ಆ್ಯಪ್ನಗರ

ದೀಪಾವಳಿಗೆ ಧೂಳೆಬ್ಬಿಸಿದ ಸತ್ಯ ಹರಿಶ್ಚಂದ್ರ

ಶರಣ್‌ ಮತ್ತು ಸಂಚಿತಾ ಪಡುಕೋಣೆ ನಟಿಸಿರುವ ಸತ್ಯ ಹರಿಶ್ಚಂದ್ರ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಈ ಚಿತ್ರದ ವಿಶೇಷಗಳ ಬಗ್ಗೆ ಶರಣ್‌ ಮಾತನಾಡಿದ್ದಾರೆ.

Vijaya Karnataka 20 Oct 2017, 11:08 am
*ಹರೀಶ್‌ ಬಸವರಾಜ್‌
Vijaya Karnataka Web satya harishchandra is complete entertainer says sharan
ದೀಪಾವಳಿಗೆ ಧೂಳೆಬ್ಬಿಸಿದ ಸತ್ಯ ಹರಿಶ್ಚಂದ್ರ


ದಯಾಳ್‌ ಪದ್ಮನಾಭನ್‌ ನಿರ್ದೇಶನದಲ್ಲಿ ಮೂಡಿ ಬಂದಿರುವ ಸತ್ಯ ಹರಿಶ್ಚಂದ್ರ ಕಂಪ್ಲೀಟ್‌ ಎಂಟರ್‌ಟೈನರ್‌ ಮತ್ತು ಪ್ರೇಕ್ಷಕರಿಗೆ ಬೇಕಾದ ಮನರಂಜನೆಯ ಅಂಶಗಳೆಲ್ಲವೂ ಈ ಸಿನಿಮಾದಲ್ಲಿವೆ ಎಂದು ಹೇಳಿದ್ದಾರೆ ನಾಯಕ ನಟ ಶರಣ್‌.

'ಮನುಷ್ಯನಿಗೆ ಸುಳ್ಳು ಅನಿವಾರ್ಯವೇ ಎಂಬ ಪ್ರಶ್ನೆಯನ್ನು ಈ ಸಿನಿಮಾ ಎತ್ತುತ್ತದೆ. ಏಕೆಂದರೆ ನಮಗೆ ಈಗ ಒಬ್ಬ ಸುಳ್ಳು ಹೇಳಿ, ಮೋಸ ಮಾಡಿದ್ದರೆ ಅದನ್ನು ನಾವು ಮತ್ತೆ ಮುಂದುವರಿಸಿಕೊಂಡು ಹೋಗುತ್ತೇವೆ. ಇಂಥ ಸುಳ್ಳಿನಿಂದ ಆಗುವ ಅನಾಹುತವನ್ನು ಈ ಚಿತ್ರದಲ್ಲಿನಿರ್ದೇಶಕರು ಚೆನ್ನಾಗಿ ತೋರಿಸಿದ್ದಾರೆ. ಪರೀಕ್ಷೆ ಹತ್ತಿರವಾದಾಗ ವಿದ್ಯಾರ್ಥಿಗಳಿಗೆ ಹೇಗೆ ಭಯ ಇರುತ್ತದೋ, ಅದೇ ರೀತಿಯ ಭಯ ನನಗೂ ಈಗ ಇದೆ' ಎಂದು ಅವರು ತಿಳಿಸಿದ್ದಾರೆ.

ಇನ್ನು ಚಿತ್ರದಲ್ಲಿಸಾಕಷ್ಟು ಕಾಮಿಡಿ, ಹಾಡು, ಫೈಟ್‌ಎಲ್ಲವೂ ಇದೆ. ಇವೆಲ್ಲವೂ ಸಿನಿಮಾದ ಕತೆಗೆ ತಕ್ಕಂತೆ ಇದ್ದು, ಯಾವುದನ್ನು ಸುಖಾ ಸುಮ್ಮೆನೆ ತುರುಕಿಲ್ಲವಂತೆ. ಇದರ ಜತೆಗೆ ಶರಣ್‌ ಅವರ ವೃತ್ತಿ ಬದುಕಿನಲ್ಲಿಇದೇ ಮೊದಲ ಚಿತ್ರ ಹಬ್ಬದ ದಿನದಂದು ಬಿಡುಗಡೆಯಾಗುತ್ತಿದೆ.ಇದು ಸಹ ಶರಣ್‌ಗೆ ಬಹಳ ವಿಶೇಷವಂತೆ.

ಸತ್ಯ ಹರಿಶ್ಚಂದ್ರ ಮೂಲಕ ದಯಾಳ್‌ ಮತ್ತು ಕೆ. ಮಂಜು ಜತೆ ಮೊದಲ ಬಾರಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು ಎಂದು ಶರಣ್‌ ಸಂತಸ ವ್ಯಕ್ತಪಡಿಸಿದರು. ಈ ಸಿನಿಮಾದಲ್ಲಿಭಾವನಾ ರಾವ್‌ ಮತ್ತು ಸಂಚಿತಾ ಪಡುಕೋಣೆ, ಚಿಕ್ಕಣ್ಣ ಸೇರಿ ದೊಡ್ಡ ತಾರಾ ಬಳಗವೇ ಇದೆ.

ಕೆ. ಮಂಜು ಸಿನಿಮಾಸ್‌ ಬ್ಯಾನರ್‌ನಡಿ ಕೆ. ಮಂಜು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸತ್ಯ ಹರಿಶ್ಚಂದ್ರ ಇಂದು (ಅ.20) ರಾಜ್ಯದ್ಯಾಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿಬಿಡುಗಡೆಯಾಗುತ್ತಿದೆ.

'ಸಿನಿಮಾಗೆ ಸತ್ಯ ಹರಿಶ್ಚಂದ್ರ ಎಂಬ ಟೈಟಲ್‌ ಯಾಕೆ ಇಟ್ಟೆ ಎಂಬ ಪ್ರಶ್ನೆಯನ್ನು ಸಾಕಷ್ಟು ಮಂದಿ ಕೇಳಿದ್ದಾರೆ, ಆದರೆ ಸಿನಿಮಾ ನೋಡಿದ ಮೇಲೆ ಎಲ್ಲರಿಗೂ ಅದಕ್ಕೆ ಉತ್ತರ ಸಿಗುತ್ತದೆ. ಒಂದೊಳ್ಳೆ ಸಿನಿಮಾ ಮಾಡಿದ ಖುಷಿಯಿದೆ.'

-ದಯಾಳ್‌, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌