ಆ್ಯಪ್ನಗರ

ಸ್ವಾರ್ಥ ರತ್ನದಲ್ಲಿ ಸಂಕ್ರಾಂತಿ ನೆನಪು

ಚಿತ್ರ ಬಿಡುಗಡೆಯಾಗಿ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ನೋಡಿದವರು ಸಿನಿಮಾದಲ್ಲಿಯ ಕಾಮಿಡಿಯನ್ನು ಇಷ್ಟಪಟ್ಟಿದ್ದಾರಂತೆ.

Vijaya Karnataka 11 Jan 2019, 9:32 am
ಆದರ್ಶ್‌ ಗುಂಡುರಾಜ್‌ ನಟನೆಯ ಸ್ವಾರ್ಥ ರತ್ನ ಸಿನಿಮಾದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಸಾಕಷ್ಟು ಅಂಶಗಳಿವೆಯಂತೆ.
Vijaya Karnataka Web Swartharatna


ಚಿತ್ರ ಬಿಡುಗಡೆಯಾಗಿ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ನೋಡಿದವರು ಸಿನಿಮಾದಲ್ಲಿಯ ಕಾಮಿಡಿಯನ್ನು ಇಷ್ಟಪಟ್ಟಿದ್ದಾರಂತೆ. ಈ ಬಗ್ಗೆ ಮಾತನಾಡಿದ ಆದರ್ಶ್‌ 'ಮುಂದಿನ ದಿನಗಳಲ್ಲಿ ಸಂಕ್ರಾಂತಿ ಬರುತ್ತಿರುವ ಕಾರಣ ಸಂಕ್ರಾಂತಿಯಂತಹ ವಿಷಯ ನನ್ನ ಸಿನಿಮಾದಲ್ಲಿಯೂ ಇದೆ. ಸಿನಿಮಾದಲ್ಲಿ ಎಳ್ಳು ಬೆಲ್ಲದಂತಹ ವಿಷಯ ಇದೆ. ಇನ್ನು ಜನ ಇದನ್ನು ಇಷ್ಟಪಟ್ಟಿರುವ ಕಾರಣಕ್ಕೆ ಮೂರನೇ ವಾರಕ್ಕೆ ಕಾಲಿಟ್ಟಿದೆ.

ಸ್ವಾರ್ಥ ಅನ್ನುವುದು ಬೇರೆಯವರಿಗೆ ಯಾವ ರೀತಿ ಒಳಿತು ಮಾಡುತ್ತೆ ಎಂಬುದನ್ನೇ ಈ ಚಿತ್ರದಲ್ಲಿ ಹಾಸ್ಯ ಮೂಲಕ ಹೇಳಿದ್ದು, ಮನುಷ್ಯ ಎಷ್ಟೇ ಸ್ವಾರ್ಥಿಯಾಗಿದ್ದರೂ, ಅವರಲ್ಲೂ ನಿಸ್ವಾರ್ಥ ಇದ್ದೇ ಇರುತ್ತೆ ಎನ್ನುವುದು ಸಿನಿಮಾದ ಒಟ್ಟಾರೆ ತಿರುಳಾಗಿದೆ. ಸಂಕ್ರಾಂತಿಯ ಹಬ್ಬಕ್ಕೆ ಈ ಸಿನಿಮಾ ಸರಿಯಾಗಿ ಹೊಂದುತ್ತದೆ ಎನ್ನುತ್ತಾರೆ ಅವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌