ಆ್ಯಪ್ನಗರ

ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್‌ನತ್ತ ಹೊರಳಿದ ಸತೀಶ್‌

ಅಯೋಗ್ಯ ಮತ್ತು ಚಂಬಲ್‌ ಚಿತ್ರಗಳ ಯಶಸ್ಸಿನ ನಂತರ ನಟ ನೀನಾಸಂ ಸತೀಶ್‌ ಹೊಸ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಉದಯ್‌ ಮೆಹ್ತಾ ನಿರ್ಮಾಣದ ಚಿತ್ರ ಇದಾಗಿದೆ.

Vijaya Karnataka 29 Mar 2019, 5:00 am
ನೀನಾಸಂ ಸತೀಶ್‌ ಹಳ್ಳಿ ಸೊಗಡಿನ ಪಾತ್ರದಲ್ಲಿ ಮೊದಲು ಹೆಸರು ಮಾಡಿದ್ದು. ನಂತರ ಚಂಬಲ್‌ ಚಿತ್ರದಲ್ಲಿ ಐಎಎಸ್‌ ಅಧಿಕಾರಿ ಪಾತ್ರದಲ್ಲಿ ನಟಿಸಿ ತಾವು ಯಾವ ಪಾತ್ರಕ್ಕಾದರೂ ಸರಿ ಎಂಬುದನ್ನು ನಿರೂಪಿಸಿದರು. ಪೊಲಿಟಿಕಲ್‌ ಥ್ರಿಲ್ಲರ್‌, ಕಾಮಿಡಿ ಜಾನರ್‌ ಸಿನಿಮಾಗಳಲ್ಲಿ ನಟಿಸಿದ್ದ ಅವರು ಈಗ ಇನ್ನೊಂದು ವಿಭಿನ್ನ ಜಾನರ್‌ನ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಲವ್‌ ಇನ್‌ ಮಂಡ್ಯ ಚಿತ್ರದ ನಂತರ ಉದಯ್‌ ಮೆಹ್ತಾ ಮತ್ತು ಸತೀಶ್‌ ಮತ್ತೆ ಒಟ್ಟಿಗೆ ಸಿನಿಮಾ ಮಾಡತ್ತಿದ್ದಾರೆ.
Vijaya Karnataka Web sathish


'ಲವ್‌ ಇನ್‌ ಮಂಡ್ಯ ಚಿತ್ರದ ನಂತರ 3 ವರ್ಷದಿಂದ ನಾನು ಉದಯ್‌ ಮೆಹ್ತಾ ಅವರು ಇನ್ನೊಂದು ಚಿತ್ರ ಮಾಡಬೇಕು ಎಂದು ಮಾತಾಡುತ್ತಲೇ ಇದ್ದೆವು. ಇಬ್ಬರೂ ಬಿಝಿ ಇದ್ದೆವು. ಈಗ ಅದಕ್ಕೆ ಕಾಲ ಕೂಡಿಬಂದಿದೆ. ಚಿತ್ರ ಏಪ್ರಿಲ್‌ನಲ್ಲಿ ಸೆಟ್ಟೇರಲಿದೆ' ಎಂದಿದ್ದಾರೆ ಸತೀಶ್‌. ನಿರ್ದೇಶಕ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ. ಒಂದೆರಡು ದಿನಗಳಲ್ಲಿ ಯಾರು ಚಿತ್ರ ನಿರ್ದೇಶನ ಮಾಡಲಿದ್ದಾರೆ ಎನ್ನುವುದು ಗೊತ್ತಾಗಲಿದೆ.

'ಫ್ಯಾಮಿಲಿ ಪ್ಯಾಕೇಜ್‌ ಸಿನಿಮಾ ಇದು. 'ಹ್ಯೂಮರಸ್‌ ಕತೆ ಚಿತ್ರದಲ್ಲಿದೆ. ದೊಡ್ಡ ಬಜೆಟ್‌ ಸಿನಿಮಾ ಇದು. ಚಿತ್ರಕ್ಕಾಗಿ ವರ್ಕೌಟ್‌ ಶುರು ಮಾಡಿದ್ದೇನೆ' ಎಂದಿದ್ದಾರೆ ಸತೀಶ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌