ಆ್ಯಪ್ನಗರ

ಅಭಿಮಾನಿಗಳಿಗಾಗಿ ಈ ದಿನ ಮೀಸಲಿಟ್ಟ ನೀನಾಸಂ ಸತೀಶ್‌

'ಈವರೆಗೂ ಹೊಸ ಹೊಸ ಪಾತ್ರಗಳನ್ನು ಮಾಡುತ್ತಾ ಬಂದವನು ನಾನು. ಟ್ರಿಗರ್‌ ಆಗುವಂಥ ಸ್ಕ್ರಿಪ್ಟ್‌ ಸಿಕ್ಕಾಗ ಎಷ್ಟೇ ಬಿಝಿ ಆಗಿದ್ದರೂ ಸಿನಿಮಾ ಮಾಡಬೇಕು ಅನಿಸುತ್ತದೆ. ದೇವರಾಜ್‌ ಹೇಳಿದರುವ ಕಥೆ ಕೂಡ ಹಾಗೇ ಇತ್ತು. ಒಂದೊಳ್ಳೆ ಸಿನಿಮಾ ಆಗುವ ಸ್ಟೋರಿ ಬರೆದಿದ್ದಾರೆ ನಿರ್ದೇಶಕರು' ಎನ್ನುತ್ತಾರೆ ಸತೀಶ್‌.

Vijaya Karnataka 20 Jun 2019, 3:00 pm
ಇಂದು (ಜೂನ್ 20) ನೀನಾಸಂ ಸತೀಶ್‌ ಹುಟ್ಟು ಹಬ್ಬ. ಈ ಬರ್ತ್‌ಡೇಗಾಗಿ ಅವರ ಹೊಸ ಸಿನಿಮಾವೊಂದು ಸೆಟ್ಟೇರುತ್ತಿದೆ. ದೇವರಾಜ್‌ ಪೂಜಾರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಸತೀಶ್‌ ಹೊಸ ಬಗೆಯ ಪಾತ್ರ ಮಾಡುತ್ತಿದ್ದಾರೆ.
Vijaya Karnataka Web neenasam


ಈಗಾಗಲೇ ಸತೀಶ್‌ ಬ್ರಹ್ಮಚಾರಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ, ಅವರೇ ನಿರ್ದೇಶನ ಮಾಡಲಿರುವ ಚಿತ್ರದಲ್ಲೂ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಮತ್ತೊಂದು ಚಿತ್ರಕ್ಕೆ ಸಹಿ ಮಾಡಿದ್ದಾರೆ.

'ಈವರೆಗೂ ಹೊಸ ಹೊಸ ಪಾತ್ರಗಳನ್ನು ಮಾಡುತ್ತಾ ಬಂದವನು ನಾನು. ಟ್ರಿಗರ್‌ ಆಗುವಂಥ ಸ್ಕ್ರಿಪ್ಟ್‌ ಸಿಕ್ಕಾಗ ಎಷ್ಟೇ ಬಿಝಿ ಆಗಿದ್ದರೂ ಸಿನಿಮಾ ಮಾಡಬೇಕು ಅನಿಸುತ್ತದೆ. ದೇವರಾಜ್‌ ಹೇಳಿರುವ ಕಥೆ ಕೂಡ ಹಾಗೇ ಇತ್ತು. ಒಂದೊಳ್ಳೆ ಸಿನಿಮಾ ಆಗುವ ಸ್ಟೋರಿ ಬರೆದಿದ್ದಾರೆ ನಿರ್ದೇಶಕರು' ಎನ್ನುತ್ತಾರೆ ಸತೀಶ್‌.

ಈ ಚಿತ್ರದಲ್ಲಿಯ ಪಾತ್ರದ ಬಗ್ಗೆ ಸದ್ಯಕ್ಕೆ ಏನೂ ಹೇಳಲಾರೆ ಎನ್ನುತ್ತಾರೆ ಸತೀಶ್‌. 'ಇದೊಂದು ಹೊಸ ಬಗೆಯ ಪಾತ್ರ. ನನ್ನನ್ನು ನಾನು ಹೊಸ ಹೊಸ ಪಾತ್ರಗಳಲ್ಲಿ ನೋಡಲು ಬಯಸುತ್ತೇನೆ. ಪ್ರತಿ ಪಾತ್ರವನ್ನೂ ಎಂಜಾಯ್‌ ಮಾಡುತ್ತೇನೆ. ಹಾಗಾಗಿ ಜನರಿಗೆ ಅವುಗಳು ಬೇಗ ಕನೆಕ್ಟ್ ಆಗುತ್ತವೆ' ಎನ್ನುತ್ತಾರೆ ಸತೀಶ್‌.

ಇಂದು ಅಭಿಮಾನಿಗಳಿಗಾಗಿ ಈ ದಿನವನ್ನು ಮೀಸಲಿಟ್ಟಿದ್ದಾರಂತೆ ಸತೀಶ್‌. ಅಭಿಮಾನಿಗಳ ಸಮ್ಮುಖದಲ್ಲಿ ಬರ್ತ್‌ಡೇ ಆಚರಿಸಿಕೊಳ್ಳುತ್ತಾರಂತೆ. ಅಲ್ಲದೇ, ಈ ಬರ್ತ್‌ಡೇಗಾಗಿ ಅವರ ಬ್ರಹ್ಮಚಾರಿ ಸಿನಿಮಾದ ಟ್ರೇಲರ್‌ ಕೂಡ ರಿಲೀಸ್‌ ಆಗುತ್ತಿರುವುದು ವಿಶೇಷ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌