ಆ್ಯಪ್ನಗರ

ಪ್ರೇಕ್ಷಕರನ್ನೂ ಲವ್‌ವಲ್ಲಿ ಬಿಳಿಸ್ತಾರಂತೆ ಶಾನ್ವಿ

ಡಾ.ರಾಜ್‌ ಕುಟುಂಬದ ಮತ್ತೊಂದು ಕೂಡಿ ಸೂರಜ್‌ ನಾಯಕನಾಗಿ ನಟಿಸುತ್ತಿರುವ 'ಅಖಿಲ್‌' ಚಿತ್ರಕ್ಕೆ ಶಾನ್ವಿ ಶ್ರೀವಾಸ್ತವ್‌ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

Vijaya Karnataka 2 Aug 2018, 11:31 am
* ಶರಣು ಹುಲ್ಲೂರು
Vijaya Karnataka Web shanvi-srivatsav


ಡಾ.ರಾಜ್‌ ಕುಟುಂಬದ ಮತ್ತೊಂದು ಕೂಡಿ ಸೂರಜ್‌ ನಾಯಕನಾಗಿ ನಟಿಸುತ್ತಿರುವ 'ಅಖಿಲ್‌' ಚಿತ್ರಕ್ಕೆ ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾದಲ್ಲಿ ಅವರು ಇನೋಸೆಂಟ್‌ ಆಗಿರುವ ಕ್ಯೂಟ್‌ ಪಾತ್ರದಲ್ಲಿ ನಟಿಸಲಿದ್ದಾರೆ.

ಅಖಿಲ್‌ ಸಿನಿಮಾದ ಮೂಲಕ ಡಾ.ರಾಜ್‌ ಕುಟುಂಬದ ಮತ್ತೊಂದು ಕೂಡಿ ಸದ್ದಿಲ್ಲದೇ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಿದೆ. ಈ ಚಿತ್ರಕ್ಕೆ ಶಾನ್ವಿ ಶ್ರೀವಾಸ್ತವ್‌ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಡಾ.ರಾಜ್‌ ಕುಟುಂಬದ ನಟರ ಜತೆ ಶಾನ್ವಿಎರಡನೇ ಬಾರಿಗೆ ಬಣ್ಣ ಹಚ್ಚುತ್ತಿದ್ದು, ಈ ಮೊದಲು ಶ್ರೀಮುರಳಿ ನಟನೆಯ 'ಮಫ್ತಿ'ಯಲ್ಲಿ ನಟಿಸಿದ್ದರು. ಹಾಗಾಗಿ ಸಹಜವಾಗಿಯೇ ಸಂಭ್ರಮದಲ್ಲಿದ್ದಾರೆ.

'ಪಾತ್ರದ ಬಗ್ಗೆ ಈಗಲೇ ಏನೂ ಹೇಳಲಾರೆ. ಆದರೆ, ಹೊಸ ಬಗೆಯ ಪಾತ್ರವನ್ನು ಅವರು ಮಾಡುತ್ತಿದ್ದಾರೆ. ಅದೊಂದು ಕ್ಯೂಟ್‌ ಆಗಿರುವಂಥ ಪಾತ್ರ. ಸಿನಿಮಾ ನೋಡಿದ ಪ್ರತಿ ಪ್ರೇಕ್ಷಕನನ್ನೂ ಅವರು ಲವ್‌ನಲ್ಲಿ ಬೀಳಿಸ್ತಾರೆ. ಅಂಥದ್ದೊಂದು ಪಾತ್ರ ಅದಾಗಿದೆ. ಕಥೆ ಕೇಳಿದ ತಕ್ಷಣವೇ ಶಾನ್ವಿ ಫಿದಾ ಆದರು' ಎನ್ನುವುದು ನಿರ್ದೇಶಕರ ಮಾತು.

ಕಥಾ ವಿಚಿತ್ರ ಸಿನಿಮಾದ ಮೂಲಕ ಭರವಸೆ ಮೂಡಿಸಿರುವ ಅನೂಪ್‌ ಆಂಟೋನಿ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದು, ಲವ್‌ಸ್ಟೋರಿ ಮತ್ತು ಆ್ಯಕ್ಷನ್‌ ಪ್ರಧಾನ ಸಿನಿಮಾ ಇದಾಗಿದೆ. ಈ ಚಿತ್ರಕ್ಕಾಗಿ ಶಾನ್ವಿ ಕೂಡ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹೇರ್‌ ಸ್ಟೈಲ್‌ ಮತ್ತು ಕಾಸ್ಟ್ಯೂಮ್‌ ವಿಶೇಷವಾಗಿ ಇರಲಿದೆಯಂತೆ. ಯಶ್‌, ದರ್ಶನ್‌ ಸೇರಿದಂತೆ ಕನ್ನಡದ ಬಹುತೇಕ ಸ್ಟಾರ್‌ ಜತೆ ನಟಿಸಿರುವ ಶಾನ್ವಿ ಮೊದಲ ಬಾರಿಗೆ ಹೊಸ ಹುಡುಗನ ಚಿತ್ರಕ್ಕೆ ಒಪ್ಪಿಕೊಂಡಿದ್ದಾರೆ.

ನಾನಾ ವಿಶೇಷಗಳನ್ನು ಹೊತ್ತು ಈ ಸಿನಿಮಾ ನಿರ್ಮಾಣ ಆಗಲಿದೆ. ಬೈಕ್‌ ರೇಸ್‌ ಕೂಡ ಪ್ರಧಾನ ಅಂಶವಾಗಿ ಬರಲಿದ್ದು, ಅದಕ್ಕಾಗಿ ಅಂತರಾಷ್ಟ್ರೀಯ ಮಟ್ಟದ ಬೈಕ್‌ ರೇಸ್‌ ಟ್ರ್ಯಾಕ್‌ ತಯಾರಿ ಮಾಡುವ ಉದ್ದೇಶವಿದೆ. 'ಇದೊಂದು ಕ್ಲಾಸ್‌ ಮತ್ತು ಮಾಸ್‌ ವಿಷಯಗಳನ್ನು ಹೊಂದಿರುವ ಸಿನಿಮಾ. ಈ ಹೊತ್ತಿನ ಯೂತ್ಸ್‌ ಇಷ್ಟಪಡುವಂತೆ ಚಿತ್ರಕಥೆ ಹೆಣೆಯಲಾಗಿದೆ. ಈವರೆಗೂ ಇಂಥಹ ಕಥೆಯು ಕನ್ನಡ ಸಿನಿಮಾ ರಂಗದಲ್ಲಿ ಅಪರೂಪ. ಹಾಗಾಗಿ ಜವಾಬ್ದಾರಿಯಿಂದ ಸಿನಿಮಾ ಮಾಡುತ್ತಿದ್ದೇವೆ' ಎನ್ನುವುದು ನಿರ್ದೇಶಕ ಅನೂಪ್‌ ಮಾತು.

ಇಂಥ ಕ್ಯೂಟ್‌ ಜೋಡಿಗಾಗಿಯೇ ವಿ.ಹರಿಕೃಷ್ಣ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸೆಪ್ಟಂಬರ್‌ನಲ್ಲಿ ಸಿನಿಮಾ ಸೆಟ್ಟೇರಲಿದೆ.

ಪಾತ್ರದ ಗುಟ್ಟು ಸದ್ಯಕ್ಕೆ ಬಿಟ್ಟು ಕೊಡಲಾರೆ. ಆದರೆ, ಅದೊಂದು ಕ್ಯೂಟ್‌ ಆಗಿರುವಂಥ ಕ್ಯಾರೆಕ್ಟರ್‌. ಶಾನ್ವಿ ಅದಕ್ಕೆ ಖಂಡಿತ ಮತ್ತಷ್ಟು ಜೀವ ತುಂಬುತ್ತಾರೆ.
ಅನೂಪ್‌ ಆಂಟೋನಿ, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌