ಆ್ಯಪ್ನಗರ

ಕಾರ್ಮಿಕನ ಕಂಠಕ್ಕೆ ಮನಸೋತ ಶಂಕರ್ ಮಹದೇವನ್

ಸಾಮಾಜಿಕ ಮಾಧ್ಯಮಗಳ ಮೂಲಕ ಹಲವಾರು ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ ಕುರಿ ಕಾಯುವ ಹುಡುಗನೊಬ್ಬ ಇದ್ದಕ್ಕಿದ್ದಂತೆ ಸಾಮಾಜಿಕ ತಾಲ ತಾಣಗಳಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು ಗೊತ್ತೇ ಇದೆ.

Samayam Tamil 3 Jul 2018, 5:41 pm
ಸಾಮಾಜಿಕ ಮಾಧ್ಯಮಗಳ ಮೂಲಕ ಹಲವಾರು ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ ಕುರಿ ಕಾಯುವ ಹುಡುಗನೊಬ್ಬ ಇದ್ದಕ್ಕಿದ್ದಂತೆ ಸಾಮಾಜಿಕ ತಾಲ ತಾಣಗಳಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು ಗೊತ್ತೇ ಇದೆ.
Vijaya Karnataka Web kerala


ತಮ್ಮ ಪಾಡಿಗೆ ತಾನು ಹಾಡಿಕೊಂಡು ವೀಡಿಯೋ ಮಾಡಿದ್ದ ನಿನ್ನ ಲಜ್ಜೆ ಒಂದು ಸಂಗೀತದಂತೆ.. ಸಾಗರಿಯೇ... ಹಾಡಿನ ಸಾಲುಗಳು ಕೂಡ ಇದೀಗ ಪ್ರತಿಯೊಬ್ಬರಿಗೂ ಇಷ್ಟವಾಗಿವೆ. ಈ ಹಾಡಿನ ಸಾಹಿತ್ಯ ಬರೆದ ಕಲ್ಯಾಣ್‌ ಅವರು ಆ ಕುರಿಗಾಹಿಯ ದನಿಗೆ ಫಿದಾ ಆಗಿದ್ದು ಓದಿರುತ್ತೀರ.

ಇದೀಗ ಇಂತಹದ್ದೇ ಮತ್ತೊಂದು ಪ್ರತಿಭೆ ಬೆಳಕಿಗೆ ಬಂದಿದ್ದಾರೆ. ತಮಿಳಿನ ಹಿಟ್ ಹಾಡೊಂದನ್ನು ಸುಶ್ರಾವ್ಯವಾಗಿ ಹಾಡಿ ಸಂಗೀತ ನಿರ್ದೇಶಕ ಶಂಕರ್ ಮಹದೇವನ್ ಗಮನಸೆಳೆದಿದ್ದಾರೆ. ಕೇರಳ ಮೂಲದ ರಾಕೇಶ್ ಉನ್ನಿ ಎಂಬ ದಿನಗೂಲಿ ಕಾರ್ಮಿಕ ಹೊಲದಲ್ಲಿ ಕೂತು ತನ್ನ ಪಾಡಿಗೆ ತಾನು ಹಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲದಲ್ಲಿ ಹರಿದಾಡುತ್ತಿತ್ತು.

ಇದನ್ನು ನೋಡಿದ ಶಂಕರ್ ಮಹದೇವನ್ ಟ್ವೀಟ್ ಮಾಡಿ, "ಇಂತಹ ಪ್ರತಿಭೆಗಳನ್ನು ನೋಡಿದಾಗ ನಮ್ಮ ದೇಶದ ಬಗ್ಗೆ, ಸಂಸ್ಕೃತಿಯ ಬಗ್ಗೆ ಹೆಮ್ಮೆ ಅನ್ನಿಸುತ್ತದೆ. ಯಾರೀತ? ಇವರನ್ನು ಪತ್ತೆ ಹಚ್ಚುವುದು ಹೇಗೆ? ನಿಮ್ಮ ಸಹಾಯ ಬೇಕಾಗಿದೆ. ಅವರ ಜತೆಗೆ ಕೆಲಸ ಮಾಡಬೇಕೆಂದಿದ್ದೇನೆ" ಎಂದಿದ್ದರು.

ಬದ್ರಿನಾರಾಯಣ್ ಎಂಬುವವರು ಪ್ರತಿಕ್ರಿಯಿಸಿ, "ಇವರ ಹೆಸರು ಉನ್ನಿ. ಕೇರಳದ ನೂರಾನಾಡಿನವರು. ಅವರ ನಂಬರ್ 8086106928" ಎಂದು ಹಂಚಿಕೊಂಡಿದ್ದಾರೆ. ಮಹದೇವನ್ ಅವರ ಟ್ವೀಟ್‍ಗೆ ಅತ್ಯುತ್ತಮ ಪ್ರತಿಕ್ರಿಯೆಗಳು ಹರಿದುಬರುತ್ತಿವೆ. ಅಂತೂ ಎಲೆಮರೆಯಕಾಯಿಯಂತಿದ್ದ ಪ್ರತಿಭೆ ಬೆಳಕಿಗೆ ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌