ಆ್ಯಪ್ನಗರ

ಮೊಟ್ಟ ಮೊದಲ ಸಲ ಕನ್ನಡದಲ್ಲೇ ಡಬ್ಬಿಂಗ್ ಹೇಳಿದ ಶಾನ್ವಿ ಶ್ರೀವಾತ್ಸವ್

ನಟಿ ಶಾನ್ವಿ ಶ್ರೀವಾತ್ಸವ್ ಇದೇ ಮೊದಲ ಸಲ ಕನ್ನಡದಲ್ಲೇ ಡಬ್ಬಿಂಗ್ ಹೇಳಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಹೀರೋ ಆಗಿರುವ ಗೀತಾ ಚಿತ್ರದಲ್ಲಿ ಅಪ್ಪಟ ಕನ್ನಡ ಹೋರಾಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ.

Vijaya Karnataka Web 20 Sep 2019, 5:07 pm
ನಟಿ ಶಾನ್ವಿ ಶ್ರೀವಾತ್ಸವ್ ಈಗ ಕನ್ನಡದಲ್ಲಿ ಬಿಝಿಯಾಗಿರುವ ತಾರೆ. ಗೀತಾ, ಅವನೇ ಶ್ರೀಮನ್ನಾರಾಯಣ, ರವಿಚಂದ್ರ ಚಿತ್ರಗಳಲ್ಲಿ ಬಿಝಿಯಾಗಿದ್ದಾರೆ. ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ನಾಯಕ ನಟನಾಗಿರುವ ಗೀತಾ ಚಿತ್ರಕ್ಕಾಗಿ ಇದೇ ಮೊದಲ ಸಲ ಡಬ್ಬಿಂಗ್ ಹೇಳಿದ್ದಾರೆ.
Vijaya Karnataka Web shanvi-srivastav


ತನ್ನ ಪಾತ್ರಕ್ಕೆ ತಾನೇ ಡಬ್ಬಿಂಗ್ ಹೇಳುವುದರಿಂದ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗಬಹುದು ಎಂಬುದು ಶಾನ್ವಿಗೆ ಮನದಟ್ಟಾಗಿದೆ. ಹಾಗಾಗಿ ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ ಹೇಳಿದ್ದಾರೆ. ಆಕ್ಟಿಂಗ್ ಮತ್ತು ಡಬ್ಬಿಂಗ್‌ನಿಂದ ಕೆಲಸದಲ್ಲಿ ಪರಿಪೂರ್ಣತೆ ಸಿಗುತ್ತದೆ ಎಂದಿದ್ದಾರೆ. ತನಗೀಗ ಅಪ್ಪಟ ಕನ್ನಡ ಕಲಾವಿದೆ ಎಂಬ ಭಾವನೆ ಬಂದಿದೆಯಂತೆ. ಗೋಲ್ಡನ್ ಸ್ಟಾರ್ ಸಿನಿಮಾದಲ್ಲಿ ಗೋಕಾಕ್‌ ವರದಿಯ ಪ್ರಸ್ತಾಪ

ಈ ಹಿಂದೆ ರಮ್ಯಾ, ಪೂಜಾಗಾಂಧಿ, ರಾಗಿಣಿ ದ್ವಿವೇದಿ, ರಾಧಿಕಾ ಕುಮಾರಸ್ವಾಮಿ, ರಚಿತಾ ರಾಮ್ ಮುಂತಾದ ಕಲಾವಿದರು ಆರಂಭದ ದಿನಗಳಲ್ಲಿ ಡಬ್ಬಿಂಗ್ ಮಾಡುತ್ತಿರಲಿಲ್ಲ. ಬಳಿಕ ತಮ್ಮ ಪಾತ್ರಗಳಿಗೆ ತಾವೇ ಡಬ್ಬಿಂಗ್ ಹೇಳುವ ಮಟ್ಟಿಗೆ ಸಿದ್ಧರಾದರು.

ಇನ್ನು ಗೀತಾ ಸಿನಿಮಾದ ಕಥೆ ವಿಚಾರಕ್ಕೆ ಬರುವುದಾದರೆ, ಇದು 1980ರಲ್ಲಿ ನಡೆಯೋ ಕಥೆಯಾಗಿದೆ. ಆಗ ಗೋಕಾಕ್‌ ವರದಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು ಎಂಬ ಹೋರಾಟ ಜೋರಾಗಿತ್ತು. ಈ ಹೋರಾಟ ಈ ಸಿನಿಮಾದಲ್ಲಿ ಒಂದು ಭಾಗವಾಗಿದೆ. ಗಣೇಶ್‌ ಗೀತಾದಲ್ಲಿ ಅಪ್ಪಟ ಕನ್ನಡ ಹೋರಾಟಗಾರನಾಗಿ ಕಾಣಿಸಿಕೊಂಡಿದ್ದಾರೆ.

ಈ ಕಥೆಯನ್ನು ಮೊದಲಿಗೆ ಹೇಳಿದಾಗ ಅವರು, ಯಾರಿಗೂ ಬೇಸರವಾಗದಂತೆ ಸಿನಿಮಾವನ್ನು ಚಿತ್ರೀಕರಣ ಮಾಡಬೇಕು. ನಮ್ಮ ಸಿನಿಮಾದಿಂದ ಬೇರೆ ಭಾಷಿಕರಿಗೆ ತೊಂದರೆಯಾಗಬಾರದು ಎಂದು ಹೇಳಿದ್ದರು. ಆಮೇಲೆ ಸಿನಿಮಾದಲ್ಲಿ ಗೋಕಾಕ್‌ ವರದಿಯ ಬಗ್ಗೆ ಚರ್ಚೆ ಮಾಡಿದ್ದೇವೆ ಅಷ್ಟೇ. ಬೇರೆ ಯಾರಿಗೂ ಹರ್ಟ್‌ ಮಾಡಿಲ್ಲ'ಎನ್ನುತ್ತಾರೆ ನಿರ್ದೇಶಕ ವಿಜಯ್‌ ನಾಗೇಂದ್ರ.

'ನನ್ನದು ಈ ಸಿನಿಮಾದಲ್ಲಿ ಹಾರ್ಡ್‌ ಕೋರ್‌ ಕನ್ನಡಿಗನ ಪಾತ್ರ. ನಿರ್ದೇಶಕ ವಿಜಯ್‌ ನಾಗೇಂದ್ರ ತುಂಬಾ ರಿಸರ್ಚ್‌ ಮಾಡಿ ಈ ಕಥೆಯನ್ನು ಮಾಡಿದ್ದಾರೆ. ಸಿನಿಮಾ ಬಹಳ ಡಿಫ್ರೆಂಟ್‌ ಆಗಿ ಮೂಡಿ ಬಂದಿದೆ' ಎನ್ನುತ್ತಾರೆ ನಟ ಗಣೇಶ್‌. ಗೀತಾದಲ್ಲಿ ಗಣೇಶ್‌ಗೆ ಮೂವರು ನಾಯಕಿರಿದ್ದಾರೆ. ಕೋಲ್ಕತ್ತಾ, ಮೈಸೂರು, ಬೆಂಗಳೂರಿನ ಸುತ್ತಮುತ್ತ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಸೋಮವಾರ ಬಿಡುಗಡೆಯಾದ ಟೀಸರ್‌ ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಎಬ್ಬಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌