದು, ಐತಿಹಾಸಿಕ ಪ್ರವಾಸಿ ತಾಣಗಳನ್ನು ಬಿಂಬಿಸುವ ಹಂಪಿ, ಪಟ್ಟದ ಕಲ್ಲು, ತಾಜ್ಮಹಲ್ ಹೀಗೆ ನಾನಾ ಬಗೆಯ ಸಕ್ಕರೆ ಅಚ್ಚುಗಳು ಗಮನ ಸೆಳೆಯುತ್ತಿವೆ. ಅವುಗಳಿಗೆ ಗ್ರಾಹಕರು ಆಕರ್ಷಿತರಾಗಿ ಸಕ್ಕರೆ ಅಚ್ಚುಗಳನ್ನು ಖುಷಿಯಿಂದಲೇ ಖರೀದಿಸುತ್ತಿದ್ದಾರೆ.
ಸಂಕ್ರಾಂತಿಗೆಂದೇ ಟೀ ಶರ್ಟ್ಗಳು ಕೂಡ ಲಭ್ಯ ಇವೆ. ಸಂಕ್ರಾಂತಿ ಹಬ್ಬದ ನೆನಪುಗಳನ್ನು ಸಾರುವ ಕವಿತೆಯ ಸಾಲುಗಳನ್ನು ಟೀ ಶರ್ಟ್ ಮೇಲೆ ಪ್ರಿಂಟ್ ಮಾಡಲಾಗಿದ್ದು, ಅವುಗಳನ್ನು ಹೆಚ್ಚೆಚ್ಚು ಯುವಕ ಯುವತಿಯರು ಖರೀದಿಸುತ್ತಿದ್ದಾರೆ. ಬೇಸರದ ಸಂಗತಿ ಅಂದರೆ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯು ಈ ಸಂಕ್ರಾಂತಿಗೆ ದುಬಾರಿ ಆಗಿದೆ. ಆದರೂ, ಹಬ್ಬ ಮಾತ್ರ ಎಂದಿನಂತೆ ಕಳೆಗಟ್ಟಿದೆ.
ಸಂಕ್ರಾಂತಿ ಹಬ್ಬಕ್ಕೆ ವಾರದಿಂದಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಗಾಳಿಪಟ ಹಾರಿಸುವುದು ಮತ್ತು ಎಳ್ಳು ಬೆಲ್ಲವನ್ನು ಹಂಚಿಕೊಂಡು ಸಂಭ್ರಮಿಸುವುದು ಯಾವತ್ತಿಗೂ ಖುಷಿ ಕೊಡುವಂಥದ್ದು- ಮಯೂರಿ, ನಟಿ
ಸಮೃದ್ಧಿಯ ಸಂಕೇತವಾಗಿರುವ 'ಸಂಕ್ರಾಂತಿ' ಹಬ್ಬ ಬರಮಾಡಿಕೊಳ್ಳಲು ಕರುನಾಡು ತುದಿಗಾಲಲ್ಲಿ ನಿಂತಿದೆ. ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಆಚರಿಸಲ್ಪಡುವ ಈ ಹಬ್ಬಕ್ಕೆ ರೈತರು ಮಾತ್ರವಲ್ಲ, ಯುವಕ ಯುವತಿಯರು ಕೂಡ ತಮ್ಮದೇ ಆದ ರೀತಿಯಲ್ಲಿ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಮಾರುಕಟ್ಟೆ ಕೂಡ ಅದಕ್ಕೆ ತಕ್ಕಂತೆ ಬದಲಾಗಿದೆ.
ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಂಕ್ರಾಂತಿ ಅಬ್ಬರ ಜೋರಾಗಿದ್ದು, ಕವಿ ಮನಸ್ಸಿನ ಯೂತ್ಸ್ ಹೊಸ ಹೊಸ ಕವಿತೆಗಳನ್ನು ಬರೆದು, ಶುಭಾಶಯ ಕೋರುತ್ತಿದ್ದಾರೆ. ಟ್ರೆಂಡ್ಗೆ ತಕ್ಕಂತೆ ಧಿರಿಸುಗಳನ್ನು ಖರೀದಿಸುತ್ತಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಶುಭಾಶಯ ಕೋರುವಂಥ ವಿವಿಧ ಬಗೆಯ ವಿನ್ಯಾಸದ ಕಾರ್ಡ್ಗಳು ಕೂಡ ಗಮನ ಸೆಳೆಯುತ್ತಿವೆ.
ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬದಂದು ಸಕ್ಕರೆ ಅಚ್ಚು, ಎಳ್ಳು ಬೆಲ್ಲ ಮತ್ತು ಬಣ್ಣ ಬಣ್ಣದ ಗಾಳಿಪಟಗಳಿಗೆ ಬೇಡಿಕೆ ಹೆಚ್ಚು. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವಿವಿಧ ಆಕಾರದ ಗಾಳಿಪಟಗಳು ಮಾರ್ಕೆಟ್ನಲ್ಲಿ ಲಭ್ಯವಿವೆ.
ಈ ಕುರಿತು ಕಾಲೇಜ್ ವಿದ್ಯಾರ್ಥಿ ರವಿಶಂಕರ್ ಹೇಳುವುದು ಹೀಗೆ, 'ಸಂಕ್ರಾಂತಿ ಹಬ್ಬದಂದು ನಾವೆಲ್ಲ ಟ್ರೆಡಿಷನಲ್ ಉಡುಪು ಧರಿಸಿಕೊಂಡು ಹೋಗುತ್ತೇವೆ. ನಮ್ಮ ಮನೆಯಲ್ಲೇ ಮಾಡಿದ ಎಳ್ಳೆ ಬೆಲ್ಲ ಮಿಶ್ರಣದ ಸಿಹಿಯನ್ನು ಹಂಚುತ್ತೇವೆ. ಒಬ್ಬರಿಗೊಬ್ಬರು ವಿಶ್ ಮಾಡಿ ಸಂಭ್ರಮಿಸುತ್ತೇವೆ' ಅಂತಾರೆ.
ಸಂಕ್ರಾಂತಿಯ ಹಬ್ಬದ ವಿಶೇಷತೆ ಸಾರುವ ಎಳ್ಳು-ಬೆಲ್ಲವನ್ನು ಗಾಜಿನ ಬಟ್ಟಲಲ್ಲಿ ತುಂಬಿಡುವುದು ವಾಡಿಕೆ. ಆದರೆ, ಈ ಬಾರಿ ಮಾರುಕಟ್ಟೆಯಲ್ಲಿ ಮಣ್ಣಿನ ಮಡಕೆಗೆ ಸ್ಥಾನ ಸಿಕ್ಕಿದೆ. ಮಣ್ಣಿನ ಮಡಕೆಗೆ ವಿವಿಧ ಬಣ್ಣಗಳಿಂದ ಪೆಯಿಂಟಿಂಗ್ ಮಾಡಿ ಮಾರಾಟಕ್ಕಿಡಲಾಗಿದೆ. ಅದರಲ್ಲೂ ಸಾಂಪ್ರದಾಯಿಕ ಕಲೆಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ಅಲ್ಲದೇ ಸಕ್ಕರೆ ಅಚ್ಚುನಲ್ಲೂ ವಿಶೇಷತೆ ಬಂದಿದ್ದು, ಐತಿಹಾಸಿಕ ಪ್ರವಾಸಿ ತಾಣಗಳನ್ನು ಬಿಂಬಿಸುವ ಹಂಪಿ, ಪಟ್ಟದ ಕಲ್ಲು, ತಾಜ್ಮಹಲ್ ಹೀಗೆ ನಾನಾ ಬಗೆಯ ಸಕ್ಕರೆ ಅಚ್ಚುಗಳು ಗಮನ ಸೆಳೆಯುತ್ತಿವೆ. ಅವುಗಳಿಗೆ ಗ್ರಾಹಕರು ಆಕರ್ಷಿತರಾಗಿ ಸಕ್ಕರೆ ಅಚ್ಚುಗಳನ್ನು ಖುಷಿಯಿಂದಲೇ ಖರೀದಿಸುತ್ತಿದ್ದಾರೆ.
ಸಂಕ್ರಾಂತಿಗೆಂದೇ ಟೀ ಶರ್ಟ್ಗಳು ಕೂಡ ಲಭ್ಯ ಇವೆ. ಸಂಕ್ರಾಂತಿ ಹಬ್ಬದ ನೆನಪುಗಳನ್ನು ಸಾರುವ ಕವಿತೆಯ ಸಾಲುಗಳನ್ನು ಟೀ ಶರ್ಟ್ ಮೇಲೆ ಪ್ರಿಂಟ್ ಮಾಡಲಾಗಿದ್ದು, ಅವುಗಳನ್ನು ಹೆಚ್ಚೆಚ್ಚು ಯುವಕ ಯುವತಿಯರು ಖರೀದಿಸುತ್ತಿದ್ದಾರೆ. ಬೇಸರದ ಸಂಗತಿ ಅಂದರೆ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯು ಈ ಸಂಕ್ರಾಂತಿಗೆ ದುಬಾರಿ ಆಗಿದೆ. ಆದರೂ, ಹಬ್ಬ ಮಾತ್ರ ಎಂದಿನಂತೆ ಕಳೆಗಟ್ಟಿದೆ.
ಸಂಕ್ರಾಂತಿ ಹಬ್ಬಕ್ಕೆ ವಾರದಿಂದಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಗಾಳಿಪಟ ಹಾರಿಸುವುದು ಮತ್ತು ಎಳ್ಳು ಬೆಲ್ಲವನ್ನು ಹಂಚಿಕೊಂಡು ಸಂಭ್ರಮಿಸುವುದು ಯಾವತ್ತಿಗೂ ಖುಷಿ ಕೊಡುವಂಥದ್ದು- ಮಯೂರಿ, ನಟಿ